ಸಾಮಾಜಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ: ಪ್ರೊ| ನಿರಂಜನ್
Team Udayavani, Aug 16, 2017, 10:38 AM IST
ಕಲಬುರಗಿ: ಇವತ್ತು ಭಾರತ ಭೌತಿಕವಾಗಿ ಅಷ್ಟು ಸಾಧನೆ, ಇಷ್ಟು ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಳ್ಳಬಹುದು. ಆದರೆ, ನಿಜವಾಗಿಯೂ ಇನ್ನೂ ನಮಗೆ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ, ಅದಕ್ಕಾಗಿ ಪರಿತಾಪ ಪಡುತ್ತಿದ್ದೇವೆ ಎಂದು ಗುವಿವಿ ಕುಲಪತಿ ಪ್ರೊ| ಎಸ್.ಆರ್.ನಿರಂಜನ್ ವಿಷಾದ ವ್ಯಕ್ತಪಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ರಾಜಕೀಯ ಸ್ವಾತಂತ್ರ್ವಯನ್ನು ನಾವು ಹಾಗೋ ಹೀಗೋ ಗಳಿಸಿಕೊಂಡಿದ್ದೇವೆ. ಆದರೆ, ಸಾಮಾಜಿಕ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿಲ್ಲ. ಹಲವಾರು ಜಾತಿ-ಧರ್ಮ, ಮತ-ಪಂಥ, ಮೇಲು-ಕೀಳು, ಶ್ರೀಮಂತ-ಬಡವ ಹಾಗೂ ಇತರೆ ಒಳ ಹತೋಟಿಗಳಿಂದ ನಾವು ಹೊರ ಬಂದಿಲ್ಲ. ಇದೇ ನಮ್ಮ ಉತ್ತರೋತ್ತರ ಅಭಿವೃದ್ಧಿಗೆ, ಸಾಧನೆಗಳಿಗೆ, ಸಂಶೋಧನೆಗಳಿಗೆ, ನೆಮ್ಮದಿ ಬದುಕಿಗೆ ತೊಡಕಾಗಿದೆ ಎಂದರು. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯವು
ಸಾಕಾರಗೊಂಡಿದೆಯೇ? ವಿನೋಭಾಜಿಯವರ ಸರ್ವೋದಯ ಸಾಧ್ಯವಾಗಿದೆಯೇ? ಇಂತಹ ಪ್ರಶ್ನೆಗಳಿಗೆ ನಮ್ಮ-ನಮ್ಮ ಆತ್ಮಗಳೇ ಉತ್ತರ ಕಂಡುಕೊಳ್ಳಬೇಕಾಗಿದೆ. ಸ್ವಾತಂತ್ರ್ಯವೆಂದರೆ ಸ್ವೆಚ್ಛಾಚಾರವಲ್ಲ. ದೇಶಕ್ಕೆ, ಸಮಾಜಕ್ಕೆ, ಜನಾಂಗಕ್ಕೆ ಹಿತವಾಗುವಂತೆ, ಸ್ವಯಂ ಪ್ರೇರಣೆಯಿಂದ ನಡೆದು ತೋರಿಸಬೇಕಾಗಿದೆ. ಈ ಕಾರಣದಿಂದಲೇ ನಮ್ಮ ಪೂರ್ವಜರು ಸ್ವಾತಂತ್ರ್ಯ ಎಂಬುದಕ್ಕೆ ಮೌಲ್ಯ, ಪ್ರಜ್ಞೆಯಸ್ಥಾನ ನೀಡಿದ್ದಾರೆ ಎಂದರು.ವಿಜ್ಞಾನ ಕ್ಷೇತ್ರದಲ್ಲಿ ನಾವು ಅಪಾರವಾದ ಸಾಧನೆ ಮಾಡಿದ್ದೇವೆ. ಆದರೆ ಸಾಮಾಜಿಕವಾಗಿ ಅನೇಕ ಅಸಮಾನ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದು ವಿಪರ್ಯಾವಲ್ಲವೆ? ವಿಜ್ಞಾನ ಕ್ಷೇತ್ರ ಎಂದಾಗ ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ದಿ| ಅಬ್ದುಲ್ ಕಲಾಂ ಅವರ ಆದರ್ಶಗಳು, ಕನಸುಗಳು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಅನುಸರಿಸಿದಾಗ ಅವರು ಕಂಡ ಕನಸು ನನಸಾದೀತು. ವಿದ್ಯಾರ್ಥಿಗಳು, ಶಿಕ್ಷಕರು ಈ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದು ಹೇಳಿದರು. ಕುಲ ಸಚಿವ ಪ್ರೊ| ದಯಾನಂದ ಅಗಸರ, ಕುಲಸಚಿವ (ಮೌ)ಪ್ರೊ| ಸಿ.ಎಸ್ .ಪಾಟೀಲ, ವಿತ್ತಾಧಿಕಾರಿ ರಾಜನಾಳಕರ ಲಕ್ಷ್ಮಣ, ಈಶ್ವರ ಇಂಗಿನ, ಸಾಯಬಣ್ಣ ಕೆಂಗೂರಿ, ಸಿಂಡಿಕೇಟ್ ಸದಸ್ಯ ಸಂಗನಗೌಡ ಪೊಲೀಸ್ ಪಾಟೀಲ, ವಿದ್ಯಾವಿಷಯಕ ಪರಿಷತ್ ಸದಸ್ಯ ಸತೀಶ ಅಲ್ಲೋಳ್ಳಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ| ಸಿದ್ದಪ್ಪ ಹಾಗೂ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ