Lucknow: ತಂದೆಯ ಆಸ್ತಿ ವಿಚಾರ; ವಿದ್ಯಾರ್ಥಿಯನ್ನು ಎಸ್ ಯುವಿಯಲ್ಲಿ ಅಪಹರಿಸಿ ಚಿತ್ರಹಿಂಸೆ
Team Udayavani, Apr 11, 2024, 12:13 PM IST
ಲಕ್ನೋ: ಖಾಸಗಿ ಕಾಲೇಜಿನ 20 ವರ್ಷದ ವಿದ್ಯಾರ್ಥಿಯನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ವಿದ್ಯಾರ್ಥಿಯನ್ನು ಎಸ್ಯುವಿಯಲ್ಲಿ ಸೆರೆ ಹಿಡಿದು ಚಿತ್ರಹಿಂಸೆ ನೀಡಿ ಬಕ್ಷಿ-ಕಾ-ತಲಾಬ್ (ಬಿಕೆಟಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುತ್ತಿದ್ದಾರೆ.
ಅಪರಾಧದ ಹಿಂದಿನ ಉದ್ದೇಶವು ಆಸ್ತಿ ವಿಚಾರದ ಸಮಸ್ಯೆಗೆ ಸಂಬಂಧಿಸಿದಂತೆ ಸಂತ್ರಸ್ತ ಉತ್ಕರ್ಷ್ ಸಿಂಗ್ ನ ತಂದೆಯೊಂದಿಗಿನ ಹಳೆಯ ಜಗಳವು ಎಂದು ಹೇಳಲಾಗುತ್ತದೆ.
ಉತ್ಕರ್ಷ್ ಅವರು ಓದುತ್ತಿದ್ದ ಖಾಸಗಿ ಕಾಲೇಜು ಸಮೀಪ ಬುಧವಾರ ಎಸ್ಯುವಿಯಲ್ಲಿದ್ದ ವ್ಯಕ್ತಿಗಳು ಹಿಂಬಾಲಿಸಿದ್ದಾರೆ. ಸೀತಾಪುರದ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ:Accident: ನಿಶ್ಚಿತಾರ್ಥ ದಿನದಂದೇ ಭೀಕರ ಅಪಘಾತದಲ್ಲಿ ಕೊನೆಯುಸಿರೆಳೆದ ನಟ ಸೂರಜ್!
“ನಾನು ಬೆಳಿಗ್ಗೆ 8 ಗಂಟೆಗೆ ಲಕ್ನೋಗೆ ಹೊರಟೆ, 9 ಗಂಟೆಗೆ ಬಿಕೆಟಿಗೆ ಬಂದೆ. ಬಸ್ ನಿಂದ ಇಳಿದ ನಂತರ ಸ್ವಲ್ಪ ಸಮಯದ ನಂತರ ಎಸ್ಯುವಿ ನನ್ನ ಬಳಿ ನಿಂತಿತು. ಅದರಲ್ಲಿದ್ದವರು ನನ್ನನ್ನು ಹಿಡಿದು ಬಲವಂತವಾಗಿ ಎಸ್ಯುವಿ ಒಳಗೆ ಹಾಕಿದರು. ನನ್ನ ಬಟ್ಟೆಗಳನ್ನು ಹರಿದು ಹಾಕಿದರು. ನಾನು ಬೊಬ್ಬೆ ಹಾಕಬಾರದು ಎಂದು ನನ್ನ ತಲೆಗೆ ಗನ್ ಹಾಕಿ ಬೆದರಿಕೆ ಹಾಕಿದರು. ನಾನು ರಾಮ್ ನರೇಶ್ ಮತ್ತು ಅವನ ಮಕ್ಕಳಾದ ಆಶಿಶ್ ಮತ್ತು ಅರವಿಂದ್ ಮತ್ತು ಅವರ ಇಬ್ಬರು ಸಹಚರರನ್ನು ಗುರುತಿಸಿದೆ. ಅವರು ಸೀತಾಪುರದಿಂದ ಬಂದವರು” ಎಂದು ಉತ್ಕರ್ಷ್ ಪೊಲೀಸರಿಗೆ ತಿಳಿಸಿದ್ದಾರೆ.
“ಅವರು ನನ್ನ ಜೀವನವನ್ನು ಕೊನೆಗೊಳಿಸಲು ಉದ್ದೇಶಿಸಿರುವಂತೆ ತೋರುತ್ತಿದ್ದರಿಂದ ನಾನು ಬದುಕುಳಿಯುವ ಎಲ್ಲಾ ಭರವಸೆ ಕಳೆದುಕೊಂಡಿದ್ದೆ. ನಾನು ಎಸ್ಯುವಿಯಲ್ಲಿ ಕಬ್ಬಿಣದ ರಾಡನ್ನು ಗಮನಿಸಿದೆ. ಅವರು ವಾಹನವನ್ನು ನಿಲ್ಲಿಸಿದ ಬಳಿಕ ನಾನು ರಾಡ್ ಬಳಸಿ ಹಿಂದಿನ ಕಿಟಕಿಯನ್ನು ಒಡೆದು ಹಾಕಿ ಅದರ ಮೂಲಕ ತಪ್ಪಿಸಿಕೊಂಡೆ” ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!