ನಾನು ಯಾವ ಬಣದಲ್ಲೂ ಇಲ್ಲ, ಬಿಜೆಪಿಯಲ್ಲಿ ಬಣಗಳೇ ಇಲ್ಲ;ಆರ್.ಅಶೋಕ್
Team Udayavani, Apr 30, 2017, 11:56 AM IST
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ನಡುವಿನ ಭಿನ್ನಮತ ವೈಯಕ್ತಿಕ, ನಾನು ಯಾರ ಬಣವನ್ನೂ ಬೆಂಬಲಿಸಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಭಿನ್ನಮತ ವೈಯಕ್ತಿಕ ಸಣ್ಣ ವಿಚಾರ, ಶಿವಮೊಗ್ಗದ ಅಧ್ಯಕ್ಷರ ಆಯ್ಕೆ ವಿಚಾರ, ಅಲ್ಲಿನ ಟಿಕೆಟ್ ವಿಚಾರ ದಲ್ಲಿ ಭಿನ್ನಮತ ಕಂಡು ಬಂದಿದೆ ಅದನ್ನು ಬಗೆ ಹರಿಸುತ್ತೇವೆ ಎಂದರು.
ನಾನು ಯಾರನ್ನೂ ಬೆಂಬಲಿಸುವ ಪ್ರಶ್ನೆಯೇ ಇಲ್ಲ.ಪಕ್ಷದಲ್ಲಿ ನ ಭಿನ್ನಮತ ಸರಿಯಾಗಬೇಕು ಅಷ್ಟೇ ಬೇರೆ ಏನೂ ಉದ್ದೇಶ ನಮಗಿಲ್ಲ ಎಂದರು.
ಶಾಸಕರಾದ ಗೋವಿಂದ ಕಾರಜೋಳ, ಸುರೇಶ್ ಗೌಡ ಅವರೊಂದಿಗೆ ಅಶೋಕ್ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್