ಜನಶಕ್ತಿಗೆ ಮನ್ನಣೆಯೋ..ಗಣಿ ಲಾಬಿಗೆ ಮಣೆಯೋ?


Team Udayavani, Feb 20, 2017, 3:45 AM IST

gudda.jpg

ಹುಬ್ಬಳ್ಳಿ: ಸಂರಕ್ಷಿತ ಅರಣ್ಯ ಸ್ಥಾನ ಪಡೆದು 11 ತಿಂಗಳಲ್ಲಿಯೇ ಪಟ್ಟ ಕಳೆದುಕೊಂಡು, ಗಣಿಗಾರಿಕೆ ಭೀತಿಗೆ ಒಳಗಾಗಿರುವ ಕಪ್ಪತಗುಡ್ಡ , ಇದೀಗ ಮತ್ತೂಮ್ಮೆ ಸಂರಕ್ಷಿತ ಸ್ಥಾನಕ್ಕಾಗಿ ಸರ್ಕಾರದ ಕಡೆ ಆಸೆಕಂಗಳನ್ನು ನೆಟ್ಟಿದೆ. ಮಠಾಧೀಶರು, ಪರಿಸರ ಪ್ರೇಮಿಗಳು, ರೈತರು ಇದೇ ಆಶಯ ಹೊಂದಿದ್ದು, ಸರ್ಕಾರ ಜನಶಕ್ತಿಗೆ ಮನ್ನಣೆ ನೀಡುವುದೋ, ಗಣಿಲಾಬಿಗೆ ಮಣಿಯುವುದೋ ಎಂಬ ಕುತೂಹಲ ಹೆಚ್ಚಿದೆ.

ಕಪ್ಪತಗುಡ್ಡವನ್ನು ಗಣಿಗಾರಿಕೆಗೆ ನೀಡಬಾರದೆಂದು ಒತ್ತಾಯಿಸಿ ಕಪ್ಪತಗುಡ್ಡದ ಸುತ್ತಮುತ್ತಲ 33 ಗ್ರಾಮಗಳ ಜನತೆ, ಗ್ರಾಮ ಪಂಚಾಯತ್‌ಗಳು ನಿರ್ಣಯ ಕೈಗೊಂಡಿದ್ದು, ಸರಕಾರ ನಡೆಸಿದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ 217 ಅರ್ಜಿಗಳು ಸಂರಕ್ಷಿತ ಪರವಾಗಿ, 32 ವಿರುದ್ಧವಾಗಿ ಸಲ್ಲಿಕೆಯಾಗಿವೆ. ಮಠಾಧೀಶರು, ನಾಡಿನ, ದೇಶದ
ಪರಿಸರ ಪ್ರೇಮಿಗಳು, ವಿವಿಧ ಸಂಘಟನೆಗಳವರು ಇದೇ ನಿಲುವಿಗೆ ಒತ್ತಾಯಿಸಿದ್ದಾರೆ. ಇನ್ನೊಂದಡೆ ಗಣಿ ಕಂಪನಿಗಳು ತಮ್ಮದೇ ಒತ್ತಡ ತಂತ್ರ, ಹುನ್ನಾರ, ನಾಟಕಗಳನ್ನು ಮುಂದುವರಿಸಿವೆ. ಗದುಗಿನ ತೋಂಟದಾರ್ಯ ಮಠದ ಡಾ|
ಸಿದ್ದಲಿಂಗ ತೋಂಟದಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಆರಂಭವಾಗಿದ್ದು, ಗದುಗಿನಲ್ಲಿ ಫೆ. 13-15ರವರೆಗೆ ಅಹೋರಾತ್ರಿ ಧರಣಿ, ಉಪವಾಸ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಫೆ. 20ರಂದು ವನ್ಯಜೀವಿ ಮಂಡಳಿ ಸಭೆ ಕರೆದಿದ್ದು, ಮಹತ್ವದ ತೀರ್ಮಾನದ ನಿರೀಕ್ಷೆ ಹೊಂದಲಾಗಿದೆ.

ಸಿಎಂ ಸೇರಿ 11 ಜನ ಭಾಗಿ: ಕಪ್ಪತಗುಡ್ಡಕ್ಕೆ ಸಂರಕ್ಷಿತ ಸ್ಥಾನ ನೀಡಿ ಗಣಿಗಾರಿಕೆ ಹುನ್ನಾರಕ್ಕೆ ಬ್ರೇಕ್‌ ಹಾಕಬೇಕಾಗಿದ್ದು, ಈ ನಿಟ್ಟಿನಲ್ಲಿ ಫೆ. 20ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ವನ್ಯಜೀವಿ ಮಂಡಳಿ ಸಭೆ ಕರೆಯಲಾಗಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಸಚಿವರು,
ಶಾಸಕರಾದ ಅಶೋಕ ಪಟ್ಟಣ, ಜೆ.ಆರ್‌. ಲೋಬೋ, ಎಸ್‌. ಜಯಣ್ಣ, ವಿವಿಧ ಸಂಘ-ಸಂಸ್ಥೆಗಳ ಹಾಗೂ ತಜ್ಞರ ರೂಪದಲ್ಲಿ ಮಂಡಳಿಗೆ ಸದಸ್ಯರಾಗಿರುವ ಜಿ. ಮಲ್ಲೇಶಪ್ಪ, ನೀರಜ್‌ ನಿರ್ಮಲ, ಡಾ| ಎಂ.ಡಿ. ಮಧುಸೂದನ, ಅಜಯ ದೇಸಾಯಿ, ಸಂಜಯ ಗುಬ್ಬಿ ಹಾಗೂ ಎಂ.ಕೆ. ಭಾಸ್ಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕಪ್ಪತಗುಡ್ಡದ ಮಹತ್ವ ವನ್ಯಜೀವಿ ಮಂಡಳಿಯ ಬಹುತೇಕ ಸದಸ್ಯರಿಗೆ ಗೊತ್ತಿದೆ. ಮಠಾಧೀಶರು, ಪರಿಸರ ಪ್ರೇಮಿಗಳು, ರೈತರು ಸಂರಕ್ಷಿತ ಸ್ಥಾನಕ್ಕೆ ಪ್ರಬಲ ಒತ್ತಾಯ ಹೇರಿದ್ದಾರೆ. ಈ ಎಲ್ಲ ಲೆಕ್ಕಾಚಾರಗಳಡಿ ನೋಡಿದರೆ ಯಾವುದೇ ಕಾರಣ ನೀಡದೆ ಸರ್ಕಾರ ಸಂರಕ್ಷಿತ ಅರಣ್ಯ ಸ್ಥಾನ ನೀಡಲೇಬೇಕಾಗಿದೆ.

ಎಲ್ಲ ರೀತಿ ಹುನ್ನಾರಕ್ಕೂ ಯತ್ನ: ಕಪ್ಪತಗುಡ್ಡವನ್ನು ಉಳಿಸಿಕೊಳ್ಳಬೇಕೆಂದು ನಾಡಿನ ಅನೇಕ ಹೃದಯಗಳು ಮಿಡಿಯುತ್ತಿದ್ದರೆ, ಹೇಗಾದರೂ ಮಾಡಿ ಕಬಳಿಸಬೇಕೆಂಬ ಪ್ರಬಲ ಲಾಬಿ ತನ್ನದೇ ಯತ್ನದಲ್ಲಿ ತೊಡಗಿದೆ. ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ತಕ್ಕ ಪ್ರಚಾರ ಕೈಗೊಂಡಿಲ್ಲ, ಸಾರ್ವಜನಿಕ ಸ್ಥಳದಲ್ಲಿ ಸಭೆ ನಡೆಸಿಲ್ಲ, ತೋಂಟದಾರ್ಯ ಸ್ವಾಮೀಜಿ ಇದ್ದಿದ್ದರಿಂದ ಜನ ಹೆದರಿ ಪರವಾಗಿ ಅರ್ಜಿಸಲ್ಲಿಕೆ ಮಾಡಿದ್ದಾರೆಂಬ ಕೊಂಕು, ಇಲ್ಲಸಲ್ಲದ ಕ್ಯಾತೆಗೆ ಗಣಿ
ಕಂಪನಿ ಮುಂದಾಗಿದೆ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರವನ್ನು ಆ ಪಕ್ಷದ ಹೈಕಮಾಂಡ್‌ ಹುಕುಂನಿಂದ ಮಣಿಸುವ ತೀವ್ರತರ ಯತ್ನವೂ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಸರಕಾರ ಜನಶಕ್ತಿಗೆ ಮನ್ನಣೆ ನೀಡಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡದೆ, ಗಣಿ ಲಾಬಿಗೆ ಮಣಿದರೆ ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಹೋರಾಟ ತೀವ್ರಗೊಳಿಸುವ ಹಾಗೂ ಕಾನೂನು ಸಮರಕ್ಕೆ ಮುಂದಾಗುವ ಯತ್ನಕ್ಕೆ ಹಲವರು
ಈಗಾಗಲೇ ಸಿದ್ಧಗೊಂಡಿದ್ದಾರೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.