ಕ್ರೌರ್ಯಕ್ಕೆ ಶಿಕ್ಷೆ: ಉಗ್ರರ ಶವ ಯಾರಿಗೂ ಬೇಡ!
Team Udayavani, Jul 25, 2017, 7:30 AM IST
ಮಿಸ್ರಾಟಾ: ಲಿಬಿಯಾದ ಕರಾವಳಿ ನಗರ ಸಿರ್ತೆಯನ್ನು ಇಲ್ಲಿನ ಸೇನಾಪಡೆಯು ಐಸಿಸ್ ಕಪಿಮುಷ್ಟಿಯಿಂದ ವಶಕ್ಕೆ ಪಡೆದು 7 ತಿಂಗಳುಗಳೇ ಕಳೆಯಿತು. ಆದರೆ, ಆ ಕಾರ್ಯಾಚರಣೆ ವೇಳೆ ಮೃತಪಟ್ಟ ನೂರಾರು ಮಂದಿ ಐಸಿಸ್ ಉಗ್ರರ ಮೃತದೇಹಗಳು ಇನ್ನೂ ಫ್ರೀಜರ್ನಲ್ಲೇ ಇವೆಯಂತೆ! ಅಷ್ಟೇ ಅಲ್ಲ, ಅವರ ಮೃತದೇಹಗಳನ್ನು ಒಯ್ಯಲು ಯಾವ ದೇಶವೂ ಮುಂದೆ ಬರುತ್ತಿಲ್ಲವಂತೆ!
ಉಗ್ರರ ಮೃತದೇಹಗಳನ್ನೆಲ್ಲ ಮಿಸ್ರಾಟಾಗೆ ಸಾಗಿಸಲಾಗಿದ್ದು, ಅಲ್ಲಿ ಅವು ಕೆಡದಂತೆ ಇಡಲಾಗಿದೆ. ಇವೆಲ್ಲವೂ ವಿದೇಶಿ ಉಗ್ರರ ಶವಗಳಾಗಿದ್ದು, ಯಾವ ದೇಶವೂ ಅದು ತಮ್ಮ ನಾಗರಿಕರ ಶವ ಎಂದು ಹೇಳುತ್ತಿಲ್ಲ. ಹೀಗಾಗಿ, ಅವುಗಳನ್ನು ರಕ್ಷಿಸುವುದು, ಡಿಎನ್ಎ ಮಾದರಗಳನ್ನು ಸಂಗ್ರಹಿಸಿಡುವುದು, ಫೋಟೋಗಳನ್ನು ತೆಗೆದಿಡುವುದು ಎಲ್ಲವೂ ಸವಾಲಿನ ಕೆಲಸವಾಗಿದೆ ಎಂದು ಹೇಳುತ್ತಾರೆ ಲಿಬಿಯಾದ ಅಧಿಕಾರಿಗಳು. ಟ್ಯುನೀಷಿಯಾ, ಸುಡಾನ್ ಮತ್ತು ಈಜಿಪ್ಟ್ನ ಹಲವು ನಾಗರಿಕರು ಐಸಿಸ್ ಸೇರ್ಪಡೆಗೊಳ್ಳಲು ಲಿಬಿಯಾಗೆ ತೆರಳಿದ್ದರು. ಆದರೆ, ಸತ್ತಿರುವವರು ಅವರೇನಾ ಎಂಬುದನ್ನು ದೃಢಪಡಿಸಲು ಈ ದೇಶಗಳು ಹಿಂದೇಟು ಹಾಕುತ್ತಿವೆ.
ಕಾಬೂಲ್ ಸ್ಫೋಟಕ್ಕೆ 35 ಮಂದಿ ಬಲಿ
ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಸೋಮವಾರ ಕಾರು ಬಾಂಬ್ ಸ್ಫೋಟ ನಡೆದಿದ್ದು, ಕನಿಷ್ಠ 35 ಮಂದಿ ಸಾವಿಗೀಡಾಗಿದ್ದಾರೆ. 42 ಮಂದಿ ಗಾಯಗೊಂಡಿದ್ದಾರೆ. ಸರಕಾರಿ ನೌಕರರನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಸ್ಫೋಟಕ ತುಂಬಿದ್ದ ಕಾರು ಬಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಸ್ಫೋಟ ಸಂಭವಿಸಿದೆ. ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ