SP, BSP ಮೋದಿ ಹಠಾವೋ ಅಂತಿವೆ; ನಾನು ಗರೀಬೀ ಹಠಾವೋ ಅಂತೇನೆ
Team Udayavani, Jan 2, 2017, 3:19 PM IST
ಲಕ್ನೋ : “ಎಸ್ಪಿ, ಬಿಎಸ್ಪಿ ಪಕ್ಷಗಳು ಮೋದಿ ಹಠಾವೋ ಅಂತ ಹೇಳುತ್ತಿವೆ; ಆದರೆ ನಾನು ಗರೀಬಿ ಹಠಾವೋ, ಭಷ್ಟಾಚಾರ್ ಹಠಾವೋ ಅಂತ ಹೇಳುತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿ ನಡೆದ ಪರಿವರ್ತನ್ ರಾಲಿಯಲ್ಲಿ ಅಭೂತಪೂರ್ವ ಜನಸಮಾವೇಶವನ್ನು ಉದ್ದೇಶಿಸಿ ಕಿವಿಗಡಚಿಕ್ಕುವ ಕರತಾಡನದ ನಡುವೆ ಹೇಳಿದರು.
ಉತ್ತರ ಪ್ರದೇಶದ ಅಭಿವೃದ್ದಿಕ್ಕಾಗಿ ಕೇಂದ್ರ ಸರಕಾರ 2.50 ಲಕ್ಷ ಕೋಟಿ ರೂ. ಕೊಟ್ಟರೂ ಆಳುವ ಸಮಾಜವಾದಿ ಪಕ್ಷ ಚಿಕ್ಕಾಸಿನ ಅಭಿವೃದ್ಧಿಯನ್ನು ಮಾಡಿಲ್ಲ; ಜನರಿಗೆ ಯಾವುದೇ ಪ್ರಯೋಜನವನ್ನು ದೊರಕಿಸಿಕೊಟ್ಟಿಲ್ಲ; ಹೀಗಿರುವ ರಾಜ್ಯದಲ್ಲಿ ಬದಲಾವಣೆ ಆಗಬೇಕಾಗಿರುವುದು ಅಗತ್ಯ ಮತ್ತು ಅನಿವಾರ್ಯ; ಆದುದರಿಂದ ಜನರೇ ಆ ಬದಲಾವಣೆಯನ್ನು ತರಬೇಕು ಎಂದು ಮೋದಿ ಹೇಳಿದರು.
“ಎಸ್ಪಿ, ಬಿಎಸ್ಪಿಗಳು ಯಾವತ್ತೂ ಪರಸ್ಪರ ಕಚ್ಚಾಡುವ ಪಕ್ಷಗಳು; ಆದರೆ ಅವೀಗ ಒಂದಾಗಿವೆ ಮತ್ತು ಮೋದಿ ಹಠಾವೋ ಮಂತ್ರವನ್ನು ಜಪಿಸುತ್ತಿವೆ, ಕಾರಣ ಚುನಾವಣೆಗಳು ಈಗ ಹತ್ತಿರವಾಗಿವೆ; ನಾನು ರಾಜ್ಯದ ಜನರಿಗೆ ಕೊಡುವ ಉತ್ತರವೇನೆಂದರೆ “ಗರೀಬೀ ಹಠಾವೋ, ಭ್ರಷ್ಟಾಚಾರ್ ಹಠಾವೋ, ಪರಿವರ್ತನ್ ಲಾವೋ’ ಎಂದು ಮೋದಿ ಹೇಳಿದರು.
ನಾನು ಈ ವರೆಗೆ ಭಾಗವಹಿಸಿರುವ ರಾಜಕೀಯ ರಾಲಿಗಳಲ್ಲಿ ಇಷ್ಟೊಂದು ದೊಡ್ಡ ಜನಸಮೂಹ ಸೇರಿರುವುದನ್ನು ಎಲ್ಲಿಯೂ ಕಂಡಿಲ್ಲ; ಇಲ್ಲಿನ ಅಪಾರ ಜನರಾಶಿಯನ್ನು ಕಂಡು ನಾನು ಆನಂದ ತುಂದಿಲನಾಗಿದ್ದೇನೆ; ಜನರು ಬದಲಾವಣೆ ಬಯಸುವುದನ್ನು ಕಾಣುತ್ತಿದ್ದೇನೆ. ಆದುದರಿಂದ ಉತ್ತರ ಪ್ರದೇಶದ ಮತದಾರರು ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕುವರೆಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ