ಉದ್ಯಾವರ ಕಡೆತೋಟ ಬಳಿ ಹೆಚ್ಚಿದ ಕಡಲಕೊರೆತ
Team Udayavani, Jul 2, 2017, 3:45 AM IST
ಮಲ್ಪೆ: ವಾರದ ಹಿಂದೆ ಕುತ್ಪಾಡಿ ಪಡುಕರೆಯಲ್ಲಿ ಕಡಲು ಕೊರೆತ ಕಾಣಿಸಿಕೊಂಡಿದ್ದರೆ ಇದೀಗ ಇಲ್ಲಿಂದ ದಕ್ಷಿಣಕ್ಕೆ ಸುಮಾರು 3 ಕಿ.ಮೀ. ದೂರದ ಉದ್ಯಾವರ ಪಡುಕರೆ ಕಡೆತೋಟ, ಗೆಸ್ಟ್ಹೌಸ್ ಬಳಿ ಕಡಲಕೊರೆತ ತೀವ್ರಗೊಳ್ಳುತ್ತಿದೆ.
ಕಳೆದ ಮೂರ್ನಾಲ್ಕು ದಿನದಿಂದ ಗಾಳಿ- ಮಳೆ – ಅಲೆಗಳ ಅಬ್ಬರಕ್ಕೆ ಈ ಪ್ರದೇಶದಲ್ಲಿ ಭಾರೀ ಕೊರೆತ ಉಂಟಾಗಿದೆ. ಬೃಹತ್ ಗಾತ್ರದ ಅಲೆಗಳು ರಸ್ತೆಗೆ ಅಪ್ಪಳಿಸುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕೆಲವೆಡೆ ಅಲೆಗಳು ತಡೆಗೋಡೆಯನ್ನು ಕೊರೆದು ಮುನ್ನುಗ್ಗಿ ಬರುತ್ತಿವೆ. ಬೃಹತ್ ಅಲೆಗಳು ಕಾಂಕ್ರೀಟ್ ರಸ್ತೆಗೆ ಅಪ್ಪಳಿಸುತ್ತಿದ್ದು ರಸ್ತೆ ಅಪಾಯದ ಭೀತಿಯಲ್ಲಿದೆ. ಸಮೀಪದಲ್ಲಿರುವ ವಿದ್ಯುತ್ ಕಂಬ ಸಮುದ್ರಪಾಲಾಗಿದೆ.
ಈ ಹಿಂದೆ ತಡೆಗೋಡೆಗೆ ಹಾಕಿದ ಕಲ್ಲುಗಳು ಸಮುದ್ರ ಸೇರುತ್ತಿವೆ. ಇಷ್ಟಾದರೂ ತಾತ್ಕಾಲಿಕವಾಗಿ ಕಲ್ಲು ಹಾಕುವ ಕೆಲಸ ಮಾತ್ರ ಇನ್ನೂ ನಡೆದಿಲ್ಲ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ. ಕುತ್ಪಾಡಿ ಪಡುಕರೆಯಲ್ಲಿ ನಿರಂತರ ಕಲ್ಲು ಹಾಕಿದ ಹಿನ್ನೆಲೆಯಲ್ಲಿ ಕೊರೆತದ ಪ್ರಮಾಣ ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?