ವ್ಯಾನ್ ಅಡಿಮೇಲಾಗಿ ಬಿದ್ದು ಐವರ ದಾರುಣ ಸಾವು; 28 ಮಂದಿಗೆ ಗಾಯ
Team Udayavani, May 27, 2017, 11:33 AM IST
ಕೊಯಮುತ್ತೂರು : ನೀಲಗಿರಿ ಜಿಲ್ಲೆಯಲ್ಲಿನ ಕೋತಗಿರಿ ಸಮಿಪ ವ್ಯಾನ್ ಮಗುಚಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟು ಇತರ 28 ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉದಕಮಂಡಲಕ್ಕೆ ರಜಾ ಕಾಲದ ಪ್ರವಾಸಕ್ಕೆ ಹೋಗಿ ವೆಲ್ಲೂರು ಜಿಲ್ಲೆಯಲ್ಲಿನ ತಮ್ಮ ಊರಿಗೆ ಮರಳುತ್ತಿದ್ದವರು ನತದೃಷ್ಟ ವ್ಯಾನಿನಲ್ಲಿ ಇದ್ದರು. ನಿನ್ನೆ ಶುಕ್ರವಾರ ತಡರಾತ್ರಿ ವ್ಯಾನ್ ಸ್ಕಿಡ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಅಡಿಮೇಲಾಗಿ ಮಗುಚಿ ಬಿತ್ತು. ಪರಿಣಾಮವಾಗಿ ವ್ಯಾನಿನಲ್ಲಿದ್ದವರ ಪೈಕಿ ಐವರು ಮೃತಪಟ್ಟರು.
ಮೃತರನ್ನು ಶಂಕರ 50, ಮಲ್ಲಿಕಾ 69, ಭಾಸ್ಕರನ್ 45, ಪನ್ನೀರಸೆಲ್ವಂ 43 ಮತ್ತು ಸರೋಜಾ 44 ಎಂದು ಗುರುತಿಸಲಾಗಿದೆ.
ಮೂವರು ಮಕ್ಕಳ ಸಹಿತ ಗಾಯಗೊಂಡ 28 ಮಂದಿಯನ್ನು ಸರಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ