ಮಡಿವಾಳರಿಗೆ ಪರಿಶಿಷ್ಟ  ಮೀಸಲಾತಿ ಸಿಗಲಿ


Team Udayavani, Jul 31, 2017, 12:53 PM IST

31-CHIT-4.jpg

ಚಿತ್ರದುರ್ಗ: ಶೋಷಿತ ಮಡಿವಾಳ ಸಮುದಾಯಕ್ಕೆ ಪರಿಶಿಷ್ಟರ ಮೀಸಲಾತಿ ನೀಡಿ ಮುಖ್ಯವಾಹಿನಿಗೆ ತರಬೇಕು ಎಂದು ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಒತ್ತಾಯಿಸಿದರು.

ನಗರದ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಚಿದೇವ ಮಠದಿಂದ ಶಿಕ್ಷಣ ದತ್ತಿ ನಿಧಿ  ಪಡೆದ ಫಲಾನುಭವಿ ಕುಟುಂಬಗಳಿಗೆ ಗುರುತಿನಪತ್ರ
ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮಡಿವಾಳ ಸಮಾಜ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಬಲಿಷ್ಠ ನಾಯಕತ್ವ ಇಲ್ಲ. ಜನಸಂಖ್ಯೆಯಲ್ಲಿ ಬಲಾಡ್ಯವೂ ಅಲ್ಲ. ಸಮುದಾಯದವರ ಮೇಲೆ ಬಲಿಷ್ಠರು ದೌರ್ಜನ್ಯ, ದಬ್ಟಾಳಿಕೆ ನಡೆಸುತ್ತಿದ್ದಾರೆ. ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಶೇ. 99ರಷ್ಟು ಜನರು ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಂದಿಗೂ ಈ ಸಮುದಾಯ ಬಟ್ಟೆ ತೊಳೆಯುವ ಕುಲಕಸುಬನ್ನು ನಂಬಿಕೊಂಡೇ ಜೀವನ ಸಾಗಿಸುತ್ತಿದೆ ಎಂದರು.

ನಮ್ಮ ಮಠ ಒಂದೊಂದೇ ಮೆಟ್ಟಿಲು ಹತ್ತಿಕೊಂಡು ಬರುತ್ತಿದೆ. ಮಠ ಬೆಳೆದಿದೆ ಎಂದರೆ ಅದಕ್ಕೆ ಮುರುಘಾ ಶರಣರ ಆಶೀರ್ವಾದ, ನಿಮ್ಮೆಲ್ಲರ ಪರಿಶ್ರಮವೇ ಕಾರಣ. ನಮ್ಮ ಮುಂದೆ ಬಹುದೊಡ್ಡ ಸವಾಲಿದೆ. ಶ್ರೀಮಠದ ಬೆಳವಣಿಗೆ ಜತೆಯಲ್ಲಿ ಸಮುದಾಯ ತನ್ನದೆ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಮಾಜವನ್ನು ಬಲಿಷ್ಠ ಮತ್ತು ನಿಸ್ವಾರ್ಥವಾಗಿ ಕಟ್ಟುವಂತಹ ಜನರ ಸಂಖ್ಯೆ ಹೆಚ್ಚಾಗಬೇಕು ಎಂದು ಆಶಿಸಿದರು. ಮಹಾರಾಷ್ಟ್ರದ ಸಾಂಗ್ಲಿಯ ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಶಿವಾನಂದ ಕಲಕೇರಿ ಮಾತನಾಡಿ, ಸಮಾಜದಲ್ಲಿ ಇಂದಿಗೂ ವೃತ್ತಿ ಕೇಂದ್ರಿತ ಮತ್ತು ಧರ್ಮ ಕೇಂದ್ರಿತ ವ್ಯವಸ್ಥೆಯಿದೆ. ಮುರುಘಾ ಶರಣರು ಸಮಾಜದ ಗುರುಗಳಿಗೆ ದಿಧೀಕ್ಷೆ ನೀಡಿ ಧರ್ಮದ ವಿಕೇಂದ್ರೀಕರಣ ಮಾಡಿ ಸ್ವಾವಲಂಬಿಯಾಗಿ ಬದುಕುವಂತಹ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದು ಶ್ಲಾಘಿಸಿದರು.

ಐಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನೂಪ್‌ ನಂಜುಂಡಸ್ವಾಮಿ ಮಾತನಾಡಿ, ನಾವು ಹಳ್ಳಿಗಾಡಿನಿಂದ ಬಂದಿದ್ದೇವೆ. ನಮಗೆ ಇಂಗ್ಲಿಷ್‌ ಬರುವುದಿಲ್ಲ, ಕನ್ನಡ ಮಾಧ್ಯಮದ ವಿದ್ಯಾರ್ಥಿ ಎನ್ನುವ ಕೀಳರಿಮೆ ಬೇಡ. ಇಂತಹ ಕೀಳರಿಮೆಯಿಂದ ಐಎಎಸ್‌, ಐಪಿಎಸ್‌ನಂತಹ ಪರೀಕ್ಷೆ ತೆಗೆದುಕೊಳ್ಳದೆ ಅವಕಾಶ ವಂಚಿತರಾಗಬೇಡಿ. ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿಯೇ ಸಾಧನೆ
ಮಾಡಿರುವುದಾಗಿ ತಿಳಿಸಿದರು. 

ಮುಖಂಡ ರಾಜು ಕಲ್ಲೂರ್‌ ಮಾತನಾಡಿ, ಮಡಿವಾಳ ಸಮುದಾಯ ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ ಸಮುದಾಯದ ಯಾರೊಬ್ಬರೂ ಶಾಸಕರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಟಿ. ರಮೇಶ್‌, ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮದ ನಿರ್ದೇಶಕ ಕೂನಬೇವು ಶ್ರೀನಿವಾಸಮೂರ್ತಿ, ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿರ್ದೇಶಕ ಬಿ. ಹನುಮಂತರಾಯ, ರಂಗಸ್ವಾಮಿ ಇದ್ದರು.

ಮಡಿವಾಳ ಸಮಾಜಕ್ಕಿದೆ ಮುರುಘಾ ಶರಣರ ಆಶೀರ್ವಾದ 
ಮಡಿವಾಳ ಸಮಾಜಕ್ಕೆ ಮುರುಘಾ ಶರಣರು ಎಲ್ಲ ರೀತಿಯ ಆಶೀರ್ವಾದ ಮಾಡಿದ್ದಾರೆ. ಮುರುಘಾ ಶರಣರಲ್ಲಿ ಬಸವಣ್ಣ, ಮಾಚಿದೇವರನ್ನು ಏಕಕಾಲದಲ್ಲಿ ನೋಡುವಂತಾಗಿದೆ. ಅವರು ಶೋಷಿತ, ಹಿಂದುಳಿದ ಸಮುದಾಯಗಳನ್ನು ಮೇಲೆತ್ತಲು  ದೀಕ್ಷೆ ನೀಡಿ ಸಹಕರಿಸಿದರು.

ಇಂತಹ ಕಾರ್ಯದಿಂದ ಶರಣರು ಸಂತಸ ಪಡುವುದಕ್ಕಿಂತ ನೋವು ಅನುಭವಿಸಿದ್ದೇ ಹೆಚ್ಚು. ಎದೆಯೊಡ್ಡಿ ನಿಂತು ಎಲ್ಲಾ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡಿದ ಧೈರ್ಯಶಾಲಿಗಳಾಗಿದ್ದಾರೆ ಎಂದು ಬಸವ ಮಾಚಿದೇವ ಸ್ವಾಮೀಜಿ ಹೇಳಿದರು. ಮಠಾಧೀಶರು ರಾಜಕಾರಣಿಗಳ ಕೈಗೊಂಬೆಯಲ್ಲ: ಶಿಮುಶ
ಚಿತ್ರದುರ್ಗ: ಧಾರ್ಮಿಕ ಗುರುಪೀಠಗಳ ಸ್ವಾಮೀಜಿಗಳು ಆಸ್ತಿ, ಇತರೆ ಸೌಲಭ್ಯಕ್ಕಾಗಿ ರಾಜಕಾರಣಿಗಳ ಬಳಿ ಕೈಯೊಡ್ಡಿ ನಿಲ್ಲುವ ಸಂಸ್ಕೃತಿ ಕೊನೆಯಾಗಬೇಕು. ಯಾವುದೇ ಕಾವಿಧಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಬಾರದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.  ರಾಜಕಾರಣಿಗಳು ಕೊಡುವ ಆಸ್ತಿ, ಭೂಮಿ, ಹಣ ಇತ್ಯಾದಿಗಳನ್ನು ಪಡೆದು ಅವರ ಮನೆಗಳ ಮುಂದೆ ಕೈಕಟ್ಟಿ ನಿಂತುಕೊಳ್ಳುವುದನ್ನ ನಾವು ನೋಡುತ್ತಿದ್ದೇವೆ. ಆದರೆ ಬಸವ ಮಾಚಿದೇವ ಸ್ವಾಮೀಜಿ ಅವರದು ವಿಭಿನ್ನ ವ್ಯಕ್ತಿತ್ವ. ಅವರು ಯಾವುದೇ ಕಾರಣಕ್ಕೂ ರಾಜಕಾರಣಿಗಳ ಕೈಗೊಂಬೆ ಆಗುವುದಿಲ್ಲ ಎನ್ನುವ ವಿಶ್ವಾಸ ನಮಗಿದೆ ಎಂದರು.

ಬಸವ ಮಾಚಿದೇವ ಸ್ವಾಮೀಜಿಯವರಿಗೆ ಬಸವಣ್ಣ ಹಾಗೂ ಮಾಚಿದೇವರಿಗಿದ್ದ ಬದ್ಧತೆ ಇದೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಶರಣ ಪರಂಪರೆ ಜತೆಗೆ ಹೋಗುವುದು ಆದ್ಯ ಕರ್ತವ್ಯ ಎಂದು ಭಾವಿಸಿ, ಶಿಸ್ತುಬದ್ಧವಾಗಿ, ಪ್ರಬುದ್ಧವಾಗಿ ನಮ್ಮ ಜತೆ ಇದ್ದಾರೆ. ಬಸವ ಮಾಚಿದೇವ ಸ್ವಾಮೀಜಿಯವರು ಸ್ವಾಭಿಮಾನಿ. ಸ್ವಾಭಿಮಾನದ ಕಿಚ್ಚನ್ನು ಹಿಡಿದುಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ಮಡಿವಾಳ ಸಮಾಜ ಸ್ವಾಭಿಮಾನಿಗಳಾಗಿ ತಲೆ ಎತ್ತಿ ನಡೆಯುತ್ತಿದೆ. ಮಾಚಿದೇವರು ಹಾಕಿಕೊಟ್ಟ ತತ್ವ, ಸಿದ್ಧಾಂತಗಳನ್ನು ಪಾಲಿಸಿಕೊಂಡು ಸ್ವಾಭಿಮಾನ ಪೂರ್ಣ ಬದುಕು ನಡೆಸುತ್ತಿದ್ದಾರೆ. ಮಾಚಿದೇವರು ಹೊಲಸು ಬಟ್ಟೆಯನ್ನಷ್ಟೇ ಶುದ್ಧಗೊಳಿಸಲಿಲ್ಲ. ಆತ್ಮಶುದ್ಧಿಯನ್ನೂ ಮಾಡಿದರು. ಪರಮ ದಕ್ಷತೆ ಮತ್ತು ಆಪ್ತತೆ ತೋರಿದಂತ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಮಡಿವಾಳ ಸಮಾಜದಲ್ಲಿ ಐಎಎಸ್‌ ಮಾಡಿದವರು, ಉನ್ನತ ಶಿಕ್ಷಣ ಪಡೆದು ದೊಡ್ಡ ಹುದ್ದೆಯಲ್ಲಿರುವವರಿದ್ದಾರೆ. ವಿದ್ಯಾವಂತ ಸಮಾಜ ನಿಧಾನವಾಗಿ ಅನಾವರಣಗೊಳ್ಳುತ್ತಿದೆ. ಐಎಎಸ್‌, ಐಪಿಎಸ್‌, ಎಂಎಲ್‌ಎ, ಎಂಪಿಗಳಾಗುವ ಮೂಲಕ ಸಮಾಜ ಮತ್ತಷ್ಟು ಪ್ರಗತಿ ಸಾಧಿಸಲಿ ಎಂದರು.

ಟಾಪ್ ನ್ಯೂಸ್

Udupi: ಕಾಲೇಜಿಗೆಂದು ಹೋದ ಯುವತಿ ನಾಪತ್ತೆ

Udupi: ಕಾಲೇಜಿಗೆಂದು ಹೋದ ಯುವತಿ ನಾಪತ್ತೆ

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

Kundapura ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Kundapura ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

1-weewqeqw

Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಈಜಲು ಬಾರದಿದ್ದರೂ ಕೆರೆಯಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಯುವಕ

Tragedy: ಈಜಲು ಬಾರದಿದ್ದರೂ ಕೆರೆಯಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಯುವಕ

ಉತ್ತರಾಧಿಕಾರಿ ಆಯ್ಕೆ ಟ್ರಸ್ಟ್‌-ಹಿರಿಯರ ಹೊಣೆ: ಮಾದಾರ ಚನ್ನಯ್ಯ ಶ್ರೀ

ಉತ್ತರಾಧಿಕಾರಿ ಆಯ್ಕೆ ಟ್ರಸ್ಟ್‌-ಹಿರಿಯರ ಹೊಣೆ: ಮಾದಾರ ಚನ್ನಯ್ಯ ಶ್ರೀ

ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ… ಆಸ್ಪತ್ರೆಗೆ ದಾಖಲು

ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ… ಆಸ್ಪತ್ರೆಗೆ ದಾಖಲು

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Udupi: ಕಾಲೇಜಿಗೆಂದು ಹೋದ ಯುವತಿ ನಾಪತ್ತೆ

Udupi: ಕಾಲೇಜಿಗೆಂದು ಹೋದ ಯುವತಿ ನಾಪತ್ತೆ

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

Kundapura ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Kundapura ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

1-weewqeqw

Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.