ಕೊನೆಗೂ ಬೆಂಗಳೂರಿಗೆ ಗೆಲುವು


Team Udayavani, May 15, 2017, 2:56 PM IST

RCB-15-5.jpg

ಹೊಸದಿಲ್ಲಿ: ಐಪಿಎಲ್‌ ಹತ್ತರ ಅಂತಿಮ ಲೀಗ್‌ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು 10 ರನ್ನಿನಿಂದ ಸೋಲಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಗೇಲ್‌ ಮತ್ತು ಕೊಹ್ಲಿ ಅವರ ಉತ್ತಮ ಆಟ ದಿಂದಾಗಿ ಆರ್‌ಸಿಬಿ 6 ವಿಕೆಟಿಗೆ 161 ರನ್‌ ಗಳಿಸಿದ್ದರೆ ಡೆಲ್ಲಿ ತಂಡವು ಸರಿಯಾಗಿ 20 ಓವರ್‌ಗಳಲ್ಲಿ 151 ರನ್ನಿಗೆ ಆಲೌಟಾಗಿ ಶರಣಾಯಿತು. ಕರುಣ್‌ ನಾಯರ್‌, ಶ್ರೇಯಸ್‌ ಅಯ್ಯರ್‌, ರಿಷಬ್‌ ಪಂತ್ ಮತ್ತು ಶಮಿ ಎರಡಂಕೆಯ ಮೊತ್ತ ಗಳಿಸಿದರು. ಹರ್ಷಲ್‌ ಪಟೇಲ್‌ ಮತ್ತು ಪವನ್‌ ನೇಗಿ ತಲಾ ಮೂರು ವಿಕೆಟ್‌ ಕಿತ್ತರು. ಈ ಪಂದ್ಯದ ಮೂಲಕ ಐಪಿಎಲ್‌ಗೆ ಪಾದಾರ್ಪಣೆಗೈದ ಹರ್ಷಲ್‌ ಪಟೇಲ್‌ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತಗೊಂಡರು. 

ಈ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ವಿಷ್ಣು ವಿನೋದ್‌ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಗೇಲ್‌ ಮತ್ತು ಕೊಹ್ಲಿ ಅವರ ಉಪಯುಕ್ತ ಆಟದಿಂದಾಗಿ ತಂಡ ಚೇತರಿಸಿಕೊಂಡಿತು. ದ್ವಿತೀಯ ವಿಕೆಟಿಗೆ ಅವರಿಬ್ಬರು 66 ರನ್‌ ಪೇರಿಸಿದರು. ಈ ಜೋಡಿ ಮುರಿದ ಬಳಿಕ ಆರ್‌ಸಿಬಿ ಕುಸಿಯಿತು. ಗೇಲ್‌ 38 ಎಸೆತಗಳಲ್ಲಿ 48 ರನ್‌ ಹೊಡೆದರು. 3 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದರು. ಕೊಹ್ಲಿ 45 ಎಸೆತ ಎದುರಿಸಿದ್ದು 58 ರನ್‌ ಹೊಡೆದರು. ಅವರು ಸಹ ಮೂರು ಬೌಂಡರಿ ಮತ್ತು 3 ಸಿಕ್ಸರ್‌ ಹೊಡೆದರು. ಇವರಿಬ್ಬರು ಹೊರತುಪಡಿಸಿ ತಂಡದ ಉಳಿದ ಯಾವುದೇ ಆಟಗಾರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲರಾದರು. ಬಿಗು ದಾಳಿ ಸಂಘಟಿಸಿದ ಪ್ಯಾಟ್‌ ಕಮಿನ್ಸ್‌ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 21 ರನ್‌ ನೀಡಿ 2 ವಿಕೆಟ್‌ ಉರುಳಿಸಿದರು.


ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ಸ್ ಬೆಂಗಳೂರು

ಕ್ರಿಸ್‌ ಗೇಲ್‌    ಸಿ ಜಹೀರ್‌ ಬಿ ನದೀಮ್‌    48
ವಿಷ್ಣು ವಿನೋದ್‌    ಬಿ ಕಮಿನ್ಸ್‌    3
ವಿರಾಟ್‌ ಕೊಹ್ಲಿ    ಸಿ ನದೀಮ್‌ ಬಿ ಜಹೀರ್‌    58
ಟ್ರ್ಯಾವಿಸ್‌ ಹೆಡ್‌    ರನೌಟ್‌    2
ಕೇದಾರ್‌ ಜಾಧವ್‌    ರನೌಟ್‌    12
ಸಚಿನ್‌ ಬೇಬಿ    ಸಿ ಆ್ಯಂಡರ್ಸನ್‌ ಬಿ ಕಮಿನ್ಸ್‌    12
ಶೇನ್‌ ವಾಟ್ಸನ್‌    ಔಟಾಗದೆ    4
ಪವನ್‌ ನೇಗಿ    ಔಟಾಗದೆ    13

ಇತರ:        9
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ)    161

ವಿಕೆಟ್‌ ಪತನ: 1-30, 2-96, 3-102, 4-118, 5-131, 6-144

ಬೌಲಿಂಗ್‌:
ಜಹೀರ್‌ ಖಾನ್‌ 4-0-31-1
ಮೊಹಮ್ಮದ್‌ ಶಮಿ 4-0-31-0
ಪ್ಯಾಟ್‌ ಕಮಿನ್ಸ್‌ 4-0-21-2
ಅಮಿತ್‌ ಮಿಶ್ರಾ 2-0-26-0
ಕೋರಿ ಆ್ಯಂಡರ್ಸನ್‌ 4-0-38-0
ಶಾದಾಬ್‌ ನದೀಮ್‌2-0-12-1

ಡೆಲ್ಲಿ ಡೇರ್‌ಡೆವಿಲ್ಸ್‌
ಸಂಜು ಸ್ಯಾಮ್ಸನ್‌    ಸಿ ಕೊಹ್ಲಿ ಬಿ ಆವೇಶ್‌    0
ಕರುಣ್‌ ನಾಯರ್‌    ಸಿ ಜಾಧವ್‌ ಬಿ ವಾಟ್ಸನ್‌    26
ಶ್ರೇಯಸ್‌ ಅಯ್ಯರ್‌    ಸಿ ವಾಟ್ಸನ್‌ ಬಿ ಹರ್ಷಲ್‌    32
ರಿಷಬ್‌ ಪಂತ್‌    ಬಿ ಹರ್ಷಲ್‌    45
ಎಂ. ಸಾಮ್ಯುಯೆಲ್ಸ್‌    ಬಿ ಹರ್ಷಲ್‌    0
ಕೋರಿ ಆ್ಯಂಡರ್ಸನ್‌    ಸ್ಟಂಪ್ಡ್ ವಿಷ್ಣು ಬಿ ಹೆಡ್‌    3
ಪ್ಯಾಟ್‌ ಕಮಿನ್ಸ್‌    ಸಿ ಕೊಹ್ಲಿ ಬಿ ಹೆಡ್‌    7
ಅಮಿತ್‌ ಮಿಶ್ರಾ    ಬಿ ನೇಗಿ    7
ಮೊಹಮ್ಮದ್‌ ಶಮಿ    ಸ್ಟಂಪ್ಡ್ ವಿಷ್ಣು ಬಿ ನೇಗಿ    21
ಶಾದಾಬ್‌ ನದೀಮ್‌    ಸಿ ಜಾಧವ್‌ ಬಿ ನೇಗಿ    2
ಜಹೀರ್‌ ಖಾನ್‌    ಔಟಾಗದೆ    1

ಇತರ:        7
ಒಟ್ಟು  (20 ಓವರ್‌ಗಳಲ್ಲಿ ಆಲೌಟ್‌)    151

ವಿಕೆಟ್‌ ಪತನ: 1-0, 2-41, 3-87, 4-87, 5-105, 6-113, 7-119, 8-135, 9-150

ಬೌಲಿಂಗ್‌:
ಆವೇಶ್‌ ಖಾನ್‌,     4-0-23-1
ಯಜ್ವೇಂದ್ರ ಚಾಹಲ್‌3-0-24-0
ಹರ್ಷಲ್‌ ಪಟೇಲ್‌    4-0-43-3
ಶೇನ್‌ ವಾಟ್ಸನ್‌    4-0-16-1
ಟ್ರ್ಯಾವಿಸ್‌ ಹೆಡ್‌    3-0-30-2
ಪವನ್‌ ನೇಗಿ    2-0-10-3

ಪಂದ್ಯಶ್ರೇಷ್ಠ: ಹರ್ಷಲ್‌ ಪಟೇಲ್‌

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.