ಶಿಖರವನ್ನಾದ್ರೂ ನಡುಗಿಸಬಹುದು, ಚೀನಾ ಸೇನೆಯನ್ನ ಮುಟ್ಟಕ್ಕಾಗಲ್ಲ!
Team Udayavani, Jul 25, 2017, 5:15 AM IST
ಹೊಸದಿಲ್ಲಿ/ಬೀಜಿಂಗ್: ‘ಪರ್ವತವನ್ನಾದರೂ ನಡುಗಿಸಬಹುದು. ಆದರೆ ನಮ್ಮ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ನಿಮ್ಮಿಂದ ಮುಟ್ಟಲೂ ಆಗದು’ ಎಂದು ಹೇಳುವ ಮೂಲಕ ಚೀನಾ ಮತ್ತೆ ಭಾರತದ ವಿರುದ್ಧ ಯುದ್ಧದ ಮಾತುಗಳನ್ನಾಡಿದೆ. ಸಿಕ್ಕಿಂ ಗಡಿ ವಿವಾದ ಸಂಬಂಧ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯ ಈ ಹೇಳಿಕೆಯೊಂದಿಗೆ ತನ್ನ ಸೇನಾ ಬಲದ ಬಗ್ಗೆ ಗುಣಗಾನ ಮಾಡಿಕೊಂಡಿದ್ದಲ್ಲದೇ, ಭಾರತ ತಾನು ಮಾಡಿರುವ ತಪ್ಪನ್ನು ತಿದ್ದಿಕೊಳ್ಳುವುದನ್ನು ಕಲಿಯಲಿ. ಗಡಿಯಲ್ಲಿ ನಿಯೋಜಿಸಿದ ಸೇನೆಯನ್ನು ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಲಿ ಎಂದು ಹೇಳಿದೆ.
ಡೋಕ್ಲಾಂನಲ್ಲಿ ಕಳೆದ 2 ತಿಂಗಳಿಂದ ಚೀನಾವು ನಿರಂತರವಾಗಿ ಕ್ಯಾತೆ ತೆಗೆದು ಕಾಲ್ಕೆರೆದು ಜಗಳಕ್ಕೆ ಬರುತ್ತಿದೆ. ಸೋಮವಾರ ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ವು ಕ್ವಿಯಾನ್, ‘ಪರ್ವತವನ್ನು ಸುಲಭವಾಗಿ ನಡುಗಿಸಬಹುದು. ಆದರೆ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನಲ್ಲ. ನಮ್ಮ ಆರ್ಮಿ ಪಡೆ ಸಾಕಷ್ಟು ಪ್ರಾಬಲ್ಯದಿಂದ ಕೂಡಿದೆ. ಭಾರತವು ನಮ್ಮ ಸಾಮರ್ಥ್ಯದ ಕುರಿತು ಭ್ರಮೆಯಲ್ಲಿದೆ’ ಎಂದು ಹೇಳಿದ್ದಾರೆ.
ಕಳೆದೆರಡು ತಿಂಗಳಿಂದ ಉಭಯ ರಾಷ್ಟ್ರಗಳ ನಡುವೆ ಸಿಕ್ಕಿಂನ ಗಡಿ ಡಾಂಗ್ಲ್ಯಾಂಗ್ ವಲಯದಲ್ಲಿ ಚೀನಾ ಗಡಿ ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಾಣಕ್ಕೆ ಮುಂದಾದ ಹಿನ್ನೆಲೆಯಲ್ಲಿ ಸಂಘರ್ಷ ಹುಟ್ಟಿಕೊಂಡಿದ್ದು, ಅದೀಗ ತಾರಕಕ್ಕೇರಿದೆ. ಇದೇ ವಿಚಾರವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಳೆದ ವಾರ ತುಸು ಖಾರವಾಗಿಯೇ ಉತ್ತರಿಸಿದ್ದರು. ‘ಎರಡೂ ದೇಶ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡು ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಮುಂದಾಗೋಣ’ ಎಂದೂ ಹೇಳಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಇದೀಗ ಚೀನಾ ಈ ಹೇಳಿಕೆ ನೀಡಿ ಎಚ್ಚರಿಸಲು ಮುಂದಾಗಿದೆ. ‘ಒಂದೊಮ್ಮೆ ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳದೇ ಇದ್ದರೆ, ಅದರಿಂದಾಗುವ ಪರಿಣಾಮವನ್ನು ಎದುರಿಸಿ’ ಎಂದೂ ವು ಕ್ವಿಯಾನ್ ಹೇಳಿದ್ದು, ಇದಕ್ಕೆ ಭಾರತ ಇನ್ನೂ ಯಾವುದೇ ಉತ್ತರ ನೀಡಿರುವ ಬಗ್ಗೆ ವರದಿಯಾಗಿಲ್ಲ.
ಭಾರತೀಯ ರಾಯಭಾರಿಗೆ ಪಾಕ್ನಿಂದ ಸಮನ್ಸ್
ಇನ್ನೊಂದೆಡೆ, ಪಾಕಿಸ್ಥಾನವೂ ತನ್ನ ಉದ್ಧಟತನ ಮುಂದುವರಿಸಿದೆ. ಗಡಿಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘಿಸುತ್ತಿದ್ದರೂ, ಭಾರತದ ಮೇಲೆ ಗೂಬೆ ಕೂರಿಸಿದೆ. ಎಲ್ಒಸಿಯಲ್ಲಿ ಭಾರತವೇ ಗುಂಡಿನ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ಭಾರತದ ಡೆಪ್ಯುಟಿ ಹೈಕಮಿಷನರ್ ಜೆ.ಪಿ.ಸಿಂಗ್ ಅವರನ್ನು ಕರೆಸಿ ಪ್ರತಿಭಟನೆ ಸಲ್ಲಿಸಿದೆ. ಭಾರತದ ದಾಳಿಯಿಂದ ನಾಗರಿಕ ಮೃತಪಟ್ಟಿದ್ದಾನೆಂದು ಪಾಕಿಸ್ಥಾನ ಆರೋಪಿಸಿದೆ.
ದ್ವಿಪಕ್ಷೀಯ ಮಾತುಕತೆಯಲ್ಲಿ ಗಡಿ ವಿವಾದ ಪ್ರಸ್ತಾಪ ಸಾಧ್ಯತೆ
ಸಿಕ್ಕಿಂ ಗಡಿ ವಿವಾದವನ್ನು ಬಗೆ ಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಹಾಗೂ ಚೀನಾ ರಾಜತಾಂತ್ರಿಕವಾಗಿಯೇ ಹೆಜ್ಜೆ ಇಡುತ್ತಿದೆ. ಈ ವಾರ ಬೀಜಿಂಗ್ನಲ್ಲಿ ನಡೆಯಲಿರುವ ಬ್ರಿಕ್ಸ್ ಎನ್ಎಸ್ಎ ಸಭೆಯಲ್ಲಿ ಕೌನ್ಸಿಲರ್ ಯಾಂಗ್ ಜಿಯೇಚಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. ಚೀನಾ ವಿದೇಶಾಂಗ ವಕ್ತಾರ ಲು ಕಾಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ದೋವಲ್ ಹಾಗೂ ಯಾಂಗ್ ಈ ವಿಚಾರವಾಗಿ ಚರ್ಚಿಸುವ ಸಾಧ್ಯತೆ ಇದೆ. ಆದರೆ ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈಗಲೇ ಈ ಬಗ್ಗೆ ಹೇಳುವಷ್ಟು ಮಾಹಿತಿಯೂ ನನ್ನ ಬಳಿ ಇಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…