ದಾನಿಗಳ ವೀರ್ಯ ಮೂಲಕ ಮಗು ಪಡೆಯಲು ಅವಕಾಶ? ಸುಪ್ರೀಂ ಕೋರ್ಟ್ಗೆ ಕೇಂದ್ರ ಸರಕಾರದ ಅರಿಕೆ
Team Udayavani, Jan 11, 2024, 1:38 AM IST
ಹೊಸದಿಲ್ಲಿ: ದಾನಿಗಳ ವೀರ್ಯ ಅಥವಾ ಮಹಿಳೆಯ ಅಂಡಾಣುವಿನಿಂದ ಬಾಡಿಗೆ ತಾಯಿ ಮೂಲಕ ಮಗು ಪಡೆಯುವುದಕ್ಕೆ ಹೇರಿರುವ ನಿಷೇಧ ಪುನರ್ ಪರಿಶೀಲನೆ ಮಾಡಲಾಗುತ್ತದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ತಜ್ಞರು ಮತ್ತು ಕಾನೂನು ಪರಿಣತರ ಜತೆಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ನ್ಯಾ| ಬಿ.ವಿ. ನಾಗರತ್ನ ಮತ್ತು ನ್ಯಾ| ಸಂಜಯ್ ಕರೋ ಲ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಅರಿಕೆ ಮಾಡಿದ್ದಾರೆ.
2023ರ ಮಾ. 14ರಂದು ಕೇಂದ್ರ ಸರಕಾರವು ಬಾಡಿಗೆ ತಾಯ್ತನ (ನಿಯಂತ್ರಣ) ತಿದ್ದುಪಡಿ ಕಾಯ್ದೆಯಲ್ಲಿ ಮಕ್ಕಳನ್ನು ಹೊಂದಲು ಬಯಸುವ ಪತಿಯ ವೀರ್ಯ, ಪತ್ನಿಯ ಅಂಡಾಣುವನ್ನು ಬಾಡಿಗೆ ತಾಯಿಗೆ ನೀಡಿ ಮಗುವನ್ನು ಹೊಂದಬೇಕು, ಬೇರೆ ದಾನಿಗಳಿಂದ ಪಡೆದ ಅಂಶವನ್ನು ಬಳಸು ವಂತಿಲ್ಲ ಹಾಗೂ ವಿಧವೆ ಬಾಡಿಗೆ ತಾಯಿ ಯು ದಾನಿಗಳ ಅಂಶದಿಂದಲೇ ಮಗು ಹೇರಬೇಕೆಂದು ತಿದ್ದುಪಡಿ ತಂದಿತ್ತು.
ಮರು ಪರಿಶೀಲನೆ ಏಕೆ ?: ಆರೋಗ್ಯ ಸಮಸ್ಯೆ ಇರುವ ಕೆಲವು ದಂಪತಿಯಲ್ಲಿ ವೀರ್ಯ, ಅಂಡಾಣುವನ್ನು ನೀಡಿ ಮಗು ಪಡೆಯಲು ಸಾಧ್ಯವಿಲ್ಲ. ಅಂಥ ಸಂದ ರ್ಭಗಳಲ್ಲಿ ದಾನಿಗಳ ನೆರವು ಬೇಕಾಗುತ್ತ ದೆ. ಆದರೆ ಸರಕಾರ ಅವಕಾಶ ನೀಡದ ಹಿನ್ನೆಲೆಯಲ್ಲಿ ಪೋಷಕರಾಗುವ ಅಭಿಲಾ ಶೆಗಳೇ ಮುದುಡಿ ಹೋಗಿವೆ ಎಂದು ಸುಪ್ರೀಂನಲ್ಲಿ ಅರ್ಜಿ ದಾಖಲಾಗಿದ್ದ ಕಾರ ಣ ಮರು ಪರಿಶೀಲನೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!
J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ
Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ
ತಮಿಳುನಾಡಿನಲ್ಲಿ ಖಾಸಗಿ ಬಸ್ ಅಪಘಾತ: ನಾಲ್ವರು ಮೃತ್ಯು, 20 ಕ್ಕೂ ಹೆಚ್ಚು ಮಂದಿ ಗಾಯ
ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ
MUST WATCH
ಹೊಸ ಸೇರ್ಪಡೆ
Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ
Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ
Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!
J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ
Naveen Patnaik ಅವರಿಗೆ ಬೀಳ್ಕೊಡುಗೆ ನೀಡಲು ಒಡಿಶಾ ಜನ ಸಜ್ಜು: ಜೆ.ಪಿ.ನಡ್ಡಾ