ತಿರುಗಿ ಬಿದ್ದ ಕೊಹ್ಲಿ ಪಡೆಗೆ 75 ರನ್‌ ಗೆಲುವು; ಟೆಸ್ಟ್‌ ಸರಣಿ ಸಮಬಲ


Team Udayavani, Mar 7, 2017, 3:07 PM IST

6.jpg

 ಬೆಂಗಳೂರು: ಇಲ್ಲಿ ನಡೆದ ಪ್ರವಾಸಿ ಆಸ್ಟೇಲಿಯಾ ವಿರುದ್ಧದ 2 ನೆ ಟೆಸ್ಟ್‌ ಪಂದ್ಯದ2 ನೇ ಇನ್ನಿಂಗ್ಸ್‌ನಲ್ಲಿ ಭಾರತದ ಆಟಗಾರರು ತಿರುಗಿ ಬಿದ್ದು ರೋಚಕ ಗೆಲುವು ಸಾಧಿಸಿ ಮೊದಲ ಟೆಸ್ಟ್‌  ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. ಈ ಗೆಲುವಿನಿಂದಾಗಿ 4 ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ.

4 ದಿನದಾಟದಲ್ಲಿ 2 ನೇ ಇನ್ನಿಂಗ್ಸ್‌ನಲ್ಲಿ  ಆಸೀಸ್‌ ಗೆಲುವಿಗೆ 188 ರನ್‌ ಗುರಿಯನ್ನು ನೀಡಲಾಗಿತ್ತು. ಪಂದ್ಯವನ್ನೂ ಹೇಗೂ ಗೆಲ್ಲಬಹುದು ಎಂಬ  ಭರವಸೆಯಲ್ಲಿ  188 ರನ್‌ಗಳ ಅಲ್ಪ ಗುರಿ ಬೆನ್ನಟ್ಟಿದ ಆಸೀಸ್‌  ಭಾರತದ ಬೌಲರ್‌ಗಳ ಬಲೆಯಲ್ಲಿ ಸಿಲುಕಿ  ಕೇವಲ 112 ರನ್‌ಗಳಿಗೆ ಆಲೌಟಾಗುವ ಮೂಲಕ 75 ರನ್‌ಗಳ ಸೋಲನ್ನನುಭವಿಸಿ ಹತಾಶವಾಗಬೇಕಾಯಿತು. 

ಭಾರತದ ಪರ ಬಿಗು ದಾಳಿ ನಡೆಸಿದ ಆಸೀಸ್‌ ಆಟಗಾರರನ್ನು ಕಾಡಿದ ಆರ್‌ ಅಶ್ವಿ‌ನ್‌ 6 ವಿಕೆಟ್‌ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. (ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ). ಇಶಾಂತ್‌ ಶರ್ಮಾ 1 ವಿಕೆಟ್‌ (ಮೊದಲ ಇನ್ನಿಂಗ್ಸ್‌ನಲ್ಲೂ 4) ಕಬಳಿಸಿದರೆ.  ಉಮೇಶ್‌ ಯಾದವ್‌  2 ವಿಕೆಟ್‌,ಜಡೇಜಾ 1 ವಿಕೆಟ್‌  ಪಡೆದು  ಗಮನ ಸೆಳೆದರು. 

ಆಸೀಸ್‌ ಪರ ಆರಂಭಿಕ ವಾರ್ನರ್‌ 17 , ನಾಯಕ ಸ್ಮಿತ್‌ ಗರಿಷ್ಠ 28 , ಹ್ಯಾಂಡ್ಸ್‌ಕೊಂಬ್‌ 24 ಮತ್ತು ಮಾರ್ಶ್‌ 13 ರನ್‌ ಹೊರತುಪಡಿಸಿದರೆ ಉಳಿದ ಆಟಗಾರರಿಗೆ ಒಂದಂಕಿ ದಾಟಲು ಸಾಧ್ಯವಾಗಲಿಲ್ಲ. 

213 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಭಾರತ  4 ನೇ ದಿನದಾಟದಲ್ಲಿ 274 ರನ್‌ ಗಳಿಗೆ ಆಲೌಟಾಯಿತು. 79 ರನ್‌ ಗಳಿಸಿದ್ದ ಪೂಜಾರ 92 ರನ್‌ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. 40 ರನ್‌ ಗಳಿಸಿದ್ದ ರೆಹಾನೆ 52 ರನ್‌ಗಳಿಗೆ ಔಟಾದರು. ಪೂಜಾರ ಮತ್ತು ರೆಹಾನೆ ಜೊತೆಯಾಟ ಗೆಲುವಿನಲ್ಲಿ ದೊಡ್ಡ ಕೊಡುಗೆ ಎನಿಸಿದೆ. ವೃದ್ಧಿಮಾನ್‌ ಸಾಹಾ 20 ರನ್‌ ಕೊಡುಗೆ ಸಲ್ಲಿಸಿದರು. 

ಆಸೀಸ್‌ ಪರ ಹ್ಯಾಜಲ್‌ವುಡ್‌ 6 ವಿಕೆಟ್‌ ಕಿತ್ತು ಗಮನ ಸೆಳೆದರೆ, ಸ್ಟಾರ್ಕ್‌ ಮತ್ತು ಕಿಫೆ ತಲಾ 2 ವಿಕೆಟ್‌ ಪಡೆದರು. 

ಗೆಲುವಿನಲ್ಲಿ ಮಹತ್ವದ ಕೊಡುಗೆ ಸಲ್ಲಿದ ಕನ್ನಡಿಗ ಕೆ.ಎಲ್‌ .ರಾಹುಲ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್‌ ಮತ್ತು 2 ನೇ ಇನ್ನಿಂಗ್ಸ್‌ನಲ್ಲಿ 51 ರನ್‌ ಗಳಿಸಿದ್ದರು. 

ಸಂಕ್ಷಿಪ್ತ ಸ್ಕೋರ್‌ 

ಭಾರತ ಮೊದಲ ಇನ್ನಿಂಗ್ಸ್‌ 189 ಆಲೌಟ್‌
2 ನೇ ಇನ್ನಿಂಗ್ಸ್‌ 274 ಆಲೌಟ್‌ 

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 276  ಆಲೌಟ್‌ 
ದ್ವಿತೀಯ ಇನ್ನಿಂಗ್ಸ್‌ 112ಕ್ಕೆ ಆಲೌಟ್‌ 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.