Koppala; ಶೆಟ್ಟರ್ ಆಡಿದ ನುಡಿಮುತ್ತು ಗಮನಿಸಿ ಎಂಎಲ್ ಸಿ ಮಾಡಿದ್ದೆವು: ಡಿಕೆ ಶಿವಕುಮಾರ್
Team Udayavani, Jan 27, 2024, 5:29 PM IST
ಕೊಪ್ಪಳ: ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಗೆ ಬಿಜೆಪಿಯವರಿಂದಾದ ಅನ್ಯಾಯದಿಂದ ಬಂದಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಕೊಟ್ಟಿದ್ದೆವು, ಗೆಲ್ಲುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಬಹಳ ಅಂತರದಿಂದ ಸೋತರು. ಮಾಜಿ ಸಿಎಂ ಬಂದರೆಂದು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಮಾಡಿದ್ದೆವು. ಬಿಜೆಪಿ ಬಗ್ಗೆ ಆಡಿದ ಮಾತು, ನುಡಿದಂತಹ ನುಡಿಮುತ್ತು ಗಮನಿಸಿ ಎಂಎಲ್ ಸಿ ಮಾಡಿದ್ದೆವು. ಆದರೆ ಈಗ ಪಕ್ಷ ಬಿಟ್ಟು ಹೋದರು. ಸಿಎಂ, ಡಿಸಿಎಂ ಆದವರು ನಮ್ಮ ಮನೆಗೆ ಬಂದರು ಎಂದುಕೊಂಡಿದ್ದೆವು. ಆದರೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋದರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಯಾವಾಗಲೂ ನಿಂತ ನೀರಲ್ಲ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ, ಬರುತ್ತಾರೆ. ಹೋಗುವುದು, ಬರುವುದು ಸಾಮಾನ್ಯ ವಿಚಾರ. ಆದರೆ ಯಾರೇ ಪಕ್ಷಕ್ಕೆ ಬರುವಾಗ ಪೂರ್ವಾಪರ ತಿಳಿದುಕೊಂಡು ಸೇರಿಸಿಕೊಳ್ಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದ್ದಾರೆ ಎಂದರು.
ತುಂಗಭದ್ರಾ ಸಮಾನಾಂತರ ಜಲಾಶಯ ವಿಚಾರಕ್ಕೆ ಮಾತನಾಡಿ, ಸಮಾನಾಂತರ ಜಲಾಶಯ ನಿರ್ಮಾನಕ್ಕೆ ಸರಕಾರ ಬದ್ಧವಿದೆ. ಆಂಧ್ರಪ್ರದೇಶ, ತೆಲಂಗಾಣ ಸಿಎಂಗಳಿಗೆ ಪತ್ರ ಬರೆದಿದ್ದೇನೆ. ಮೂರು ರಾಜ್ಯದ ಸಚಿವರು ತೀರ್ಮಾನಕ್ಕೆ ಬರೋಣ ಎಂದಿದ್ದಾರೆ. ತೆಲಂಗಾಣ ರಾಜ್ಯದವರು ಚುನಾವಣಾ ಬ್ಯೂಸಿಯಲ್ಲಿ ಇದ್ದಾರೆ. ಹೀಗಾಗಿ ನಮಗೆ ಎರಡೂ ರಾಜ್ಯದವರು ಸಮಯ ಕೊಟ್ಟಿಲ್ಲ. ಸುಖಾಸುಮ್ಮನೆ 30 ಟಿಎಂಸಿ ನೀರು ಕಳೆದುಕೊಳ್ತಿದ್ದೇವೆ. ಇದು ಕರ್ನಾಟಕ ರಾಜ್ಯಕ್ಕೆ ದೊಡ್ಡ ನಷ್ಟ. ಸಮಾನಾಂತರ ಜಲಾಶಯ ಕಟ್ಟಬೇಕೆಂದು ಬಹಳ ದಿನದ ಕನಸು. ಬಹಳ ವರ್ಷದಿಂದ ಸಾವಿರಾರು ಜನರು ಹೋರಾಟ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಅಧಿವೇಶನದಲ್ಲಿ ಮಾತಾಡಿದ್ದಾರೆ ಎಂದರು.
ಗವಿ ಮಠದ ಇತಿಹಾಸ ನಾನು ಕೇಳಿದ್ದೆ. ಬಹಳ ದಿನದ ಆಸೆ, ತುಡಿತವಿತ್ತು. ಈ ಭಾಗದ ನಾಯಕರುಗಳು ಬರಲು ಬಹಳ ಒತ್ತಾಯ ಮಾಡಿದರು. ಹೀಗಾಗಿ ನಾನು ಗವಿಸಿದ್ದೇಶ್ವರ ಜಾತ್ರೆಗೆ ಬಂದಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಕ್ರಾಂತಿ ನಡೆಯುತ್ತಿದೆ. ಶ್ರೀಗಳಿಂದ ಕೊಪ್ಪಳದಲ್ಲಿ ಬಹಳ ಬದಲಾವಣೆಯಾಗುತ್ತಿದೆ. ಈ ಭಾಗದ ಜನಕ್ಕೆ ಗವಿ ಶ್ರೀಗಳು ಶಕ್ತಿ ತುಂಬಿದ್ದಾರೆ. ಸರ್ಕಾರದಿಂದಲೂ ಮಠಕ್ಕೆ ಶಕ್ತಿ ತುಂಬಲು ಬಂದಿದ್ದೇನೆ. ರಾಜ್ಯದ ಬೃಹತ್ ಕಾರ್ಯಕ್ರಮಗಳಲ್ಲಿ ಇದೊಂದು ದೊಡ್ಡ ಧಾರ್ಮಿಕ ಜಾತ್ರೆ. ಜನರ ಭಾವನೆ, ನಂಬಿಕೆ ಜೊತೆಗೆ ಇದ್ದೇನೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಗವಿ ಮಠಕ್ಕೆ ಮಂಜೂರಾದ ಹಣವನ್ನು ಕಾಂಗ್ರೆಸ್ ತಡೆಹಿಡಿದಿದೆ ಎಂಬ ಆರೋಪಕ್ಕೆ ಮಾತನಾಡಿದ ಅವರು, ಆರೋಪ ಮಾತನಾಡುವುದು ಮುಖ್ಯವಲ್ಲ, ಜೋಬಲ್ಲಿ ದುಡ್ಡು ಬಂದರೆ ಮಾತಾಡಬೇಕು. ಐದು ಗ್ಯಾರಂಟಿ ಕೊಟ್ಟಿದ್ದೇವೆ, ಜನರಿಗೆ ಉಪಯೋಗವಾಗುತ್ತಿದೆ. ಬಿಜೆಪಿಯವರು ಆದೇಶ ಮಾಡಿದ್ದಾರೆ, ಮಠಕ್ಕೆ ಹಣ ಕೊಟ್ಟಿಲ್ಲ. ಐದು ಗ್ಯಾರಂಟಿ ಅವರು ಭಾವನೆ ಮೇಲೆ ಹೋಗುತ್ತಿದ್ದಾರೆ ಎಂದರು.
ನಿಗಮ ಮಂಡಳಿ ಸ್ಥಾನ ಬಹಳ ಜನ ಬೇಡ ಅಂದಿದ್ದಾರೆ. ಬಹಳ ಜನರು ಅಧ್ಯಕ್ಷ ಸ್ಥಾನ ಬೇಡ ಅಂದಿದ್ದಾರೆ. ಬೇಡ ಎಂದವರನ್ನ ಕರೆಸಿ ಮಾತಾಡಿ ಸರಿ ಮಾಡುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ
Kushtagi: ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳವು
ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರಿಗೆ ಬ್ಯಾಂಕ್ ಸಿಬ್ಬಂದಿಗಳಿಂದ ಕಿರುಕುಳ, ಪ್ರತಿಭಟನೆ
ಕುಕನೂರು: ಸೌಕರ್ಯವಿಲ್ಲದೇ ಹಮಾಲರ ಕಾಲೋನಿ ಅನಾಥ!
3ನೇ ಸೆಮಿಸ್ಟರ್ ಸಮಾಜಶಾಸ್ತ್ರ ಪರೀಕ್ಷೆಗೆ 1ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ವಿತರಣೆ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್