ಮಾನವತೆ ಮೆರೆಯಲಿ: ಅಫ್ರಿದಿ ಸಂದೇಶ
Team Udayavani, Aug 16, 2017, 11:39 AM IST
ಹೊಸದಿಲ್ಲಿ: ಪಾಕಿಸ್ಥಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿರುವ ಭಾರತಕ್ಕೆ ಶುಭ ಹಾರೈಸಿದ್ದಾರೆ. ಗಡಿಯಲ್ಲಿ ಸದಾ ಶಾಂತಿ, ಸೌಹಾರ್ದದ ವಾತಾ ವರಣ ನೆಲೆಸಲಿ; ಮಾನವತೆ ಮೆರೆಯಲಿ ಎಂದಿದ್ದಾರೆ.
ಶಾಹಿದ್ ಅಫ್ರಿದಿ ತಮ್ಮ ಸಂದೇಶವನ್ನು ಟ್ವಿಟರ್ ಮೂಲಕ ಸಾರಿದ್ದು, “ಹ್ಯಾಪ್ಪಿ ಇಂಡಿಪೆಂಡೆನ್ಸ್ ಡೇ ಇಂಡಿಯಾ! ನೆರೆಹೊರೆ ಯವರನ್ನು ಬೇರ್ಪಡಿಸಲಾಗದು. ಶಾಂತಿ, ಸಹಿಷ್ಣುತೆ ಮತ್ತು ಪರಸ್ಪರ ಪ್ರೀತಿಗಾಗಿ ದುಡಿಯೋಣ. ಮಾನವತೆ ಮೆರೆಯಲಿ. ಇದರಲ್ಲಿ ಸೋಲದಿರೋಣ…’ ಎಂದು ಅಫ್ರಿದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.