ರೈತರ ಹಿಂಸಾತ್ಮಕ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ? Watch video
Team Udayavani, Jun 8, 2017, 4:33 PM IST
ಇಂದೋರ್ : ಮಧ್ಯಪ್ರದೇಶದಲ್ಲಿ ಪೊಲೀಸ್ ಫೈರಿಂಗ್ಗೆ ಐವರು ರೈತರು ಬಲಿಯಾದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈಗ ವಾಕ್ಸಮರವೇ ನಡೆಯುತ್ತಿದೆ. ಈ ನಡುವೆ ವಿವಾದಾತ್ಮಕ ವಿಡಿಯೋ ಚಿತ್ರಿಕೆಯೊಂದು ಬಹಿರಂಗವಾಗಿದೆ. ಇದರಲ್ಲಿ ಇಂದೋರ್ನ ಕಾಂಗ್ರೆಸ್ ಶಾಸಕ ಜೀತೂ ಪಟ್ವಾರಿ ಅವರು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸಂದೀಪ್ ಸೋನಿ ಅವರ ಜತೆಗೆ ಮಾತಿನ ಜಟಾಪಟಿಯಲ್ಲಿ ನಿರತರಾಗಿರುವುದು ಕಂಡುಬರುತ್ತದೆ.
ವಿಡಿಯೋದಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸೋನಿ ಅವರು ಕೈ ಶಾಸಕ ಪಟ್ವಾರಿಗೆ ಸಿಟ್ಟಿನ ಆವೇಶದಲ್ಲಿ , “ನೀವು ನನಗೆ ಶಾಂತಿಯುತ ಪ್ರತಿಭಟನೆಯ ಭರವಸೆ ನೀಡಿದ್ದೀರಿ; ಆದರೆ ಈಗೇನಾಗಿದೆ? ಈಗ ಭುಗಿಲೆದ್ದಿರುವ ಹಿಂಸೆಗೆ ಯಾರು ಜವಾಬ್ದಾರಿ ವಹಿಸುತ್ತಾರೆ?’ ಎಂದು ಹೇಳುತ್ತಿರುವುದು ಕಂಡು ಬರುತ್ತದೆ.
ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗುವಂತೆ ಮಾಡುವಲ್ಲಿ ಕಾಂಗ್ರೆಸ್ನ ಕೈವಾಡ ಇರುವುದನ್ನು ಮ್ಯಾಜಿಸ್ಟ್ರೇಟ್ ಶಂಕಿಸಿರುವುದು ಈ ವಿಡಿಯೋದಲ್ಲಿನ ಮಾತುಕತೆಯಿಂದ ಸ್ಪಷ್ಟವಾಗುತ್ತದೆ.
ಈ ನಡುವೆ ನಿಷೇಧಾಜ್ಞೆಯನ್ನು ನಿರ್ಲಕ್ಷಿಸಿ ಇಂದು ಹಿಂಸಾತ್ರಸ್ತ ಮಂದ್ಸೌರ್ ಜಿಲ್ಲೆಯನ್ನು ಪ್ರವೇಶಿಸಿಸಲು ಯತ್ನಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಪೊಲೀಸರು ರಾಜಸ್ಥಾನದ ಗಡಿಗೆ ತಾಗಿಕೊಂಡಿರುವ ನೀಮುಚ್ ಜಿಲೆಲಯಲ್ಲಿ ಬಂಧಿಸಿದ್ದಾರೆ.
ಇದೇ ಜೂನ್ 1ರಿಂದ ಮಧ್ಯಪ್ರದೇಶದಲ್ಲಿನ ರೈತರು ಸಾಲ ಮನ್ನಾ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು ಕಳೆದ ಮಂಗಳವಾರ ಪೊಲೀಸ್ ಫೈರಿಂಗ್ಗೆ ಐವರು ರೈತರು ಬಲಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ
Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ