Uv Fusion: ಕೌದಿ ಭಾವನೆಗಳ ಬೆಸುಗೆ


Team Udayavani, Dec 22, 2023, 7:15 AM IST

13-uv-fusion

“ಕೌದಿ’ ಹೊಲಿಯುವುದು ನಾಡಿನ ಸಾಂಪ್ರದಾಯಿಕ ಕಲೆ. ಹೆಣ್ಣುಮಕ್ಕಳ “ಕೌದಿ ಕಲೆ’ ಭಾರತದ ಬಹುತ್ವದ ಸಂಕೇತ. ಕೈ ಹೊಲಿಗೆ ಗ್ರಾಮೀಣ ಭಾಗದ ಒಂದು ಹವ್ಯಾಸದ ಕಸುಬು.

ಇದು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ. ಒಂದು ಕಡೆ ಬುಡಬುಡಕಿ ಜನಾಂಗದ ಮಹಿಳೆಯರು ಓಣಿ ಓಣಿಗಳಲ್ಲಿ ಹೋಗಿ “ಕೌದಿ’ ಹೊಲಿಸ್ತೀರೇನಮ್ಮ ಎಂದು ಕೂಗಿ ಕೇಳುತ್ತಿದ್ರು. ಮನೆಯಲ್ಲಿ ಹೆಚ್ಚು ಹಳೆಯ ಬಟ್ಟೆಗಳನ್ನು ನೀಡಿದರೆ ಡಬಲ್‌ ಕೌದಿ, ಸ್ವಲ್ಪ ಬಟ್ಟೆ ಕಡಿಮೆ ನೀಡಿದರೆ ಸಿಂಗಲ್‌ ಕೌದಿ ಹೊಲಿದು ಕೊಡುತ್ತಿದ್ದರು. ಒಂದು ಕೌದಿಗೆ 100ರಿಂದ 150 ರೂಪಾಯಿ ಪಡೆಯುತ್ತಿದ್ದರು. ಇನ್ನೊಂದು ಕಡೆ ಮನೆಯ ಅಜ್ಜಿಯೇ ಉಟ್ಟು ಬಿಟ್ಟ ಹಳೇ ಬಟ್ಟೆಗಳಿಂದ ತಾವೇ ಕೈಯಿಂದ ಹೊಲಿದು ಕೌದಿ ತಯಾರಿಸಿಕೊಳ್ಳುತ್ತಿದ್ದರು.

ನೆನಪುಗಳ ಸಾಗರ

ಬೇರೆ ಬೇರೆ ಬಟ್ಟೆಯ ತುಂಡುಗಳಿಂದ ಹೊಲಿದು ಮಾಡಿದ ದಪ್ಪನಾದ ಹೊದಿಕೆ. ಕೌದಿಯ ವಿಶೇಷತೆಯೆಂದರೆ ಅಮ್ಮನ ಹರಿದ ಸೀರೆ, ಅಪ್ಪನ ಮಾಸಿದ ಪಂಚೆ, ಅಕ್ಕನ ಲಂಗ, ಅಣ್ಣನ ಅಂಗಿ ಇವೆಲ್ಲಾ ವಸ್ತುಗಳಿಂದ ಕತ್ತರಿಸಿ ಕೈಯಿಂದ ಹೊಲಿದು ತಯಾರಿಸಿದ ಬಣ್ಣ ಬಣ್ಣದ ಕೌದಿ. ಕೌದಿ ಹೊದಿಕೆ ಅಷ್ಟೇ ಅಲ್ಲ. ಅದು ಭಾವನೆಗಳ ಬೆಸುಗೆ. ನೆನಪುಗಳ ಸಾಗರ. ಕೌದಿಯಲ್ಲಿ ಕೂಡಿದ ತುಂಡು ವಸ್ತುಗಳು ಒಂದೊಂದು ಕಥೆ ಹೇಳುತ್ತವೆ. ಹಳೆಯ ನೆನಪುಗಳನ್ನ ಕೆದಕುತ್ತದೆ. ಅಜ್ಜ ಅಜ್ಜಿಯ, ಅಣ್ಣ ತಮ್ಮ, ಅಕ್ಕ ತಂಗಿ, ಒಡನಾಟ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ರಾತ್ರಿ ಮಲಗುವಾಗ ನನಗೆ ಜಾಸ್ತಿ ಬೇಕು, ನನಗೆ ಜಾಸ್ತಿ ಬೇಕು ಎಂದು ಕೌದಿಗಾಗಿ ಜಗಳವಾಡುತ್ತಿದ್ದ ಬಾಲ್ಯದ ದಿನಗಳನ್ನ ನಾವು ನೀವು ಎಂದಾದರೂ ಮರೆಯೋದುಂಟೆ.

ಕೌದಿ ಕಲೆ ಹಳೆಯ ಕಸುಬು ನೀಜ. ಆದರೆ ಕೌದಿ ಬೇಸಗೆಯಲ್ಲಿ ತಣ್ಣನೆಯ, ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ. ಬಾಲ್ಯದ ಜೀವನದ ಹಳೆಯ ನೆನಪುಗಳನ್ನ ತೆರೆದಿಡುತ್ತದೆ. ಈಗ ಇಂತಹ ಗ್ರಾಮೀಣ ಕಲೆ ಮರೆಯಾಗುತ್ತಿದೆ. ಆಧುನಿಕ ಯುಗದಲ್ಲಿ ಮೆಶಿನ್‌ ಭರಾಟೆ ಮುಂದೆ, ಕೌದಿ ಹೊಲಿಯುವರ ಬದುಕು ಅತಂತ್ರವಾಗಿದೆ. ಆಳುವ ಸರಕಾರಗಳು ಈವರೆಗೂ ಕೂಡ ಇವರತ್ತ ಗಮನಹರಿಸದಿರುವುದು ವಿಪರ್ಯಾಸದ ಸಂಗತಿ.

ನಬಿ. ಆರ್‌.ಬಿ. ದೋಟಿಹಾಳ

ಕುಷ್ಟಗಿ, ಕೊಪ್ಪಳ

ಟಾಪ್ ನ್ಯೂಸ್

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Dance: ಬಸಣ್ಣನ ಡ್ಯಾನ್ಸು

12-uv-fusion

Smile: ಕಷ್ಟ – ಸುಖದ ಜೀವನ… ನಗು ನಗುತಾ ಸಾಗಿ

11-uv-fusion

UV Fusion: ಕಡಲ ಕುವರರೇ, ನಿಮಗೊಂದು ಸಲಾಂ!

10-uv-fusion

Festival: ಊರ ಹಬ್ಬ

9-uv-fusion

Goal: ಬದಲಾವಣೆ ನಮ್ಮ ಗುರಿಯತ್ತ ಸಾಗುವಂತಿರಲಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.