ತಾಳ ತಪ್ಪುತ್ತಿರುವ ಹರತಾಳ ಬಿಜೆಪಿ ಕರೆಗೆ ಕುಂಬಳೆ, ಉಪ್ಪಳ ಬಂದ್‌!


Team Udayavani, Jul 31, 2017, 6:55 AM IST

30-kbl-9.jpg

ಕುಂಬಳೆ: ಕೇರಳ ರಾಜ್ಯದಲ್ಲಿ ರಾಜಕೀಯ ಕೊಲೆಗಳು ನಿರಂತರವಾಗಿ ಮುಂದುವರಿಯುತ್ತಿದ್ದು ಇದರ ಪ್ರತಿ
ಭಟನೆಗಾಗಿ ರಾಜಕೀಯ ಪಕ್ಷಗಳು ಹರತಾಳದ ಅಸ್ತ್ರ  ಪ್ರಯೋಗಿಸುತ್ತಿರುವುದರಿಂದ ಜನರು ಹೈರಾಣಾಗುತ್ತಿದ್ದಾರೆ.

ರಾತ್ರಿ ಕೊಲೆ ನಡೆದು ಬೆಳಗಾಗುವಷ್ಟರಲ್ಲಿ ಹರತಾಳ ಘೋಷಣೆಯಾಗಿರುತ್ತದೆ. ಇದರಿಂದ ಜನತೆ ತೀವ್ರ ಸಂಕಷ್ಟವನ್ನು ಅನುಭವಿಸಬೇಕಾಗುವುದು. ಹಳ್ಳಿಯಲ್ಲಿ ಕೇವಲ ಖಾಸಗಿ ಬಸ್‌ ಸಂಚಾರವಿರುವ ಪ್ರದೇಶದ ಜನತೆ ಹರತಾಳದ ಕಹಿ ಅನುಭವವಕ್ಕೆ ಸಿಲುಕಬೇಕಾಗಿದೆ.

ಯಾವುದಾದರೊಂದು ಪ್ರದೇಶದಲ್ಲಿ ಕೊಲೆ ಇನ್ನಿತರ ಅಹಿತಕರ ಘಟನೆ ನಡೆದಾಗ ಇಡೀ ರಾಜ್ಯದಲ್ಲಿ ಹರತಾಳ ಘೋಷಿಸಿ ರಾಷ್ಟ್ರೀಯ ನಷ್ಟ ಅನುಭವಿಸಬೇಕಾಗಿದೆ.ಇದರಿಂದ ಜನ ತತ್ತರಿಸುವಂತಾಗುವುದು. ಪೂರ್ವ ನಿಶ್ಚಿತ ಕಾರ್ಯಕ್ರಮಗಳು ಮೊಟಕುಗೊಂಡು ನಷ್ಟ ಅನುಭವಿಸ ಬೇಕಾಗುವುದು. 

ಹರತಾಳದ ಬಳಿಕ ಸರ್ವಪಕ್ಷ ಸಭೆ ಸೇರಿದಾಗ ಹರತಾಳಕ್ಕೆ ವಿರೋಧ ವ್ಯಕ್ತಪಡಿಸುವ ರಾಜ ಕೀಯ ನಾಯಕರೇ ಮುಂದೆ ತನ್ನ ರಾಜಕೀಯ ಪಕ್ಷದ ಹರತಾಳವನ್ನು ಬೆಂಬಲಿಸುವುದು ದುರಂತವಾಗಿದೆ. ಬಂದ್‌ ಮಾಡಬಾರದೆಂಬುದಾಗಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಬಂದ್‌ ಹರತಾಳವಾಗಿ ಮಾರ್ಪಟ್ಟಿದೆ.

ಪೂರ್ಣ ಬಂದ್‌
ರಾಜಧಾನಿ ತಿರುವನಂತಪುರದಲ್ಲಿ ಆರ್‌.ಎಸ್‌.ಎಸ್‌.ಕಾರ್ಯವಾಹ ರಾಜೇಶ್‌ ಕೊಲೆಯನ್ನು ಖಂಡಿಸಿ ರವಿವಾರದಂದಿನ ಬಿಜೆಪಿ ಕರೆ ನೀಡಿದ ಹರತಾಳದಲ್ಲಿ ಕುಂಬಳೆ ಉಪ್ಪಳ ಮೊದಲಾದೆಡೆಗಳಲ್ಲಿ ಪೇಟೆ ಪೂರ್ಣ ಬಂದ್‌ ಆಗಿದ್ದು ಜನಸಂಚಾರ ವಿರಳವಾಗಿತ್ತು. ರಜಾ ದಿನವಾದ ಕಾರಣ ಸರಕಾರಿ ಅರೆ ಸರಕಾರಿ ಮತ್ತು ಬ್ಯಾಂಕ್‌, ಶಾಲೆಗಳಿಗೆ ತೆರಳುವವರಿಗೆ ಒಂದು ಬೋನಸ್‌ ರಜೆ ನಷ್ಟವಾಯಿತು. ಸರಕಾರಿ, ಖಾಸಗಿ ಬಸ್‌ ಸಂಚರಿಸದಿದ್ದರೂ ಕೆಲವು ಖಾಸಗಿ ವಾಹನಗಳು ಭಯದಿಂದ ವಿರಳವಾಗಿ ಸಂಚರಿಸಿದವು. ತಾಳ ತಪ್ಪುತ್ತಿರುವ ಹರತಾಳದಿಂದ ರಾಜ್ಯದ ಅಭಿವೃದ್ಧಿ ಕುಂಟಿತವಾಗುತ್ತಿದೆ. ವಿದ್ಯಾಲಯಗಳಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿದೆ ಎಂಬ ಆರೋಪ ಬಲವಾಗಿದೆ.ಆದರೆ ಯಾವ ಪಕ್ಷಗಳೂ ಹರತಾಳದಿಂದ ಹಿಂಜರಿಯಲು ಸಿದ್ಧವಿಲ್ಲ.

ಕೊಲೆಯನ್ನು ಪ್ರತಿಭಟಿಸಿ ಕುಂಬಳೆಯಲ್ಲಿ ಬಿ.ಜೆ.ಪಿ. ವತಿಯಿಂದ ಪ್ರತಿಭಟನೆ ನಡೆಯಿತು. ಪಕ್ಷದ ನಾಯಕರಾದ ಸುರೇಶ್‌ ಕುಮಾರ್‌ ಶೆಟ್ಟಿ, ಕೆ. ವಿನೋದನ್‌, ಎಚ್‌.ಸತ್ಯಶಂಕರ ಭಟ್‌, ಎಂ .ಶಂಕರ ಆಳ್ವ , ಬಾಬು ಗಟ್ಟಿ, ಶಂಕರ ಕುಂಟಂಗರಡ್ಕ, ಕೆ. ರಮೇಶ್‌ ಭಟ್‌, ಕೆ. ಸುಧಾಕರ ಕಾಮತ್‌, ದಿನೇಶ್‌ ಆರಿಕ್ಕಾಡಿ, ಹರೀಶ್‌ ಗಟ್ಟಿ, ಸುಜಿತ್‌ ರೈ, ಅನಿಲ್‌ ಶೆಟ್ಟಿ ಮುಂತಾದವರು ನೇತೃತ್ವ ನೀಡಿದರು.

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.