ರಾಜೀವ್‌ ಹತ್ಯೆ ಅಮೆರಿಕಗೆ ಮೊದಲೇ ಗೊತ್ತಿತ್ತೇ?


Team Udayavani, Jan 30, 2017, 3:45 AM IST

rajiv.jpg

ವಾಷಿಂಗ್ಟನ್‌: ಮಾಜಿ ಪ್ರಧಾನಿ, ದಿವಂಗತ ರಾಜೀವ್‌ ಗಾಂಧಿ ಅವರು ಹತ್ಯೆಯಾಗುವುದು ಅಮೆರಿಕಗೆ ಮೊದಲೇ ಗೊತ್ತಿತ್ತೇ? ಇಂಥ ಶಂಕೆಯೊಂದು ಇದೀಗ ಬಹಿರಂಗವಾಗಿರುವ ರಹಸ್ಯ ಕಡತಗಳನ್ನು ನೋಡಿದ ಮೇಲೆ ಮೂಡುತ್ತದೆ. 1986ರಲ್ಲೇ (ಆಗ ರಾಜೀವ್‌ ಭಾರತದ ಪ್ರಧಾನಿ) ಸಿಐಎ “ರಾಜೀವ್‌ ಗಾಂಧಿ ನಂತರದ ಭಾರತ’ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ವರದಿ ತಯಾರಿಸಿಟ್ಟಿತ್ತು. 1989ಕ್ಕೂ ಮುನ್ನ, ಅಂದರೆ ಅವರ ಅಧಿಕಾರಾವಧಿ ಅಂತ್ಯಗೊಳ್ಳುವ ಮುನ್ನವೇ ರಾಜೀವ್‌ ಅವರ ಹತ್ಯೆಯಾಗಬಹುದು ಎಂದು ಇದು ಬಲವಾಗಿ ಶಂಕಿಸಿತ್ತು. 

ವಿಚಿತ್ರವೆಂದರೆ, ಈ 23 ಪುಟಗಳ ಫೈಲ್‌ನ ಸಾಕಷ್ಟು ಮಾಹಿತಿ “ಡಿಲೀಟ್‌’ ಆಗಿದೆ. ಕೆಲವು ಭಾಗಗಳಷ್ಟೇ ದೊರೆತಿದೆ. 

ವರದಿಯಲ್ಲಿ ಏನಿದೆ?: 1989ಕ್ಕೂ ಮುನ್ನವೇ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯಾಗಬಹುದು. ಆಗ ಭಾರತದಲ್ಲಿನ ರಾಜಕೀಯ ವ್ಯವಸ್ಥೆ ಅರ್ಧದಲ್ಲೇ ಅಲ್ಲೋಲಕಲ್ಲೋಲವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿತ್ತು. ಈ ವರದಿಯ ಮೊದಲ ಸಾಲೇ ಈ ರೀತಿ ಇದೆ: “”ಒಂದೇ ಒಂದು ಅವಕಾಶ ಸಿಕ್ಕರೂ, ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಅಧಿಕಾರಾವಧಿ ಮುಗಿಸುವ ಮುನ್ನವೇ ಹತ್ಯೆ ಮಾಡುವ ಸಂಭವವಿದೆ”. ಇದರ ಜತೆಯಲ್ಲೇ  ವರದಿ ಮುಂದುವರಿದು ಹೇಳುತ್ತದೆ: “ರಾಜೀವ್‌ ಅವರಿಗೆ ಹತ್ತಿರದಲ್ಲೇ ಇಂಥ ಬೆದರಿಕೆ ಇದೆ’.

ವಿಚಿತ್ರವೆಂದರೆ ಈ ವರದಿ ಸಿದ್ಧವಾದ 5 ವರ್ಷಗಳ ನಂತರ 1991ರ ಮೇ 21ರಂದು ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್‌ ಹತ್ಯೆಯಾಯಿತು.

ಒಂದು ವೇಳೆ ರಾಜೀವ್‌ ಹತ್ಯೆಯಾದರೆ, ಭಾರತದ ರಾಜಕೀಯ ಸ್ಥಿತಿಗಳೇ ಬದಲಾಗುತ್ತವೆ. ಅದರಲ್ಲೂ ಅಮೆರಿಕ, ರಷ್ಯಾ ಮತ್ತು ಈ ಪ್ರದೇಶದ ಇತರೆ ದೇಶಗಳ ಜತೆಗಿನ ಸಂಬಂಧದ ಮೇಲೂ ಅಡ್ಡ ಪರಿಣಾಮವಾಗುವ ಸಾಧ್ಯತೆಯಿದೆ ಎಂದು ವರದಿ ಹೇಳುತ್ತದೆ.””ಒಂದು ವೇಳೆ ರಾಜೀವ್‌ರನ್ನು ಸಿಖ್‌ ಅಥವಾ ಕಾಶ್ಮೀರದ ಮುಸ್ಲಿಮರೊಬ್ಬರು ಹತ್ಯೆ ಮಾಡಿದಲ್ಲಿ ದೇಶದಲ್ಲಿ ಕೋಮು ಹಿಂಸಾಚಾರ ಭುಗಿಲೇಳುತ್ತದೆ. ಉತ್ತರ ಭಾರತದಲ್ಲಿ ಭಾರಿ ಮುಂಜಾಗ್ರತೆ ತೆಗೆದುಕೊಂಡರೂ ಸಹ ಹಿಂಸಾಚಾರ ನಿಗ್ರಹಿಸುವುದು ಅಸಾಧ್ಯದ ಕೆಲಸವಾಗುತ್ತದೆ. ಇದು ಭಾರತದ ರಾಷ್ಟ್ರಪತಿ….(ಡಿಲೀಟ್‌)” ಮೇಲಿದೆ ಎಂದು ಹೇಳುತ್ತಾ ಹೋಗುತ್ತದೆ. 

ರಾಜೀವ್‌ ನಂತರ ಅವರ ಸ್ಥಾನಕ್ಕೆ ಪಿ.ವಿ. ನರಸಿಂಹರಾವ್‌ ಅಥವಾ ವಿ.ಪಿ.ಸಿಂಗ್‌ ಸೂಕ್ತ ವ್ಯಕ್ತಿಯಾಗಬಹುದು ಎಂಬುದು ಈ ವರದಿಯಲ್ಲಿನ ಅಂಶ. ವಿಶೇಷವೆಂದರೆ 1991ರಲ್ಲಿ ನರಸಿಂಹರಾವ್‌ ಅವರೇ ಪ್ರಧಾನಿಯಾಗಿ ಆಯ್ಕೆಯಾಗಿದ್ದು!
ಕೇವಲ ಸಿಖ್‌ ಅಥವಾ ಕಾಶ್ಮೀರದ ಮುಸ್ಲಿಂ ಅಷ್ಟೇ ಅಲ್ಲ, ಉಗ್ರವಾದಿ ಹಿಂದೂ ವ್ಯಕ್ತಿ ಕೂಡ ರಾಜೀವ್‌ ಹತ್ಯೆ ಮಾಡಬಲ್ಲ ಎಂದು ವರದಿ ಹೇಳುತ್ತದೆ. ಆದರೆ ಎಲ್ಲೂ ರಾಜೀವ್‌ ಹತ್ಯೆಗೆ ಕಾರಣವಾದ ಎಲ್‌ಟಿಟಿಇಯ ಪ್ರಸ್ತಾಪವಿಲ್ಲ. ಮೂಲಗಳ ಪ್ರಕಾರ, ಡಿಲೀಟ್‌ ಆಗಿರುವ ಫೈಲ್‌ಗ‌ಳಲ್ಲಿ ಈ ಪ್ರಸ್ತಾಪ ಇದ್ದಿರಲೂಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ಟಾಪ್ ನ್ಯೂಸ್

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.