ಗುರುವಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ: ಶ್ರೀ ರಮಾನಂದ ಗುರೂಜೀ
Team Udayavani, Jul 11, 2017, 3:55 AM IST
ಉಡುಪಿ: ಗುರುವಾದ ವರು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ಮಾತ್ರ ಕಾರ್ಯವೆಸಗದೆ ಸಾಮಾಜಿಕವಾಗಿ ಮಾನವ ಧರ್ಮದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿದಾಗ ಶಾಂತಿಯುತವಾದ ಸದೃಢ ಸಮಾಜ ನಿರ್ಮಾಣವಾಗಲಿದೆ. ಶಾಂತಿ, ಸೌಹಾರ್ದಕಾಪಾಡಿಕೊಂಡು ಬರುವಲ್ಲಿ “ಗುರು’ ಜಾತಿ-ಮತದ ಚೌಕಟ್ಟಿಗೆ ಸಿಲುಕದೆ, ಸ್ವಾರ್ಥರಹಿತ ಮಾರ್ಗದರ್ಶಕ ರಾಗ ಬೇಕು ಎಂದು ಉಡುಪಿ ದೊಡ್ಡಣಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಹೇಳಿದರು.
ಉಡುಪಿ ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ರವಿವಾರ ಗುರುಪೂರ್ಣಿಮೆ ಅಂಗವಾಗಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಗುರುವಿನ ಮಾರ್ಗದರ್ಶನ ಮುಖ್ಯ
ಸರ್ವರಿಗೂ ಜೀವನದಲ್ಲಿ ಗೆಲ್ಲಬೇಕೆಂಬ ಹೆಬ್ಬಯಕೆ ಇದ್ದೇ ಇರುತ್ತದೆ. ಆದರೆ ಬಯಸಿದಂತೆ ಎಲ್ಲವೂ ನಡೆಯದೇ ಹೋದಾಗ ದುಃಖವಾಗುವುದು ಸಹಜ. ಹಾಗಾದರೆ ನಾವೆಲ್ಲಿ ತಪ್ಪಿದ್ದೇವೆ? ಎಂದು ಅವಲೋಕಿಸಿ ಸುಗಮ ಹಾದಿಯನ್ನು ಸೃಷ್ಟಿಸಿಕೊಂಡು ದಿಟ್ಟ ಗುರಿಯೊಂದಿಗೆ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅತೀ ಮುಖ್ಯ. ಈ ನೆಲೆಯಲ್ಲಿ ಗುರುವಿನಲ್ಲಿ ಸಂಪೂರ್ಣಭರವಸೆಯಿಟ್ಟು ಅವರ ಆಂತರ್ಯಶಕ್ತಿ ಯನ್ನು ಗೌರವಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಗುರೂಜೀ ತಿಳಿಸಿದರು.
ಸೌಹಾರ್ದ ಕೋ-ಆಪ್. ಸೊಸೈಟಿ ನಿರ್ದೇಶಕಿ ಮೀನಾ ದೇವೇಂದ್ರ ಅವರು ಮಾತನಾಡಿ, ಶ್ರೀ ದುರ್ಗಾ ಆದಿಶಕ್ತಿಯಿಂದ ಅನುಗ್ರಹಿತರಾದ, “ಮಾತನಾಡುವ ಶಕ್ತಿ ಎನಿಸಿದ’ ಶ್ರೀ ರಮಾನಂದ ಗುರೂಜೀ ಅವರ ಆಶೀರ್ವಾದ ನಂಬಿದ ಎಲ್ಲರಿಗೂ ಶ್ರೀರಕ್ಷೆಯಾಗಲಿದೆ ಎಂದರು. ಇದೇ ಸಂದರ್ಭ ಭಕ್ತರು ಗುರೂಜೀ ಅವರಿಗೆ ಗುರುವಂದನೆ ಸಲ್ಲಿಸಿದರು.
ಮಣಿಪಾಲದ ಐಟಿಐ ಕಾಲೇಜಿನ ಪ್ರಾಂಶುಪಾಲ ಗಣಪತಿ, ದೊಡ್ಡಣ ಗುಡ್ಡೆಯ ಪ್ರಜ್ಞಾ ಇಂಟರ್ನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶು ಪಾಲೆ ಉಷಾ ರಮಾನಂದ, ಶಿಕ್ಷಕ ರಾಘವೇಂದ್ರ, ಕಲಾನಿಧಿ ತಂಡದ ವ್ಯವಸ್ಥಾಪಕಿ ಉಪ್ಪೂರು ಭಾಗ್ಯಲಕ್ಷ್ಮೀ, ಚಿತ್ರಾಕ್ಷಿ ಭಾಸ್ಕರ್, ಜೆಎಂಟಿ ಟ್ರಾವೆಲ್ಸ್ನಆನಂದ ಬಾಯರಿ, ಚರಣ್ರಾಜ್, ಮಂಗಳೂರಿನ ನಿರ್ಮಲಾ ಸುರೇಶ್, ಶ್ರೀ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಉಪಸ್ಥಿತರಿದ್ದರು.
ಗುರುಪೂರ್ಣಿಮಾ ಪ್ರಯುಕ್ತ ಮನ್ಯುನಾಮಕ ಶ್ರೀ ಲಕ್ಷ್ಮೀನರಸಿಂಹ ಯಾಗ, ನವಗ್ರಹ ಶಾಂತಿ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್