ಪೊಲೀಸ್ ವಸತಿಗೃಹಕ್ಕೆ ಸ್ವಚ್ಛತೆ ಭಾಗ್ಯ
Team Udayavani, Apr 4, 2017, 12:53 PM IST
ವಾಡಿ: ಕಲುಷಿತ ಪರಿಸರ ಹಾಗೂ ಹಂದಿಗಳ ಕಾಟದಿಂದ ಬಳಲುತ್ತಿದ್ದ ಸ್ಥಳೀಯ ಪೊಲೀಸ್ ವಸತಿ ಗೃಹಗಳಿಗೆ ಕೊನೆಗೂ ಸ್ವಚ್ಛತೆ ಭಾಗ್ಯ ಒದಗಿಬಂದಿದ್ದು, ಹಂದಿ ಸಾಕಾಣಿಕೆದಾರರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳು ಗರಂ ಆದ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ 7:00 ಗಂಟೆಗೆ ಠಾಣೆಗೆ ದೌಡಾಯಿಸಿ ಬಂದ ಡಿವೈಎಸ್ಪಿ ಮಹೇಶ ಮೇಘಣ್ಣವರ್, ಪಿಎಸ್ಐ ಸಂತೋಷಕುಮಾರ ರಾಥೋಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಶಂಕರ ಡಿ.ಕಾಳೆ ಪೊಲೀಸ್ ಪೇದೆಗಳ ಸಭೆ ನಡೆಸಿದರು.
ಪೊಲೀಸ್ ವಸತಿ ಗೃಹಗಳ ಸುತ್ತ ಹದಗೆಟ್ಟ ನೈರ್ಮಲ್ಯ ವ್ಯವಸ್ಥೆ ಹಾಗೂ ಹಂದಿಗಳ ಹಾವಳಿ ಕುರಿತು ಡಿವೈಎಸ್ಪಿ ಮಹೇಶ ಮೇಘಣ್ಣವರ್ ಮಾಹಿತಿ ಕಲೆ ಹಾಕಿದರು. ಹಂದಿ ಸಾಕಾಣಿಕೆದಾರರನ್ನು ಠಾಣೆಗೆ ಕರೆಸಿ ಕೂಡಲೇ ಹಂದಿಗಳನ್ನು ಬೇರೆಡೆ ಸಾಗಿಸುವಂತೆ ಆದೇಶ ನೀಡಿದರು.
ಕಾಂಪೌಂಡ್ ನಿರ್ಮಾಣದ ಬಗ್ಗೆಯೂ ಇದೇ ವೇಳೆ ಚರ್ಚೆ ನಡೆಯಿತು. ಮುಖ್ಯಾಧಿಕಾರಿ ಶಂಕರ ಕಾಳೆ ಆದೇಶದಂತೆ ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ, ವಸತಿ ಗೃಹ ಸುತ್ತಲ ಪ್ರದೇಶದಲ್ಲಿ ಹರಡಿಕೊಂಡಿರುವ ಕಸ ವಿಲೇವಾರಿ ಮತ್ತು ಕೊಳೆ ಸ್ವಚ್ಛತೆಗೆ ಮುಂದಾದರು. ಈ ವೇಳೆ ಎರಡು ಟ್ರಾಕ್ಟರ್ ಕಸ ಸಂಗ್ರಹವಾಯಿತು.
ವಸತಿ ಗೃಹಗಳ ಸುತ್ತ ಬೆಳೆದಿದ್ದ ಮುಳ್ಳುಕಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಪೊಲೀಸ್ ವಸತಿಗೃಹಗಳ ಒಳಚರಂಡಿಯಲ್ಲಿ ವಿಪರೀತ ಹೂಳು ತುಂಬಿದ್ದರಿಂದ ಕೊಳೆ ಹಾಗೆಯೇ ಉಳಿದುಕೊಂಡಿತು. ಈ ಕುರಿತು ಕೆಲವೇ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಹಂದಿಗಳ ಕಾಟ: ಪೊಲೀಸರ ನೆಮ್ಮದಿ ಭಂಗ’ ಎನ್ನುವ ಶೀರ್ಷಿಕೆಯಡಿ ಸೋಮವಾರ “ಉದಯವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಸ್ಪಂದಿಸಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರುವುದು ಗಮನಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್ ಖರ್ಗೆ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
DK Sivakumar: ಪ್ರಜ್ವಲ್ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ
MUST WATCH
ಹೊಸ ಸೇರ್ಪಡೆ
Sikandar Movie: ಸಲ್ಮಾನ್ ಖಾನ್ ʼಸಿಕಂದರ್ʼಗೆ ರಶ್ಮಿಕಾ ಮಂದಣ್ಣ ನಾಯಕಿ
SSLC Result: ಉದಯವಾಣಿ ಪತ್ರಿಕೆಯ ಬೈಕ್ ರೂಟ್ ವಿತರಕನ ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್
UV Fusion: ವ್ಯಾಪ್ತಿ ಪ್ರದೇಶದ ಹೊರಗೆ
Floor Test: ವಿಶ್ವಾಸ ಮತ ಸಾಬೀತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ ಬರೆದ ದುಷ್ಯಂತ್ ಚೌಟಾಲ
Delhi Police; ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ ಗೆ ಸೇರಿದ 9 ಜನರ ಬಂಧನ