ಸಚಿವರ ಯತ್ನದಿಂದ 23 ಕೆರೆಗೆ ನೀರು
Team Udayavani, Aug 14, 2017, 3:15 PM IST
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ರ ಪ್ರಯತ್ನದಿಂದ ಇಂದು ದಾವಣಗೆರೆ, ಜಗಳೂರು ತಾಲೂಕಿನ 23 ಕೆರೆಗಳಿಗೆ
ನೀರು ಹರಿಯುತ್ತಿದ್ದು, ರೈತರು ಸಂಯಮದಿಂದ ಇರಬೇಕು ಎಂದು ಸಿರಿಗೆರೆಯ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಭಾನುವಾರ ತಾಲೂಕಿನ ಆನಗೋಡು ಸಮೀಪದ ಸಿದ್ಧನೂರು ಗ್ರಾಮದ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ರೈತರನ್ನು
ಉದ್ದೇಶಿಸಿ, ಮಾತನಾಡಿದ ಅವರು, ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಜಗಳೂರು ತಾಲೂಕಿನ 23 ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ವಲಯವಾರು ವಾಲ್Ìಗಳನ್ನು ಅಳವಡಿಸಲಾಗುವುದು. ನೀರನ್ನು ಸಮರ್ಪಕವಾಗಿ ಹರಿಸಬೇಕು ಎಂಬುದು ಇದರ ಉದ್ದೇಶ ಆಗಿದೆ ಎಂದರು.
ರೈತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ರೈತರಿಗೂ ಸಹ ನೀರು ಸಿಗಲಿದೆ. ರೈತರು ಅವಸರ ಪಟ್ಟು ಪೈಪ್ ಹಾಗೂ ವಾಲ್ಗಳನ್ನು ಹಾಳು ಮಾಡಿ, ಆಯಾ ಗ್ರಾಮಗಳ ಕೆರೆಗಳಿಗೆ ಮಾತ್ರವೇ ನೀರು ತುಂಬಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಬಾರದೆಂದು ಕಟ್ಟುನಿಟ್ಟಿನ ಸೂಚನೆ
ನೀಡಿದರು. 23 ಕೆರೆಗಳಿಗೆ ನೀರು ಹರಿಸುವ ವಾಲ್Ì ಗಳ ನಿಯಂತ್ರಣಕ್ಕಿಂತ ರೈತರ ಮನಸ್ಸಿನ ನಿಯಂತ್ರಣ ಅವಶ್ಯಕತೆ ಇದೆ ಎಂದು ಹೇಳಿದರು.
ಕೆಲವು ರೈತರ ದುರಾಸೆಯಿಂದ ಕೆಲವು ಅವಘಡಗಳು ಸಂಭವಿಸುತ್ತಿವೆ. ಇಂತಹ ಘಟನೆಗಳು ಮರುಕಳಿಸಬಾರದು. ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣದಿಂದ ನೀರಿನ ಸಮಸ್ಯೆ ಉಂಟಾಗಿದೆ. ಎಲ್ಲಾ ರೈತರಿಗೂ ಸಹ ದಾಹ ಇದೆ. ಆದರೆ ದಾಹವನ್ನು ನಮ್ಮ ಮೇಲೆ ವಿಶ್ವಾಸವಿಟ್ಟು ಸುಧಾರಿಸಿಕೊಳ್ಳಿ ಎಲ್ಲರಿಗೂ ಸಂತೃಪ್ತಿಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
23 ಕೆರೆಗಳ ಬಗ್ಗೆ ಯಾವುದೇ ಸಮಸ್ಯೆಗಳು ಬಂದರೂ ಪರಿಹರಿಸಲು ತುಂಗಭದ್ರೆ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ವೊಂದನ್ನು ಆರಂಭಿಸಲಾಗಿದೆ. ಈ ಗ್ರೂಪಿನಲ್ಲಿ ಆಯಾ ಭಾಗದ ರೈತರನ್ನು ಸಂಚಾಲಕರನ್ನಾಗಿ ನೇಮಿಸಿದ್ದು, ಮಠದಿಂದ ಕೆರೆಗಳಿಗೆ ಸಂಬಂಧಿ ಸಿದಂತೆ ಪ್ರಕಟಣೆ ಹೊರಡಿಸಲಾಗುವುದು. ತಮ್ಮ ಸಮಸ್ಯೆಗಳಿದ್ದರೆ ಮಾತ್ರ ಈ ಗ್ರೂಪಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್ ಮಾತನಾಡಿ, 2014 ರಿಂದ ನೀರು ತುಂಬಿಸುವ ಕಾರ್ಯ ನಡೆಯುತ್ತಿದೆ. ಆದರೆ ಮಳೆಗಾಲದ ವೈಪರೀತ್ಯದಿಂದ ನೀರು ಪೂರೈಕೆಯಾಗಿಲ್ಲ. ಪ್ರಸ್ತುತ ಎಲ್ಲಾ ತಾಂತ್ರಿಕ ದೋಷಗಳ ನಿವಾರಣೆಯಾಗಿ ಈಗ ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ. ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್. ಬಸವಂತಪ್ಪ, ಡಿಸಿಸಿ ಬ್ಯಾಂಕ್ನ ನಿರ್ದೇಶಕ ಗಂಗನಕಟ್ಟೆ ಗುರುಸ್ವಾಮಿ, ಎಪಿಎಂಸಿ
ಸದಸ್ಯ ಅಣಜಿ ಚಂದ್ರಶೇಖರ್, ನೀರಾವರಿ ಹೋರಾಟ ಸಮಿತಿಯ ಕೊಟ್ರೇಶ್ನಾಯ್ಕ, ಡಾ| ಮಂಜುನಾಥ್ಗೌಡ, ಗಡಿಗುಡಾಳ್ ಮಂಜುನಾಥ್, ಯು.ಜಿ. ಶಿವಕುಮಾರ್, ಶಶಿಧರ್ ಹೆಮ್ಮನಬೇತೂರು,ಇಂಜಿನಿಯರ್ಗಳಾದ ಕೊಟ್ರೇಶ್ ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ
Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು
Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ
MUST WATCH
ಹೊಸ ಸೇರ್ಪಡೆ
Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ
ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ
Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು
Housefull 5: ಕಾಮಿಡಿ ಜರ್ನಿಯ ʼಹೌಸ್ ಫುಲ್ʼ ಕುಟುಂಬಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ
T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ