ಬಳ್ಳಾರಿ: ಬೆಳೆಗಳಿಗೆ ವಿಷ ಸಿಂಪಡಿಸಿ 35 ಗೂಳಿಗಳ ಮಾರಣ ಹೋಮ!
Team Udayavani, Jul 6, 2017, 1:18 PM IST
ಬಳ್ಳಾರಿ: ಹೂವಿನ ಹಡಗಲಿಯಲ್ಲಿ ಮೆಕ್ಕೆ ಜೋಳದ ಬೆಳೆಗೆ ವಿಷ ಸಿಂಪಡಿಸುವ ಮೂಲಕ 35 ಕ್ಕೂ ಹೆಚ್ಚು ಗೂಳಿಗಳ ಮಾರಣಹೋಮ ನಡೆಸಿರುವ ಘಟನೆ ಗುರುವಾರ ನಡೆದಿದೆ.
ಹಿರೇಹಡಗಲಿ ಕಟ್ಟಿ ಮಸಾರಿ ಎಂಬಲ್ಲಿ ಮೆಕ್ಕೆ ಜೋಳದ ಜಮೀನಿನಲ್ಲಿ 28 ದೇಸಿ ತಳಿಯ ಗೂಳಿಗಳು ಸಾವನ್ನಪ್ಪಿದ್ದು, ಹಿರೇಮಲ್ಲನಕೇರಿ ಎಂಬಲ್ಲಿ 7 ಗೂಳಿಗಳು ವಿಷ ಸೇವಿಸಿ ದಾರುಣವಾಗಿ ಸಾವನ್ನಪ್ಪಿವೆ.
ದೇವರಿಗೆ ಹರಕೆ ರೂಪದಲ್ಲಿ ಬಿಟ್ಟ ಗಂಡು ಕರುಗಳು ಬೀಡಾಡಿ ಗೂಳಿಗಳಾಗಿ ಬೆಳೆದು ಹೊಲಕ್ಕೆ ಹಾನಿ ಮಾಡುತ್ತಿದ್ದವು. ಅವುಗಳನ್ನು ಹಿಡಿದು ಗೋಶಾಲೆಗಳಿಗೆ ಸಾಗಿಸಲು ತಾಲೂಕು ಆಡಳಿತ ನಡೆಸಿದ ಯತ್ನ ವಿಫಲವಾಗಿತ್ತು. ಈ ಹಿನ್ನಲೆಯಲ್ಲಿ ದಾರಿ ಕಾಣದಾಗದೆ ಬೆಳಗಳಿಗೆ ಫ್ರೀಡಾನ್ ವಿಷ ಸಿಂಪಡಿಸಿ ಮೂಕ ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ.
ಗೂಳಿಗಳ ಸಾಮೂಹಿಕ ಹತ್ಯೆಯ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ರೈತರು, ಗೋಪ್ರೇಮಿಗಳು ಸ್ಥಳಕ್ಕಾಗಮಿಸಿ ಮರುಗುತ್ತಿದ್ದಾರೆ.
ಗೂಳಿಗಳು ವಿಷ ಸೇವನೆಯಿಂದ ಪ್ರಾಣೋತðಮಣ ಕಾಲದಲ್ಲಿ ತೀವ್ರ ನರಳಾಟ ನಡೆಸಿರುವುದು ಕಂಡು ಬಂದಿದೆ.
ವಿಷವಿಟ್ಟವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರೈತರು , ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ