ಬಜೆಟ್ನಲ್ಲೂ ಕೈ ಆಡಿಸುವೆ: ಕಿರಣ್ ಬೇಡಿ ಹೊಸ ವಿವಾದ
Team Udayavani, Jan 11, 2017, 3:45 AM IST
ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿರುವ ಉಪರಾಜ್ಯಪಾಲೆ ಕಿರಣ್ ಬೇಡಿ, ಈಗ ರಾಜ್ಯ ಸರ್ಕಾರದ ಬಜೆಟ್ನಲ್ಲೂ “ಕೈ ಆಡಿಸುವ’ ಸುಳಿವು ನೀಡಿದ್ದಾರೆ.
ಆಂಗ್ಲ ದೈನಿಕವೊಂದಕ್ಕೆ ಸಂದರ್ಶನ ನೀಡಿರುವ ಅವರು, “ರಾಜ್ಯಗಳ ರಾಜ್ಯಪಾಲರ ಅಧಿಕಾರಗಳೇ ಬೇರೆ.
ಕೇಂದ್ರಾಡಳಿತ ಪ್ರದೇಶದಲ್ಲಿರುವ ಉಪರಾಜ್ಯಪಾಲರ ಅಧಿಕಾರಗಳೇ ಬೇರೆ. ಕೇಂದ್ರಾಡಳಿತ ಪ್ರದೇಶವಾಗಿರುವ ಕಾರಣ ಉಪರಾಜ್ಯಪಾಲರಿಗೆ ಪುದುಚೇರಿಯಲ್ಲಿ ಸಾಕಷ್ಟು ಅಧಿಕಾರಗಳಿವೆ. ಪ್ರಸಂಗ ಬಂದರೆ ಶಾಸಕಾಂಗದ ಅಭಿಪ್ರಾಯ ಕೇಳದೇ ನಿರ್ಣಯ ತೆಗೆದುಕೊಳ್ಳಬಹುದು. ಅಂತೆಯೇ ರಾಜ್ಯ ಬಜೆಟ್ನಲ್ಲೂ ಸರಿಯಿಲ್ಲದ ಅಂಶಗಳಿದ್ದರೆ ಆ ತಪ್ಪುಗಳನ್ನು ಸರಿಪಡಿಸುವ ಅಧಿಕಾರ ಉಪರಾಜ್ಯಪಾಲರಿಗೆ ಇದೆ’ ಎಂದು ಹೇಳಿದ್ದಾರೆ.
“ರಾಜ್ಯ ಸರ್ಕಾರ ಸ್ವತ್ಛತಾ ಆಂದೋಲನ, ವಿದ್ಯುತ್, ಮೂಲಸೌಕರ್ಯಕ್ಕೆ ಬಜೆಟ್ನಲ್ಲಿ ಹೆಚ್ಚು ಆದ್ಯತೆ ನೀಡುತ್ತಿಲ್ಲ. ಇವನ್ನು ಸರಿಪಡಿಸಬೇಕಿದೆ’ ಎಂದಿದ್ದಾರೆ.