ಜನಾದೇಶ ಬಿಹಾರ ಜನಸೇವೆಗೆ; ಒಂದು ಕುಟುಂಬದ ಸೇವೆಗಲ್ಲ: ನಿತೀಶ್
Team Udayavani, Jul 28, 2017, 7:17 PM IST
ಹೊಸದಿಲ್ಲಿ : ಬಿಹಾರದ ಜನತೆ ನನಗೆ ಜನಾದೇಶ ಕೊಟ್ಟದ್ದು ಒಂದು ಕುಟುಂಬದ ಸೇವೆ ಮಾಡುವುದಕ್ಕಲ್ಲ; ಬದಲು ಪಾರದರ್ಶಕ ಆಡಳಿತ ಮತ್ತು ರಾಜ್ಯದ ಅಭಿವೃದ್ಧಿ ಸಾಧನೆಗಾಗಿ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಚರ್ಚೆಯಲ್ಲಿ ಹೇಳಿದರು.
ಜಾತ್ಯತೀತತೆ ಎನ್ನುವುದು ಸಿದ್ಧಾಂತವಾಗಿರಬೇಕು ಮತ್ತು ಆಚರಣೆಯಲ್ಲಿರಬೇಕು, ಹೊರತು ಭ್ರಷ್ಟಾಚಾರವನ್ನು ಮುಚ್ಚಿಡುವುದಕ್ಕೆ ಅಲ್ಲ. ಜಾತ್ಯತೀತತೆ ಬಗ್ಗೆ ನನಗೆ ಯಾರೂ ಪಾಠ ಮಾಡಬೇಕಾಗಿಲ್ಲ; ಪರಿಸ್ಥಿತಿ ಏನೆಂಬುದು ನನಗೆ ಚೆನ್ನಾಗಿ ಗೊತ್ತು ಎಂದು ನಿತೀಶ್ ತಮ್ಮ 10 ನಿಮಿಷದ ಭಾಷಣದಲ್ಲಿ ಕಟುವಾಗಿ ಹೇಳಿದರು.
ಮುಖ್ಯಮಂತ್ರಿ ಅವರಿಂದ ಸದನದಲ್ಲಿ 131 – 108 ಮತಗಳ ಅಂತರದಲ್ಲಿ ವಿಶ್ವಾಸವನ್ನು ಗೆದ್ದು ರಾಜ್ಯದಲ್ಲಿ ಹೊಸ ಮೈತ್ರಿ ಕೂಟ ಸರಕಾರವನ್ನು (ಎನ್ಡಿಎ-ಜೆಡಿಯು) ಸ್ಥಾಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ