ಇಂದಿನಿಂದ ನಿಗೂಢ ರಾತ್ರಿ


Team Udayavani, Jul 17, 2017, 10:56 AM IST

Niggoda-Ratri2.jpg

ಜೀ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ ಮಾಸ್ಟರ್‌ ಆನಂದ್‌ “ನಿಗೂಢ ರಾತ್ರಿ’ ಎಂಬ ಸಸ್ಪೆನ್ಸ್‌, ಥ್ರಿಲ್ಲರ್‌ ಮತ್ತು ಹಾರರ್‌ ಅಂಶ ಒಳಗೊಂಡ ಧಾರಾವಾಹಿ ನಿರ್ದೇಶಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದು ಜುಲೈ 17 ರಿಂದ (ಇಂದಿನಿಂದ) ರಾತ್ರಿ 10.30 ಕ್ಕೆ ಪ್ರಸಾರವಾಗಲಿದೆ ಎಂಬ ವಿಷಯವನ್ನೂ ಹೇಳಲಾಗಿತ್ತು. ಮಲೆನಾಡ ತಪ್ಪಲಿನಲ್ಲಿರುವ ಸೂರ್ಯನಾರಾಯಣ್‌ ಮನೆಯಲ್ಲಿ ನಡೆಯುವ ವಿಚಿತ್ರ ಘಟನೆಗಳ ಕಥೆಯೇ “ನಿಗೂಢ ರಾತ್ರಿ’ಯ ಹೈಲೈಟ್‌.

ಆ ಮನೆಯ ಹಿರಿಯ ಜೀವವೊಂದು ಆಕಸ್ಮಿಕವಾಗಿ ಸಾವಿಗೀಡಾದ ಬಳಿಕ ನಡೆಯುವ ಘಟನೆಗಳು ಧಾರಾವಾಹಿಗೆ ಹೊಸ ತಿರುವು ಕೊಡುತ್ತವೆ. ಆ ವಿಚಿತ್ರ ಘಟನೆಯಿಂದ ಆ ಮನೆಯವರು ಹೇಗೆ ಹೊರಗೆ ಬರುತ್ತಾರೆ ಅನ್ನೋದೇ ಧಾರಾವಾಹಿಯ ಸಾರಾಂಶ.  ಇದೆಲ್ಲವೂ ಸರಿ, ಈಗ ಹೊಸ ವಿಷಯ ಅಂದರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳ ಕಲಾವಿದರು, ತಮಗೂ ಆದಂತಹ ಕೆಲ ನೈಜ ಘಟನೆಗಳನ್ನು ವಿವರಿಸಿದ್ದಾರೆ.

ಇಂದಿಗೂ ಭೂತ-ದೆವ್ವ, ಅತೀಂದ್ರಿಯ ಶಕ್ತಿಗಳ ಇರುವಿಕೆ ಕುರಿತು ನಂಬಿಕೆ ಇರುವ ಜನರೂ ಇದ್ದಾರೆ. ತಮ್ಮ ಬದುಕಲ್ಲಾದಂತಹ ಕೆಲ ನೈಜ ಘಟನೆ ಕುರಿತು ಸ್ವತಃ ಆ ಕಲಾವಿದರು ವಿವರಿಸಿದ್ದಾರೆ. “ಜೋಡಿ ಹಕ್ಕಿ’ ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಾಮಣ್ಣ ಅವರು ಪಿಯುಸಿ ಓದುವಾಗ ಹಳ್ಳಿಯಲ್ಲಿರುವ ಮಾವನ ಮನೆಗೆ ಹೋಗಿದ್ದರಂತೆ. ಸ್ಮಶಾನದ ಬಳಿ ಇರುವ ದಾರಿಯಲ್ಲಿ ನಡುರಾತ್ರಿ ಮನೆಗೆ ಬರುವಾಗ ಯಾರೋ ಕೂಗಿದ ಸದ್ದು ಕೇಳಿ ಬೆಚ್ಚಿ ಬಿದ್ದಿದ್ದರಂತೆ. ಸುತ್ತ ಯಾರೂ ಇಲ್ಲದಿದ್ದರೂ ಸದ್ದು ಬಂದಿದ್ದು ಎಲ್ಲಿಂದ ಎಂದು ತಿಳಿಯದೆ, ಅಲ್ಲಿಂದ ಓಡಿದ್ದರಂತೆ ರಾಮಣ್ಣ.

ಇನ್ನು “ಪತ್ತೆದಾರಿ ಪ್ರತಿಭಾ’ ಧಾರಾವಾಹಿಯ ನಾಯಕಿ ಪ್ರತಿಭಾ ಅವರದು ಆಂಧ್ರಪ್ರದೇಶದ ಚಿಕ್ಕಹಳ್ಳಿ ಕಾವೇರಿರಾಜಪುರಂ ಹುಟ್ಟೂರು. ಆ ಊರಿನ ನಡುವಿನಲ್ಲಿ ದೊಡ್ಡ ಬಾವಿ ಇದೆಯಂತೆ. ಯುವತಿಯೊಬ್ಬಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ. ಆಕೆಯ ಆತ್ಮ ಬಾವಿ ಸುತ್ತ ಸುತ್ತುತ್ತಿರುತ್ತದೆ ಎಂಬ ನಂಬಿಕೆ ಅಲ್ಲಿನ ಜರದ್ದು. ಈಗಲೂ ವರ್ಷಕ್ಕೆರಡು ಬಾರಿ ಆ ಯುವತಿಯ ಶ್ರಾದ್ಧವನ್ನು ಬಾವಿ ಬಳಿ ಮಾಡುತ್ತಾರಂತೆ. ಪೂಜೆ ನಂತರ ಯಾರೋ ಬಾವಿಗೆ ಹಾರಿದ ಸದ್ದು ಕೇಳುತದಂತೆ. ನೀರಲ್ಲಿ ಅಲೆ ಹೊರತೂ ಯಾರೂ ಕಾಣಿಸಲ್ಲವಂತೆ. ಇಂದಿಗೂ ಆ ಘಟನೆ ಪ್ರತಿಭಾಗೆ ಬೆಚ್ಚಿಬೀಳಿಸಿದೆಯಂತೆ.

“ನಾಗಿಣಿ’ಯ ಅರ್ಜುನ್‌, ಅಣ್ಣನ ಜತೆ ಕುಂದಾಪುರದ ತೋಟದಲ್ಲಿ ರಾತ್ರಿ ವೇಳೆ ಪಂಪ್‌ಸೆಟ್‌ ಆನ್‌ ಮಾಡಲೂ ಹೋಗಿದ್ದರಂತೆ. ಆಗ ಯಾರೋ ಜೋರಾಗಿ ಕೂಗಿಕೊಂಡು ಕಲ್ಲುಗಳನ್ನು ಇವರ ಮೇಲೆ ಎಸೆಯೋಕೆ ಶುರುಮಾಡಿದರಂತೆ.  ಟಾರ್ಚ್‌ ಹಿಡಿದರು ನೋಡಿದಾಗ, ವ್ಯಕ್ತಿಯೊಬ್ಬ ತಮ್ಮತ ಓಡಿಬರುವುದನ್ನು ನೋಡಿ ಅರ್ಜುನ್‌ ಗಾಬರಿ ಆಗಿದ್ದರಂತೆ. ಪುನಃ ಟಾರ್ಚ್‌ ಹಿಡಿದರೆ, ಆ ವ್ಯಕ್ತಿ ಮಾಯವಂತೆ. ಆ ಘಟನೆ ಇಂದಿಗೂ ಅರ್ಜುನ್‌ ಮರೆತಿಲ್ಲ.

ಹೀಗೆ “ಜೋಡಿಹಕ್ಕಿ’ಯ ನಟಿ ಜಾನಕಿಗೂ ಮರೆಯದ ಅನುಭವ ಆಗಿದೆಯಂತೆ. ಇದು ಇವರ ನೈಜ ಅನುಭವವಾದರೆ, ಪ್ರತಿಯೊಬ್ಬರ ಬದುಕಲ್ಲೂ ಒಂದೊಂದು ಘಟನೆ ನಡೆದಿರುತ್ತೆ. ಅಂತಹ ಹಲವು ಘಟನೆ ಹೊತ್ತು “ನಿಗೂಢ ರಾತ್ರಿ’ ಬರುತ್ತಿದೆ. ಈ ಧಾರಾವಾಹಿಗೆ ಜೋನಿ ಫಿಲ್ಮ್ ಸಂಸ್ಥೆ ನಿರ್ಮಾಣವಿದೆ.

ಟಾಪ್ ನ್ಯೂಸ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.