ಸಾಂವಿಧಾನಿಕ ಪೀಠದಿಂದ ಆಧಾರ್ ಅಂತಿಮ ತೀರ್ಮಾನ: ಸುಪ್ರೀಂ ಕೋರ್ಟ್
Team Udayavani, Jul 7, 2017, 3:07 PM IST
ಹೊಸದಿಲ್ಲಿ : ಆಧಾರ್ ಕುರಿತ ಎಲ್ಲ ವಿವಾದಿತ ವಿಷಯಗಳನ್ನು ತನ್ನ ಸಾಂವಿಧಾನಿಕ ಪೀಠವು ಅಂತಿಮವಾಗಿ ನಿರ್ಧರಿಸಲಿದೆ ಎಂದು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಹೇಳಿದೆ.
ಆಧಾರ್ ಕುರಿತ ಎಲ್ಲ ಪ್ರಶ್ನೆಗಳನ್ನು ತೀರ್ಮಾನಿಸುವ ದಿಶೆಯಲ್ಲಿ ಸಾಂವಿಧಾನಿಕ ಪೀಠವನ್ನು ರಚಿಸುವಂತೆ ಕಕ್ಷಿದಾರರು ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿಗಳನ್ನು ಒತ್ತಾಯಿಸಬೇಕು ಎಂದು ಜಸ್ಟಿಸ್ ಚಲಮೇಶ್ವರ್ ನೇತೃತ್ವದ ಮೂವರು ಸದಸ್ಯರನ್ನು ಒಳಗೊಂಡ ಪೀಠವು ಹೇಳಿತು.
“ಕಕ್ಷಿದಾರರಾಗಿರುವ ನೀವು (ಅರ್ಜಿದಾರರು ಮತ್ತು ಕೇಂದ್ರ ಸರಕಾರ) ಆಧಾರ್ ಕುರಿತ ಎಲ್ಲ ವಿವಾದಿತ ವಿಷಯಗಳನ್ನು ಅಂತಿಮವಾಗಿ ತೀರ್ಮಾನಿಸುವ ಸಲುವಾಗಿ ಸಾಂವಿಧಾನಿಕ ಪೀಠ ರಚಿಸಬೇಕೆಂದು ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿಯನ್ನು ಒತ್ತಾಯಿಸಬೇಕೆಂದು ನಾವು ಸಲಹೆ ಮಾಡುತ್ತೇವೆ’ ಎಂಬುದಾಗಿ ಜಸ್ಟಿಸ್ ಎ ಎ ಖಾನ್ವಿಲ್ಕರ್ ಮತ್ತು ಜಸ್ಟಿಸ್ ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠವು ಹೇಳಿತು.
ಪೀಠದ ಸಲಹೆಯ ಪ್ರಕಾರ ತಾವು ವರಿಷ್ಠ ನ್ಯಾಯಮೂರ್ತಿಯವರನ್ನು ಕೋರುವುದಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಅವರು ಹೇಳಿದರು.
ಸಮಾಜ ಕಲ್ಯಾಣ ಕಾರ್ಯಕ್ರಮಗಳ ಲಾಭವನ್ನು ಪಡೆಯುವುದಕ್ಕೆ ಆಧಾರ್ ನಂಬರ್ ಕಡ್ಡಾಯಗೊಳಿಸುವ ಕೇಂದ್ರದ ಅಧಿಸೂಚನೆಗೆ ಮಧ್ಯಾವಧಿ ನೀಡಲು ರಜಾ ಪೀಠದ ಸುಪ್ರೀಂ ಪೀಠವು ಕಳೆದ ಜೂನ್ 27ರಂದು ನಿರಾಕರಿಸಿತ್ತು. ಆದರೆ ಸರಕಾರ ಆಧಾರ್ ಇಲ್ಲದವರು ಅಂತಹ ಯೋಜನೆಗಳ ಲಾಭದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ
IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್
Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ
T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿನ್