ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು.. ದೇವರಕೊಂಡಗೆ ರಶ್ಮಿಕಾ ಸ್ವೀಟ್ ಮೆಸೇಜ್?
Team Udayavani, Dec 19, 2023, 3:35 PM IST
ಹೈದರಾಬಾದ್: ರಶ್ಮಿಕಾ ಮಂದಣ್ಣ – ವಿಜಯಯ್ ದೇವರಕೊಂಡ ನಡುವೆ ಏನೋ ನಡೆಯುತ್ತಿದೆ ಎನ್ನುವ ಸುದ್ದಿ ಅಂದರೆ ಇಬ್ಬರು ರಿಲೇಷನ್ ನಲ್ಲಿದ್ದಾರೆ ಎನ್ನುವುದು ಕಳೆದ ಕೆಲ ವರ್ಷಗಳಿಂದ ಸಿನಿವಲಯದಲ್ಲಿ ಹರಿದಾಡುತ್ತಿರುವ ಟಾಪಿಕ್.
ʼಗೀತಾ ಗೋವಿಂದಂʼ ʼಡಿಯರ್ ಕಾಮ್ರೇಡ್ʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಬಳಿಕ ರಶ್ಮಿಕಾ – ದೇವರಕೊಂಡ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಜೊತೆಯಾಗಿ ಸುತ್ತಾಟ, ಪಾರ್ಟಿಗಳಲ್ಲಿ ಹಲವು ಬಾರಿ ಇಬ್ಬರು ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವಿನ ಡೇಟಿಂಗ್ ವಿಚಾರ ಸದ್ದು ಮಾಡಿದ್ದರೂ, ತಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇದಲ್ಲದೇ ಇತ್ತೀಚೆಗೆ ʼಅನಿಮಲ್ʼ ಸಿನಿಮಾದ ಪ್ರಚಾರದ ವೇಳೆ ಬಾಲಯ್ಯ ಅವರ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಅವರಿಗೆ ಕರೆ ಮಾಡಿದಾಗ ರಶ್ಮಿಕಾ ನಾಚಿ ನೀರಾಗಿದ್ದರು. ಇದೀಗ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರಿಗೆ ಮಾಡಲಾದ ಮೆಸೇಜ್ ಎಂದು ಹೇಳಲಾಗುತ್ತಿರುವ ವಿಚಾರವೊಂದು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ರಶ್ಮಿಕಾ ಅವರು ಇಂಗ್ಲೀಷ್ ನಲ್ಲಿ ಬರೆಯಲಾದ ಫೋಟೋ ಸ್ಟೋರಿಯೊಂದು ಹಾಕಿದ್ದರು. “ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ, ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು.” ಎಂದು ಹೃದಯದ ಇಮೋಜಿ ಹಾಕಿದ್ದರು.
ಇದು ರಶ್ಮಿಕಾ ಅವರು ದೇವರಕೊಂಡ ಅವರಿಗಾಗಿ ಮಾಡಿದ ಮೆಸೇಜ್ ಎಂದು ಹೇಳಲಾಗುತ್ತಿದೆ. ರಶ್ಮಿಕಾ ಅವರು ತನ್ನನ್ನು ಅರ್ಥ ಮಾಡಿಕೊಂಡ ದೇವರಕೊಂಡ ಅವರಿಗೆ ಥ್ಯಾಂಕ್ಯೂ ಹೇಳಿದ್ದಾರೆ. ಅದಕ್ಕಾಗಿ ಈ ರೀತಿ ಸ್ಟೋರಿಯ ಮೂಲಕ ಪೋಸ್ಟ್ ಮಾಡಿದ್ದಾರೆ ಎಂದು ಫ್ಯಾನ್ಸ್ ಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಸದ್ಯ ʼಅನಿಮಲ್ʼ ಗೆಲುವಿನ ಖುಷಿಯಲ್ಲಿರುವ ರಶ್ಮಿಕಾ ʼರೈನ್ ಬೋ ʼಹಾಗೂ ʼದಿ ಗರ್ಲ್ ಫ್ರೆಂಡ್ʼ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇವರಕೊಂಡ ಇತ್ತೀಚೆಗೆ ʼಖುಷಿʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ‘ಫ್ಯಾಮಿಲಿ ಸ್ಟಾರ್ʼ ಸಿನಿಮಾದಲ್ಲಿ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಫಾಹದ್ ಫಾಸಿಲ್ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ: ಸುದ್ದಿ ಕೇಳಿ ಥ್ರಿಲ್ ಆದ ಫ್ಯಾನ್ಸ್
Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್ ಡೇಟ್ ಮುಂದೂಡಿಕೆ?
Cinema: ಸಿಂಗಲ್ ಸ್ಕ್ರೀನ್ಗೆ ಪ್ರೇಕ್ಷಕರ ಬರ: ಇದೇ ಶುಕ್ರವಾರದಿಂದ 10 ದಿನ ಥಿಯೇಟರ್ ಬಂದ್
ನಾಯಕನ ಜೊತೆ ಜಗಳ: ರಿಲೀಸ್ಗೂ ಮುನ್ನ ಸಿನಿಮಾವನ್ನು ಆನ್ಲೈನ್ನಲ್ಲಿ ಲೀಕ್ ಮಾಡಿದ ನಿರ್ದೇಶಕ
Kollywood Actor: ದಳಪತಿ ವಿಜಯ್ ಬಳಿಕ ರಾಜಕೀಯದತ್ತ ಮತ್ತೊಬ್ಬ ಖ್ಯಾತ ಕಾಲಿವುಡ್ ನಟ?