ಸೂಡಾನ್ನಲ್ಲಿ ಭಾರತೀಯರಿಬ್ಬರ ಬಿಡುಗಡೆ
Team Udayavani, Apr 1, 2017, 1:58 AM IST
ಹೊಸದಿಲ್ಲಿ: ದಕ್ಷಿಣ ಸೂಡಾನ್ನಲ್ಲಿ ಅಪಹರಣವಾಗಿದ್ದ ಇಬ್ಬರು ಭಾರತೀಯ ಪೆಟ್ರೋಲಿಯಂ ಇಂಜಿನಿಯರ್ಗಳು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಮಿಥುನ್ ಗಣೇಶ್,ಎಡ್ವರ್ಡ್ ಎಂಬ್ರೋಸ್ ಬಿಡುಗಡೆಯಾಗಿ ಭಾರತೀಯ ರಾಯಭಾರ ಕಚೇರಿಗೆ ಬಂದಿರುವುದು ತುಂಬಾ ಸಂತೋಷವಾಗಿದೆ ಎಂದು ಸಚಿವೆ ಟ್ವೀಟ್ ಮಾಡಿದ್ದಾರೆ. ಅವರನ್ನು ಬಂಧನದಿಂದ ಬಿಡಿಸಿಕೊಳ್ಳುವಲ್ಲಿ ಶ್ರಮವಹಿಸಿದ ಭಾರತೀಯ ರಾಯಬಾರಿ ಶ್ರೀಕುಮಾರ್ ಮೆನನ್ ಮತ್ತು ಸಹಾಯ ಮಾಡಿದ ಅಧಿಕಾರಿಗಳ ಕೆಲಸಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.