ಸಿಂಧೂ ವಿವಾದದಲ್ಲಿ ಯಾರ ಪರವೂ ಇಲ್ಲ: ವಿಶ್ವಬ್ಯಾಂಕ್
Team Udayavani, Aug 1, 2017, 8:44 AM IST
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಉದ್ಭವಿಸಿರುವ, ಸಿಂಧೂ ನದಿ ನೀರು ಹಂಚಿಕೆ ವಿವಾದದ ಕುರಿತ ವಿಚಾರಣೆಯಲ್ಲಿ ಯಾರ ಪರವೂ ಇಲ್ಲದೆ ತಟಸ್ಥ ನೀತಿಯಲ್ಲಿದ್ದು, ಸೌಹಾರ್ದಯುತವಾಗಿ ಪ್ರಕರಣದ ಪರಿಹಾರಕ್ಕೆ ಶ್ರಮಿಸುವುದಾಗಿ ವಿಶ್ವಬ್ಯಾಂಕ್ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಂಧೂ ನದಿ ಉಪನದಿಗಳಲ್ಲಿ ಭಾರತ 2 ಜಲವಿದ್ಯುತ್ ಯೋಜನೆಗಳನ್ನು ಕೈಗೊಳ್ಳಲು ಚಿಂತಿಸಿದ್ದು, ಇದರಿಂದ 57 ವರ್ಷದ ಹಿಂದಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಉಲ್ಲಂಘನೆಯಾಗಲಿದೆ ಎಂದು ಪಾಕಿಸ್ಥಾನ ಆರೋಪಿಸಿತ್ತು. ಅಲ್ಲದೇ ಈ ಪ್ರಕರಣವನ್ನು ಪರಿಹರಿಸುವಂತೆ ಕೋರಿ ವಿಶ್ವಬ್ಯಾಂಕ್ಗೆ ಮೊರೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಇತ್ಯರ್ಥ ಸಂಬಂಧ ವಿಶ್ವಬ್ಯಾಂಕ್ ಸೋಮವಾರ ಸಭೆ ಕರೆದಿತ್ತು.
ಕಳೆದ ವಾರ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ನವತೇಜ್ ಸರ್ನಾ ಅವರಿಗೆ ಪತ್ರ ಕಳಿಸಿರುವ ವಿಶ್ವಬ್ಯಾಂಕ್ ಅಧಿಕಾರಿ ಅನ್ನೆಟ್ಟೆ ಡಿಕ್ಸನ್, ಸೌಹಾರ್ದಯುತವಾಗಿ ವಿವಾದ ಪರಿಹರಿಸುವತ್ತ ಎದುರು ನೋಡುತ್ತಿದ್ದೇವೆ. ಮಧ್ಯಸ್ಥಿಕೆಯಲ್ಲಿ ನಿಷ್ಪಕ್ಷಪಾತವಾಗಿ ಇರುತ್ತೇವೆ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ