ರೈತರ ಸಮೃದ್ಧಿಗಾಗಿ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳ ಚರ್ಚೆಗೆ ಸಭೆ


Team Udayavani, Jun 16, 2017, 11:46 AM IST

farmar.jpg

ಸಾಂಗ್ಲಿ: ಕೃಷ್ಯುತ್ಪನ್ನಗಳಿಗೆ ಯೋಗ್ಯ ದರ ಸಿಗಬೇಕು. ಇದಕ್ಕಾಗಿ ಸ್ವಾಮಿನಾಥನ್‌ ಆಯೋಗದ ವರದಿ ಮತ್ತು ಅದು ಮಾಡಿರುವ ಶಿಫಾರ ಸುಗಳನ್ನು  ದೇಶವ್ಯಾಪಿ ಚರ್ಚಿಸಲು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ವತಿಯಿಂದ ಜೂ.16ರಂದು ದಿಲ್ಲಿಯ ಗಾಂಧಿ ಭವನದಲ್ಲಿ ಸಭೆ ಜರಗಲಿದ್ದು ಸಭೆಯಲ್ಲಿ ದೇಶದಲ್ಲಿನ ರೈತ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಹಾಗೂ ಸಂಸದ ರಾಜು ಶೆಟ್ಟಿ ಮಾಹಿತಿ ನೀಡಿದ್ದಾರೆ.

ಕೃಷಿ ಬೆಳೆಗಳ ಉತ್ಪಾದನೆ ಖರ್ಚಿನ ಮೇಲೆ ಶೇ.50 ರಷ್ಟು ಲಾಭ ದೊರೆತರೆ ಮಾತ್ರ ಕೃಷಿ   ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ಸ್ವಾಮಿನಾಥನ್‌ ಆಯೋಗದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ರೈತರ ಸಾಲ ಮನ್ನಾ ಇದು ತಾತೂ³ರ್ತಿಕ ಚಿಕಿತ್ಸೆ ಆಗಿದ್ದು ಕಾಯಂ ಸ್ವರೂಪದ ಉಪಾಯೋಜನೆ ಮಾಡಬೇಕಾದರೆ ಕೃಷ್ಯುತ್ಪನ್ನಗಳಿಗೆ ಯೋಗ್ಯ ದರ ದೊರೆಯುವುದು ಅವಶ್ಯಕವಾಗಿದೆ. ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದ್ದು ಇದಕ್ಕಾಗಿ ಮುಖ್ಯಮಂತ್ರಿ ನೇತೃತ್ವದ ನಿಯೋಗವೊಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೆಟಿ ಮಾಡಲಿದೆ. ಈ ನಿಯೋಗದಲ್ಲಿ ಸಚಿವರು, ಸಕಾಣು ಸಮಿತಿಯ ಸದಸ್ಯರು ಇರಲಿದ್ದಾರೆ ಎಂದು ಶೆಟ್ಟಿ ಈ ವೇಳೆ ಹೇಳಿದರು.

ದೇಶದ ಎಲ್ಲ ರಾಜ್ಯಗಳಲ್ಲಿ ಕೃಷಿ ಅಡಚಣೆಯಲ್ಲಿದೆ. ಸರಕಾರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆಸಿದ ರೈತರ ಬೃಹತ್‌ ಪ್ರತಿಭಟನೆಯ ಪ್ರಭಾವ ದೇಶದ ಇತರ ರಾಜ್ಯಗಳ ಮೇಲೂ ಆಗಿದೆ. ಮಧ್ಯ ಪ್ರದೇಶ, ರಾಜಸ್ಥಾನ್‌, ಪಂಜಾಬ್‌, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಣಾ ಈ ರಾಜ್ಯಗಳಲ್ಲಿ ರೈತರು ತಮ್ಮ ಸಾಲ ಮನ್ನಾಕ್ಕಾಗಿ ಸರಕಾರದ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ ಎಂದರು.

ರೈತರನ್ನು ಸಮೃದ್ಧಗೊಳಿಸುವ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳು
1. ಕೃಷಿ ಉತ್ಪಾದನೆ ಖರ್ಚು ಹೊರತುಪಡಿಸಿ ಕೃಷ್ಯುತ್ಪನ್ನಗಳಿಗೆ ಶೇ.50 ರಷ್ಟು ಬೆಂಬಲ ಬೆಲೆ ನೀಡಬೇಕು.
2. ಕೃಷ್ಯುತ್ಪನ್ನಗಳಿಗೆ ಮೂಲಭೂತ ದರ ನೀಡುವ ಪದ್ಧತಿಯಲ್ಲಿ ಸುಧಾರಣೆ ತಂದು ಗೋಧಿ ಮತ್ತು ಇತರೆ ಆಹಾರ ಧಾನ್ಯಗಳನ್ನು ಹೊರತುಪಡಿಸಿ ಬೆಳೆಗಳಿಗೆ ಮೂಲಭೂತ ದರ ಸಿಗುವ ವ್ಯವಸ್ಥೆ ಮಾಡಬೇಕು.
3. ಮಾರುಕಟ್ಟೆಯಲ್ಲಾಗುವ ಕೃಷ್ಯುತ್ಪನ್ನಗಳ ದರದ ಏರಿಳಿತದಿಂದ ರೈತರಿಗೆ ರಕ್ಷಣೆ ನೀಡಲು ಕೃಷಿ ಮೌಲ್ಯ ಸ್ಥಿರತಾ ನಿಧಿ ಸ್ಥಾಪಿಸಬೇಕು.
4. ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಪರಿಣಾಮದಿಂದ ರೈತರನ್ನು ರಕ್ಷಿಸಲು ಹೊರ ದೇಶಗಳಿಂದ ಬರುವ ಕೃಷ್ಯುತ್ಪನ್ನಗಳಿಗೆ ಅಮದು ತೆರಿಗೆ ವಿಧಿಸಬೇಕು.
5. ಬರ ಮತ್ತು ಇತರ ವಿಪತ್ತುಗಳಿಂದ ರಕ್ಷಣೆಗಾಗಿ ಕೃಷಿ ತುರ್ತು ನಿಧಿ ಸ್ಥಾಪಿಸಬೇಕು.
6. ಬೆಳೆ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕು.
7. ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ಯಥಾ ಸ್ಥಿತಿಗೆ ಬರುವ ತನಕ ರೈತರ ಎಲ್ಲ ಬಗೆಯ ಸಾಲಗಳ ವಸೂಲಿಯನ್ನು ಸ್ಥಗಿತಗೊಳಿಸಿ ಅವುಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು.
8.ದೇಶದಲ್ಲಿನ ಎಲ್ಲ ತರಹದ ಬೆಳೆಗಳಿಗೆ ಅತ್ಯಂತ ಕಡಿಮೆ ಕಂತಿನಲ್ಲಿ ವಿಮೆ ಸಂರಕ್ಷಣೆ ಸಿಗುವ ಹಾಗೆ ಬೆಳೆ ವಿಮೆ ಯೋಜನೆಯ ವಿಸ್ತಾರ ಮಾಡಬೇಕು ಮತ್ತು ಗ್ರಾಮೀಣ ವಿಮೆ ವಿಕಾಸ ನಿಧಿ ಸ್ಥಾಪಿಸಬೇಕು.
9. ಸಾಮಾಜಿಕ ಸುರಕ್ಷೆಯ ಜಾಲ ನಿರ್ಮಿಸಿ ಅದರಡಿ ರೈತರಿಗಾಗಿ ವೃದ್ಧಾವಸ್ಥೆಯಲ್ಲಿ ಆರೋಗ್ಯ ವಿಮೆ ಮಂಜೂರಿ ಮಾಡಬೇಕು.
10. ರೈತರಿಗೆ ಕೈಗೆಟಕುವ ದರದಲ್ಲಿ ಬೀಜ ಮತ್ತು ಕೃಷಿ ಯಂತ್ರಗಳನ್ನು ಒದಗಿಸಬೇಕು.
11.ಸಂಪೂರ್ಣ ದೇಶದಲ್ಲಿ ಕೃಷಿ ಅಭಿವೃದ್ಧಿ ಕೇಂದ್ರ ಮತ್ತು ಮಣ್ಣು ಪರೀಕ್ಷೆ ಪ್ರಯೋಗ ಶಾಲೆಗಳನ್ನು ಸ್ಥಾಪಿಸಬೇಕು.
12. ಕಾಯಂ ಸ್ವರೂಪದ ಕೃಷಿ ನೀರಾವರಿ ಮತ್ತು ಕೃಷಿ ವಿದ್ಯುತ್‌ ಪೂರೈಕೆ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು ಇತ್ಯಾದಿ. 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.