ಕುಲಾಂತರಿ ಭ್ರೂಣ ಅಭಿವೃದ್ಧಿ
Team Udayavani, Aug 7, 2017, 7:45 AM IST
ಹೊಸದಿಲ್ಲಿ: ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಕುಲಾಂತರಿ ಭ್ರೂಣವೊಂದನ್ನು ಅಮೆರಿಕದ ವಿಜ್ಞಾನಿಗಳು ಬೆಳೆಸಿದ್ದು, ಅದರಲ್ಲಿ ಅನಾರೋಗ್ಯಕ್ಕೆ ಈಡಾಗುವ ವಂಶವಾಹಿಯನ್ನು ಪರಿವರ್ತಿಸಿದ್ದಾರೆ.
ಈ ಮೂಲಕ ಅನಾರೋಗ್ಯಕ್ಕೆ ಕಾರಣವಾಗುವ ವಂಶವಾಹಿಯನ್ನು ತಡೆಹಿಡಿಯ ಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇದು ಆರಂಭಿಕ ಹೆಜ್ಜೆಯಾಗಿದ್ದು, ಪೂರ್ಣ ಪ್ರಮಾಣದ ಮಗು ಜನನದಲ್ಲಿ ಮಹತ್ವದ ಅಂಶವಾಗಿದೆ. ಇದೇ ರೀತಿ ವಂಶವಾಹಿ ಪರಿವರ್ತನೆಗೆ ಹಿಂದೆ ಚೀನಾ ಯತ್ನಿಸಿತ್ತಾದರೂ ಅದರಲ್ಲಿ ಫಲಕಾರಿಯಾಗಲಿಲ್ಲ.
ಸಿಆರ್ಐಎಸ್ಪಿಆರ್ ಸಿಎಎಸ್9 ಎಂಬ ತಾಂತ್ರಿಕತೆ ಬಳಸಿ, ವಂಶವಾಹಿ ಪರಿವರ್ತಿಸಲಾಗಿದೆ. ಇದರಿಂದ ಹೃದಯಾ ಘಾತಕ್ಕೆ ಕಾರಣವಾಗುವ ವಂಶವಾಹಿಯನ್ನು ತಡೆಯಲಾಗಿದೆ. ಈವರೆಗೆ ಬೆಳೆಸಿದ ಭ್ರೂಣ ಗಳನ್ನು ಮಾನವ ಗರ್ಭದಲ್ಲಿ ಸ್ಥಾಪಿಸುವ ತಂತ್ರಜ್ಞಾನವಿರಲಿಲ್ಲ. ಮುಂದಿನ ದಿನಗಳಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಮಕ್ಕಳನ್ನು (ಪರಿವರ್ತಿತ ವಂಶವಾಹಿಯುಳ್ಳ ಮಗು) ಪಡೆವ ದಿನಗಳು ದೂರವಿಲ್ಲ. ಸಂಶೋಧಕರ ತಂಡದಲ್ಲಿ ಕಾಶ್ಮೀರ ಮೂಲದ ಸಂಜೀವ್ ಕೌಲ್ ಎಂಬುವವರು ಪ್ರಮುಖ ಪಾತ್ರವನ್ನು ವಹಿಸಿದ್ದು, ದಕ್ಷಿಣ ಕೊರಿಯಾ, ಅಮೆರಿಕ, ಚೀನಾ ವಿಜ್ಞಾನಿಗಳು ಭಾಗಿಯಾಗಿದ್ದಾರೆ.
ವಿಜ್ಞಾನಿಗಳು ಮಾಡಿದ್ದೇನು?: ಮಾರಕ ಕಾಯಿಲೆಗಳ ಪೈಕಿ ಹೆಚ್ಚಿನವು ವಂಶವಾಹಿ ಗಳಲ್ಲೇ ಬರುತ್ತವೆ. ಆರೋಗ್ಯವಂತ ಶಿಶು ಸೃಷ್ಟಿ ಈ ಸಂಶೋಧನೆಯ ಉದ್ದೇಶ. ಇದಕ್ಕೆ ಕಾಯಿಲೆ ತರುವ ವಂಶವಾಹಿಯನ್ನು ಪತ್ತೆ ಹಚ್ಚಿ, ಪರಿವರ್ತಿಸಿ ಭ್ರೂಣ ಬೆಳೆಸಲಾ ಗುತ್ತದೆ. ಸದ್ಯ ಕೆಲ ದಿನಗಳಷ್ಟೇ ಭ್ರೂಣ ಬೆಳೆಸಲಾಗುತ್ತದೆ. ಜೊತೆಗೆ ಬೆಳೆಸಿದ ಭ್ರೂಣವನ್ನು ಮಾನವ ಗರ್ಭದೊಳಗೆ ಇಡುವ ತಂತ್ರಜ್ಞಾನವೂ ಇಲ್ಲ. ಮುಂದಿನ ದಿನಗಳಲ್ಲಿ ಕೃತಕ ಗರ್ಭದ ಮೂಲಕ ಅಥವಾ ಬೆಳೆದ ಭ್ರೂಣವನ್ನು ಮಾನವ ಗರ್ಭದಲ್ಲಿಡುವ ತಂತ್ರಜ್ಞಾನ ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
MUST WATCH
ಹೊಸ ಸೇರ್ಪಡೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ