4 ಕೋಟಿ ವಿಮಾ ಹಣಕ್ಕಾಗಿ ಕೊಲೆ ಮಾಡಿ ತನ್ನ ನಕಲಿ ಸಾವಿನ ಕಥೆ ಕಟ್ಟಿದ


Team Udayavani, Jun 30, 2017, 11:20 AM IST

Wagha Naishik-700.jpg

ನಾಶಿಕ್‌ : ಕೇಳಲು ಇದೊಂದು ಬಾಲಿವುಡ್‌ ಸಿನೆಮಾ ಕಥೆಯ ಹಾಗಿದೆ; ಆದರೂ ಇದು ಸತ್ಯ ಘಟನೆಯೇ ಆಗಿದೆ.  ರಾಮದಾಸ್‌ ವಾಘಾ ಎಂಬ

ನಾಶಿಕ್‌ : ಕೇಳಲು ಇದೊಂದು ಬಾಲಿವುಡ್‌ ಸಿನೆಮಾ ಕಥೆಯ ಹಾಗಿದೆ; ಆದರೂ ಇದು ಸತ್ಯ ಘಟನೆಯೇ ಆಗಿದೆ. ರಾಮದಾಸ್‌ ವಾಘಾ ಎಂಬ  ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿ ತಾನೇ ಮುಖ್ಯ ಪಾತ್ರದಲ್ಲಿದ್ದು ಕೊಂಡು ಇತರ ಮೂವರು ಸ್ನೇಹಿತರ ನೆರವಿನಲ್ಲಿ, ತನ್ನ ನಾಲ್ಕು ಕೋಟಿ ರೂ. ವಿಮಾ ಮೊತ್ತವನ್ನು ಪಡೆಯಲು ನಡೆಸಿದ ರೋಚಕ ಸತ್ಯ ಘಟನೆ ಇದಾಗಿದೆ.

ರಾಮದಾಸ್‌ ವಾಘಾ ರಸ್ತೆ ಅಪಘಾತದಲ್ಲಿ ಸತ್ತರೆಂದು ತೋರಿಸುವುದು ಮತ್ತು ಆ ಮೂಲಕ ಅವರಿಗೆ ಮೂರು ಬೇರೆ ಬೇರೆ ವಿಮಾ ಕಂಪೆನಿಗಳಲ್ಲಿರುವ ಪಾಲಿಸಿಗಳ ಮೂಲಕ ನಾಲ್ಕು ಕೋಟಿ ರೂ. ಹಣ ಪಡೆಯುವುದು ಈ ಕಥೆಯ ಮೂಲ ಹಂದರ. 

ಇದಕ್ಕಾಗಿ ವಾಘಾ ಮತ್ತು ಆತನ ಮೂವರು ಸ್ನೇಹಿತರು (ಇವರಲ್ಲಿ ಒಬ್ಟಾತ ಹೊಟೇಲು ಉದ್ಯಮಿ) ಹೊಟೇಲಿನ ವೇಟರ್‌ ಒಬ್ಬನನ್ನು ಕತ್ತು ಹಿಸುಕಿ, ಉಸಿರು ಗಟ್ಟಿಸಿ ಸಾಯಿಸಿದರು. ಬಳಿಕ ಆತನ ಮುಖದ ಗುರುತು ಹತ್ತದ ರೀತಿಯಲ್ಲಿ ಆತನ ಮೇಲೆ ವಾಹನವೊಂದನ್ನು ಹರಿಸಿದರು. ಹೀಗೆ ರಸ್ತೆ ಅಪಘಾತದಲ್ಲಿ  ಸತ್ತ ವ್ಯಕ್ತಿ ರಾಮದಾಸ್‌ ವಾಘಾ ಎಂದು ತೋರಿಸಲು ವೇಟರ್‌ನ ಶವದ ಅಂಗಿಯ ಕಿಸೆಯಲ್ಲಿ ವಾಘಾನ ಎಟಿಎಂ ಕಾರ್ಡ್‌ ಮತ್ತೆ ಇಲೆಕ್ಟ್ರಿಸಿಟಿ ಬಿಲ್‌ ಇಟ್ಟರು. 

ಜೂನ್‌ 9ರಂದು ನಾಶಿಕ್‌ನ ತ್ರ್ಯಂಬಕೇಶ್ವರ ದೇವಸ್ಥಾನದ ಬಳಿಯಲ್ಲಿ  ನಡೆಯಿತೆನ್ನಲಾದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಪರಿಚಿತ ವ್ಯಕ್ತಿಯ ಶವವನ್ನು ಪೊಲೀಸರು, ಕೇಸು ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಶವದ ಕಿಸೆಯಲ್ಲಿ  ದೊರೆತ ಎಟಿಎಂ ಕಾರ್ಡ್‌, ಇಲೆಕ್ಟ್ರಿಸಿಟಿ ಬಿಲ್‌ ಆಧಾರದಲ್ಲಿ ರಾಮದಾಸ್‌ ವಾಘಾ ಅವರ ಕುಟುಂಬದವರು ಮತ್ತು ಸ್ನೇಹಿತರನ್ನು ಕಾಣಲು ಹೋದ ಪೊಲೀಸರಿಗೆ “ವಾಘಾ ಸತ್ತಿಲ್ಲ, ಜೀವಂತ ಇದ್ದಾರೆ’ ಎಂಬ ಮಾಹಿತಿ ದೊರಕಿ ಅಚ್ಚರಿ ಉಂಟಾಯಿತು. 

ಇತ್ತ ಶವದ ಪೋಸ್ಟ್‌ ಮಾರ್ಟಂ ವರದಿ ಕೈಸೇರಿದ ಪೊಲೀಸರಿಗೆ, “ಅಪರಿಚಿತ ವ್ಯಕ್ತಿಯ ಸಾವು ರಸ್ತೆ ಅಪಘಾತದಿಂದ ಆಗಿಲ್ಲ; ಉಸಿರು ಗಟ್ಟಿ ಸಾಯಿಸಿರುವುದರಿಂದ ಆಗಿದೆ’ ಎಂದು ತಿಳಿಯಿತು. 

ಒಡನೆಯೇ ಪೊಲೀಸರು ರಾಮದಾಸ್‌ ವಾಘಾನನ್ನು ಬಂಧಿಸಲು ಮುಂದಾದರು. ಆದರೆ ತನ್ನ ಸಿನಿಮೀಯ ಕೃತ್ಯ ಪೊಲೀಸರಿಗೆ ತಿಳಿಯಿತೆಂಬುದನ್ನು ಅರಿತ ವಾಘಾ ನಾಪತ್ತೆಯಾದ. ಆದರೆ ಪೊಲೀಸರು ಕೊಲೆ ಕೃತ್ಯದಲ್ಲಿ ಶಾಮೀಲಾದ ಆತನ ಮೂವರು ಸಹಚರರನ್ನು ಬಂಧಿಸಿದರು. ಕೊಲೆ ಕೃತ್ಯಕ್ಕೆ ಬಳಸಲಾದ ಮಾರುತಿ 800 ಕಾರನ್ನು ಕೂಡ ಅವರಿಂದ ವಶಪಡಿಸಿಕೊಂಡರು. 

ವಾಘಾ ಮತ್ತು ಆತನ ಸಹಚರರಿಂದ ಕೊಲೆಗೀಡಾದ 45ರ ಹರೆಯದ ಹೊಟೇಲ್‌ ವೇಟರ್‌, ತಮಿಳುನಾಡು ಅಥವಾ ಆಂಧ್ರ ಪ್ರದೇಶದವನಾಗಿದ್ದು ಆತನ ಹೆಸರು ಮುಬಾರಕ್‌ ಚಾಂದ್‌ ಪಾಶಾ ಎಂದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರಿಗೆ ಮುಖ್ಯ ಕೊಲೆ ಆರೋಪಿಯಾಗಿದ್ದು ತಲೆ ಮರೆಸಿಕೊಂಡಿರುವ ರಾಮದಾಸ್‌ ವಾಘಾ ನಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

ಟಾಪ್ ನ್ಯೂಸ್

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.