ಡೈರಿ ಸ್ಫೋಟ ಪಿತೂರಿಯೇ; IT ಅಧಿಕಾರಿಗಳಿಗೆ ಗೋವಿಂದರಾಜು ಹೇಳಿದ್ದೇನು?
Team Udayavani, Feb 25, 2017, 3:37 PM IST
ಬೆಂಗಳೂರು:ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಸಲ್ಲಿಸಲಾಗಿದೆ ಎಂದು ನಮೂದಿಸಲಾಗಿರುವ ಡೈರಿಯ ವಿಷಯವನ್ನು ರಾಷ್ಟ್ರೀಯ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ಬಳಿಕ ಕಾಂಗ್ರೆಸ್ ಪಾಳಯ ತೀವ್ರ ಮುಜುಗರಕ್ಕೆ ಸಿಲುಕಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ.
ಮತ್ತೊಂದೆಡೆ ಗೋವಿಂದ ರಾಜು ಅವರು ನಮ್ಮ ಮನೆಯಲ್ಲಿ ಡೈರಿ ಸಿಕ್ಕಿದ್ದೆ ಸುಳ್ಳು ಎಂದು ಐಟಿ ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿರುವ ಮಾಹಿತಿ ಲಭ್ಯವಾಗಿರುವುದಾಗಿ ಟಿವಿ9 ವರದಿ ಮಾಡಿದೆ.
ನನ್ನ ಮನೆಯಲ್ಲಿ ಐಟಿ ಅಧಿಕಾರಿಗಳು ಜಪ್ತಿಗೈದಿರುವ ದಾಖಲೆಗಳಲ್ಲಿ ಡೈರಿ ಇದೆ ಎಂಬುದು ನನಗಾಗಲಿ, ನಮ್ಮ ಕುಟುಂಬಕ್ಕಾಗಲಿ ಯಾವುದೇ ಮಾಹಿತಿ ಇಲ್ಲ. ಉದ್ದೇಶಪೂರ್ವಕವಾಗಿಯೇ ಯಾರೋ ಡೈರಿ ಇಟ್ಟಿರಬೇಕು. ಬೆಡ್ ರೂಂನಲ್ಲಿ ಡೈರಿ ಸಿಕ್ಕಿದೆ ಎಂಬ ನಿಮ್ಮ ಮಾಹಿತಿಯೇ ಸುಳ್ಳು. ಹಾಗಾಗಿ ಡೈರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಬೆಡ್ ರೂಂನಲ್ಲಿ ಜಪ್ತಿ ಮಾಡಿದ್ದಾರೆನ್ನಲಾಗುತ್ತಿರುವ ಡೈರಿ ಬಗ್ಗೆ ಎಷ್ಟು ಬಾರಿ ಸ್ಪಷ್ಟನೆ ಕೊಡಬೇಕು ಅಂತ ಗೊತ್ತಾಗುತ್ತಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಎಂಎಲ್ ಸಿ ಗೋವಿಂದರಾಜು ಅವರು ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.
ನನ್ನ ಬೆಡ್ ರೂಂನಲ್ಲಿಯೇ ಡೈರಿ ಸಿಕ್ಕಿದೆ ಎಂದು ಹೇಗೆ ಹೇಳ್ತೀರಾ ಎಂದು ಐಟಿ ಅಧಿಕಾರಿಗಳನ್ನೇ ಗೋವಿಂದರಾಜು ಪ್ರಶ್ನಿಸಿದ್ದರು ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ