Desi Swara: ಕರ್ನಾಟಕ ಸಂಘ ಶಾರ್ಜಾ- ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ

"ಮಯೂರ ಸ್ಮರಣ ಸಂಚಿಕೆ'ಯನ್ನು ಬಿಡುಗಡೆಗೊಳಿಸಲಾಯಿತು

Team Udayavani, Dec 2, 2023, 1:40 PM IST

Desi Swara: ಕರ್ನಾಟಕ ಸಂಘ ಶಾರ್ಜಾ- ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ

ದುಬೈ: ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ನ.18ರಂದು ಶಾರ್ಜಾ ಈವಾನ್‌ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ, 21ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಕಾರಯಕಾರಿ ಸಮಿತಿಯ ಸರ್ವ ಸದಸ್ಯರು ಕನ್ನಡ ಧ್ವಜಾರೋಹಣ ಮಾಡಿ, ಜ್ಯೋತಿ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುಎಇಯ ವಿವಿಧ ತಂಡಗಳಾದ ಸಿಂಫೋನಿ ಮ್ಯೂಸಿಕ್‌ ಸ್ಕೂಲ್‌, ಬಿಲ್ಲವಾಸ್‌ ಫ್ಯಾಮಿಲಿ, ರಸ್‌ ಅಲ್‌ ಖೈಮಾ ಕರ್ನಾಟಕ ಸಂಘ, ನೃತ್ಯ ಕಣ್ಮಣಿಗಳು, ರಮಣ ಲಾಸ್ಯ, ಪದ್ಮಶಾಲಿ ಸಮುದಾಯ, ಸ್ಮೈಲ್‌ ಕ್ರಿಯೇಶನ್ಸ್‌, ಗೋಲ್ಡನ್‌ ಸ್ಟಾರ್‌ ಮ್ಯೂಸಿಕ್‌ ಶಾರ್ಜಾ ತಂಡಗಳಿಂದ ಆಕರ್ಷಕ ಜಾನಪದ ನೃತ್ಯ, ಮಂಗಳೂರಿನಿಂದ ಆಗಮಿಸಿದ ಗಾಯಕ ಮಹ್ಮದ್‌ ಇಕ್ಬಾಲ್‌, ಹರೀಶ್‌ ಶೇರಿಗಾರ್‌ ಮತ್ತು ಸನ್ನಿಧಿ ವಿಶ್ವನಾಥ್‌ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಸ್ಮರಣ ಸಂಚಿಕೆ ಬಿಡುಗಡೆ
ಶಾರ್ಜಾ ಕರ್ನಾಟಕ ಸಂಘದ ದ್ವೀದಶಮಾನೋತ್ಸವದ ಸವಿ ನೆನೆಪಿಗಾಗಿ ಗಣೇಶ್‌ ರೈ ಪ್ರಧಾನ ಸಂಪಾದಕತ್ವದಲ್ಲಿ, ಸ್ಮರಣ ಸಂಚಿಕೆ ಸಮಿತಿಯ ಆಶ್ರಯದಲ್ಲಿ ಮುದ್ರಣವಾಗಿದ್ದ “ಮಯೂರ ಸ್ಮರಣ ಸಂಚಿಕೆ’ಯನ್ನು ಬಿಡುಗಡೆಗೊಳಿಸಲಾಯಿತು.

ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ
ಕರ್ನಾಟಕ ಸಂಘ ಶಾರ್ಜಾದ ಪ್ರತಿಷ್ಠಿತ “ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ’ ಯನ್ನು ಸಮಾಜ ಸೇವೆಗಾಗಿ ಮೋಹನ್‌ ನರಸಿಂಹಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು.

ಅನಂತರ ಸುಗಂಧರಾಜ್‌ ಬೇಕಲ್‌, ಆರತಿ ಆಡಿಗ, ಜಸ್ಮಿತಾ ವಿವೇಕ್‌ ಅವರಿಗೆ “ವಿಶೇಷ ಗೌರವ ಪುರಸ್ಕಾರ’ದಿಂದ ಸಮ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಸಂಘ ಶಾರ್ಜಾದ ಸಲಹೆಗಾರರಾದ ಪ್ರವೀಣ್‌ ಕುಮಾರ್‌ ಶೆಟ್ಟಿ, ಹರೀಶ್‌ ಶೇರಿಗಾರ್‌, ಜೊಸೇಫ್ ಮಥಾಯಸ್‌, ರಾಮಚಂದ್ರ ಹೆಗ್ಡೆ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಸರ್ವೋತ್ತಮ್‌ ಶೆಟ್ಟಿ, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್‌ ನಾಗರಾಜಪ್ಪ, ರಸ್‌ ಅಲ್‌ ಖೈಮಾ ಕರ್ನಾಟಕ ಸಂಘದ ಅಧ್ಯಕ್ಷರು ಸಂತೋಷ್‌ ಹೆಗ್ಡೆ, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರು ಸತೀಶ್‌ ಪೂಜಾರಿ, ಉಪಾಧ್ಯಕ್ಷರು ವಿಶ್ವನಾಥ್‌ ಶೆಟ್ಟಿ, ಪೋಷಕರು ಮಾಕರ್‌ ಡೆನಿಸ್‌ ಈ ವೇಳೆ ವೇದಿಕೆಯಲ್ಲಿದ್ದರು. ಗಣೇಶ್‌ ರೈ ಸಭಾ ಕಾರ್ಯಕ್ರಮದ ನಿರೂಪಕರಾಗಿದ್ದರು.

ಮುಖ್ಯ ಅತಿಥಿಗಳಾಗಿದ್ದ ಇಂಡಿಯನ್‌ ಅಸೊಸಿಯೇಶನ್‌ ಶಾರ್ಜಾ ಅಧ್ಯಕ್ಷರಾದ ಅಡ್ವಕೇಟ್‌ ವೈ.ಎ.ರಹಿಂ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಎಲ್ಲ ಪ್ರಾಯೋಜಕರನ್ನು ಈ ವೇಳೆ ಗೌರವಿಸಲಾಯಿತು.

ಅನಿವಾಸಿ ಭಾರತೀಯರಿಗೆ ಆಯೊಜಿಸಲಾದ ರಾಷ್ಟ್ರ ಮಟ್ಟದ ದೇಹದಾಡ್ಯì ಸ್ಪರ್ಧೆಗೆ ಮುಖ್ಯ ತೀರ್ಪುಗಾರರಾಗಿ, ವಿಶೇಷ ಅಹ್ವಾನಿತ ಅತಿಥಿಯಾಗಿ ಮಂಗಳೂರಿನಿಂದ ಮಿಸ್ಟರ್‌ ಇಂಡಿಯಾ ಜಗದೀಶ್‌ ಪೂಜಾರಿಯವರು ಮತ್ತು ವಿನೋದ್‌ ಗೌಡ ರವರನ್ನು ಆಹ್ವಾನಿಸಲಾಗಿತ್ತು. ಜಗದೀಶ್‌ ಪೂಜಾರಿಯವರ ಸಾಧನೆಗೆ ಕರ್ನಾಟಕ ಸಂಘ ಶಾರ್ಜಾ ವತಿಯಿಂದ “ಮಯೂರ ಶ್ರೀ’ ಬಿರುದನ್ನು ನೀಡಿ ಸಮ್ಮಾನಿಸಿ ಗೌರವಿಸಲಾಯಿತು. ವಿನೋದ್‌ ಗೌಡ ಮತ್ತು ಮಹ್ಮದ್‌ ಇಕ್ಬಾಲ್‌ ಅವನ್ನು ಸಮ್ಮಾನಿಸಲಾಯಿತು.

ಯುಎಇ ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ “ಮಯೂರ ಶ್ರೀ 2023′ ಪ್ರಶಸ್ತಿಯನ್ನು ದೇಹದಾರ್ಢ್ಯ ಪಟು ರವಿಕುಮಾರ್‌ ಪೂಜಾರಿ ಪಡೆದರು, ದ್ವಿತೀಯ ಸುಮಂತ್‌ ಆಚಾರ್ಯ, ತೃತಿಯ ಸುದೀಶ್‌ ವಿಟ್ಲ ಮತ್ತು ಬೆಸ್ಟ್‌ ಪೋಸರ್‌ ರಕ್ಷಿತ್‌ ಕುಮಾರ್‌ ಪಡೆದುಕೊಂಡರು. ಆರತಿ ಆಡಿಗ, ದೀಪಾ ರೈ, ಆರ್‌.ಜೆ. ಎರೋಲ್‌ ಅವರು ಕಾರ್ಯಕ್ರಮ ನಿರೂಪಕರಾಗಿದ್ದರು.

*ವರದಿ: ಬಿ. ಕೆ. ಗಣೇಶ್‌ ರೈ, ದುಬೈ

ಟಾಪ್ ನ್ಯೂಸ್

ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ… ಆಸ್ಪತ್ರೆಗೆ ದಾಖಲು

ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ… ಆಸ್ಪತ್ರೆಗೆ ದಾಖಲು

Floods: ಮಳೆ, ಪ್ರವಾಹಕ್ಕೆ ತತ್ತರಿಸಿ ಹೋದ ಅಫ್ಘಾನಿಸ್ತಾನ, 200ಕ್ಕೂ ಅಧಿಕ ಜನರು ಮೃತ್ಯು

Floods: ಮಳೆ, ಪ್ರವಾಹಕ್ಕೆ ತತ್ತರಿಸಿ ಹೋದ ಅಫ್ಘಾನಿಸ್ತಾನ, 200ಕ್ಕೂ ಅಧಿಕ ಜನರು ಮೃತ್ಯು

10

ಪುಸ್ತಕದಲ್ಲಿ ʼಬೈಬಲ್ʼ ಪದ ಬಳಸಿದ್ದಕ್ಕೆ ಆಕ್ಷೇಪ: ನಟಿ ಕರೀನಾ ಕಪೂರ್‌ಗೆ ಕೋರ್ಟ್ ನೋಟಿಸ್

PAK ಅಣುಬಾಂಬ್‌ ಹೆಸರು ಹೇಳಿ ಯಾಕೆ ಭಯ ಪಡಿಸುತ್ತೀರಿ: ಕಾಂಗ್ರೆಸ್‌ ಗೆ ಪ್ರಧಾನಿ ತಿರುಗೇಟು

PAK ಅಣುಬಾಂಬ್‌ ಹೆಸರು ಹೇಳಿ ಯಾಕೆ ಭಯ ಪಡಿಸುತ್ತೀರಿ: ಕಾಂಗ್ರೆಸ್‌ ಗೆ ಪ್ರಧಾನಿ ತಿರುಗೇಟು

Chikkaballapur: ಎಸ್ಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಧರಣಿ ಕೂತ ಪೇದೆಗಳು

Chikkaballapur: ಎಸ್ಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಧರಣಿ ಕೂತ ಪೇದೆಗಳು

ಮುಂಗಡ ಹಣ ಪಡೆದು ವಾಪಸ್ ನೀಡದ ಆರೋಪ: ನಟ ಸಿಂಬು ವಿರುದ್ದ ಖ್ಯಾತ ನಿರ್ಮಾಪಕನಿಂದ ದೂರು

ಮುಂಗಡ ಹಣ ಪಡೆದು ವಾಪಸ್ ನೀಡದ ಆರೋಪ: ನಟ ಸಿಂಬು ವಿರುದ್ದ ಖ್ಯಾತ ನಿರ್ಮಾಪಕನಿಂದ ದೂರು

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

Desi Swara: ಹೊನ್ನುಡಿ- ಹೃದಯ ಶ್ರೀಮಂತಿಕೆ

Desi Swara: ಹೊನ್ನುಡಿ- ಹೃದಯ ಶ್ರೀಮಂತಿಕೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

11-mandya

Protest: ಕೆರಗೋಡು ಹನುಮ ಧ್ವಜ ವಿವಾದ; ಜೆಡಿಎಸ್, ಭಜರಂಗದಳ, ವಿ.ಹಿಂ.ಪ. ಪ್ರತಿಭಟನೆ

ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ… ಆಸ್ಪತ್ರೆಗೆ ದಾಖಲು

ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ… ಆಸ್ಪತ್ರೆಗೆ ದಾಖಲು

Floods: ಮಳೆ, ಪ್ರವಾಹಕ್ಕೆ ತತ್ತರಿಸಿ ಹೋದ ಅಫ್ಘಾನಿಸ್ತಾನ, 200ಕ್ಕೂ ಅಧಿಕ ಜನರು ಮೃತ್ಯು

Floods: ಮಳೆ, ಪ್ರವಾಹಕ್ಕೆ ತತ್ತರಿಸಿ ಹೋದ ಅಫ್ಘಾನಿಸ್ತಾನ, 200ಕ್ಕೂ ಅಧಿಕ ಜನರು ಮೃತ್ಯು

10

ಪುಸ್ತಕದಲ್ಲಿ ʼಬೈಬಲ್ʼ ಪದ ಬಳಸಿದ್ದಕ್ಕೆ ಆಕ್ಷೇಪ: ನಟಿ ಕರೀನಾ ಕಪೂರ್‌ಗೆ ಕೋರ್ಟ್ ನೋಟಿಸ್

10-mcc-bank

MCC Bank: ಆಡಳಿತ, ಸಿಬಂದಿ, ಗ್ರಾಹಕರ ಸೇವೆಯಿಂದ ಔನ್ನತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.