Australian Open Women’s Singles: ಸಬಲೆಂಕಾಗೆ ಸತತ 2ನೇ ಪ್ರಶಸ್ತಿ ಸಂಭ್ರಮ
Team Udayavani, Jan 27, 2024, 11:37 PM IST
ಮೆಲ್ಬರ್ನ್: ಬೆಲರೂಸ್ನ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ವನಿತಾ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರದ ಫೈನಲ್ನಲ್ಲಿ ಅವರು ಚೀನದ ಜೆಂಗ್ ಕ್ವಿನ್ವೆನ್ ವಿರುದ್ಧ 6-3, 6-2 ಅಂತರದ ಸುಲಭ ಜಯ ಸಾಧಿಸಿದರು. ಮೊದಲ ಸಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಸುತ್ತಿಗೆ ನೆಗೆದ ಜೆಂಗ್ ಇತಿಹಾಸ ನಿರ್ಮಿಸುವ ಅವಕಾಶದಿಂದ ವಂಚಿತರಾದರು.
ದ್ವಿತೀಯ ಶ್ರೇಯಾಂಕದ, 25 ವರ್ಷದ ಅರಿನಾ ಸಬಲೆಂಕಾ 13 ತಿಂಗಳ ಅವಧಿಯ 3 ಗ್ರ್ಯಾನ್ಸ್ಲಾಮ್ ಫೈನಲ್ಗಳಲ್ಲಿ ಎರಡನ್ನು ಗೆದ್ದ ಸಾಧನೆಗೈದರು. ಇದು ಅವರಿಗೆ ಒಲಿದ 2ನೇ ಗ್ರ್ಯಾನ್ಸ್ಲಾಮ್ ಕಿರೀಟ. ಎರಡೂ “ಮೆಲ್ಬರ್ನ್ ಪಾರ್ಕ್’ನಲ್ಲೇ ಒಲಿದದ್ದು ವಿಶೇಷ.
ಅರಿನಾ ಸಬಲೆಂಕಾ 2023ರ ಯುಎಸ್ ಓಪನ್ ಕ್ವಾರ್ಟರ್ ಫೈನಲ್ನಲ್ಲೂ ಜೆಂಗ್ ಕ್ವಿನ್ವೆನ್ ವಿರುದ್ಧ ಜಯ ಸಾಧಿಸಿದ್ದರು. ಫೈನಲ್ನಲ್ಲಿ ಕೊಕೊ ಗಾಫ್ಗೆ ಶರಣಾಗಿ ಪ್ರಶಸ್ತಿ ವಂಚಿತ ರಾಗಬೇಕಾಯಿತು. ಇನ್ನೊಂದೆಡೆ, 2023ರ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದೇ ಜೆಂಗ್ ಅವರ ಈವರೆಗಿನ ಅತ್ಯುತ್ತಮ ಗ್ರ್ಯಾನ್ಸ್ಲಾಮ್ ಸಾಧನೆ ಆಗಿತ್ತು.
ಒಂದೂ ಸೆಟ್ ಸೋಲಲಿಲ್ಲ!
ಅರಿನಾ ಸಬಲೆಂಕಾ 2012- 2013ರ ಬಳಿಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ. ಅಂದು ವಿಕ್ಟೋರಿಯಾ ಅಜರೆಂಕಾ ಈ ಸಾಧನೆಗೈದಿದ್ದರು. ಅಜರೆಂಕಾ ಕೂಡ ಬೆಲರೂಸ್ನವರೇ ಎಂಬುದು ವಿಶೇಷ.
ಹಾಗೆಯೇ, ಸಬಲೆಂಕಾ ಒಂದೂ ಸೆಟ್ ಕಳೆದುಕೊಳ್ಳದೆ ಆಸ್ಟ್ರೇಲಿಯನ್ ಓಪನ್ ಕಿರೀಟ ಏರಿಸಿಕೊಂಡ ಅಪ ರೂಪದ ಸಾಧಕಿ ಎನಿಸಿದರು. ಲಿಂಡ್ಸೆ ಡ್ಯಾವನ್ಪೋರ್ಟ್, ಮರಿಯಾ ಶರಪೋವಾ, ಸೆರೆನಾ ವಿಲಿಯಮ್ಸ್ ಮತ್ತು ಆ್ಯಶ್ಲಿ ಬಾರ್ಟಿ ಈ ಯಾದಿಯ ಇತರ ಆಟಗಾರ್ತಿಯರು.
ಸತತ 14 ಜಯದ ಸಾಧನೆ
ಇದು “ಮೆಲ್ಬರ್ನ್ ಪಾರ್ಕ್’ನಲ್ಲಿ ಸಬಲೆಂಕಾ ಅವರ ಸತತ 14ನೇ ಗೆಲುವಿನ ಸಂಭ್ರಮ. “ಕಳೆದ ಎರಡು ವಾರಗಳು ನನ್ನ ಪಾಲಿನ ಅತ್ಯಂತ ಸಂಭ್ರಮದ ದಿನಗಳಾಗಿದ್ದವು. ನಾನಿಲ್ಲಿ ಮತ್ತೂಮ್ಮೆ ಟ್ರೋಫಿ ಗೆಲ್ಲುತ್ತೇನೆಂದು ಭಾವಿಸಿರಲೇ ಇಲ್ಲ. ಈ ಸಂದರ್ಭದಲ್ಲಿ ನಾನು ಜೆಂಗ್ ಕ್ವಿನ್ವೆನ್ಗೆ ಅಭಿನಂದನೆ ಹೇಳಲು ಬಯಸುತ್ತೇನೆ. ಅವರ ಆಟವೂ ಅತ್ಯುತ್ತಮ ಮಟ್ಟದಲ್ಲಿತ್ತು. ಆದರೆ ಫೈನಲ್ನಲ್ಲಿ ಸೋಲುವುದನ್ನು ನಿಜಕ್ಕೂ ಸಹಿಸಿಕೊಳ್ಳಲಾಗದು. ಆದರೆ ಜೆಂಗ್ ಯುವ ಆಟಗಾರ್ತಿ. ಅವರ ಪಾಲಿಗೆ ಇನ್ನಷ್ಟು ಫೈನಲ್ಗಳು ಎದುರಾಗಲಿ, ಗೆಲುವು ಒಲಿಯಲಿ’ ಎಂದು ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್