ಪೊಲೀಸ್, ಸಾರ್ವಜನಿಕರ ನಡುವೆ ಸ್ನೇಹ ಸಂಬಂಧವಿರಲಿ: ಶೇಖರ್
Team Udayavani, Jul 13, 2017, 2:40 AM IST
ಕೊಲ್ಲೂರು: ಪೊಲೀಸು ಗಸ್ತು ವ್ಯವಸ್ಥೆಯ ನಾಗರಿಕರ ಸಮಿತಿಯ ಸಭೆ ವಂಡ್ಸೆ ಗ್ರಾ.ಪಂ.ವಠಾರದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ ಕೊಲ್ಲೂರು ಪೊಲೀಸ್ ಠಾಣಾಧಿಕಾರಿ ಶೇಖರ್ ಅವರು ಮಾತನಾಡಿ ಮಕ್ಕಳ ಕಳ್ಳಸಾಗಾಣಿಕೆ, ಮನೆಯಲ್ಲಿ ಹೆತ್ತವರು ಮದ್ಯಪಾನ ಮಾಡಿಕೊಂಡು ಸೃಷ್ಟಿ ಮಾಡುವ ರದ್ದಾಂತಗಳಿಂದ ಮಕ್ಕಳ ಮೇಲೆ ಪರಿಣಾಮ ಉಂಟಾಗುತ್ತದೆ. ಎಂದು ಹೇಳಿದರಲ್ಲದೇ ನಾಗರಿಕ ಸಮಿತಿಯ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಮಕ್ಕಳ ಶಾಲಾ ಹಾಜರಾತಿ ಬಗ್ಗೆ ಗಮನ ಹರಿಸಬೇಕು. ಅನುಮಾನಾಸ್ಪದ ವ್ಯಕ್ತಿ, ಸಮಾಜಘಾತಕ ಶಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಭಯದ ವಾತಾವರಣ ಇರಬಾರದು. ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತ ಚರ್ಚೆ ನಡೆಯಬೇಕೆಂದರು.
ಸಭೆಯ ಅಧ್ಯಕ್ಷತೆಯನ್ನು ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಹಿಸಿ ಮಾತನಾಡಿ ಪೊಲೀಸರೊಡನೆ ಸಾರ್ವಜನಿಕರು ಅನ್ಯೋನ್ಯತೆಯನ್ನು ಬೆಳೆಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಲ್ಲಿ ಅದಕ್ಕೊಂದು ನ್ಯಾಯಯುತ ಸೂಕ್ತ ಪರಿಹಾರ ಒದಗಿಸುವುದರಲ್ಲಿ ಇಲಾಖೆ ಬದ್ದವಾಗಿತುತ್ತದೆ. ಈ ದಿಸೆಯಲ್ಲಿ ಪ್ರತಿಯೋರ್ವ ಗ್ರಾಮಸ್ಥರು ಪೊಲೀಸ್ ಇಲಾಖೆಯೊಡನೆ ಹೆಚ್ಚಿನ ಸಂಪರ್ಕವಿರಿಸಿ ಸಮಸ್ಯೆಗಳನ್ನು ಹಂಚಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ಎ.ಎಸ್.ಐ. ಶೇಖರ ಮಲ್ಪೆ, ಹೆಡ್ಕಾನ್ಸ್ಟೇಬಲ್ ಚಂದ್ರ, ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸರೋಜ ಉಪಸ್ಥಿತರಿದ್ದರು. ಶೇಖರ ಮಲ್ಪೆ ಸ್ವಾಗತಿಸಿದರು. ಸರೋಜಾ ವಂದಿಸಿದರು.