ಚಿತ್ರರಂಗದ ದೃಷ್ಟಿಕೋನ ಬದಲಿಸುವ ಆಸೆ ಇತ್ತು


Team Udayavani, Aug 19, 2017, 4:01 PM IST

radhika-pandit.jpg

“ಗೌಡ್ರು ಹೆಣ್ಮಕ್ಲೇ ಹೀಗೆ ಮಾಡಲ್ಲ …’ ಹಾಗಂತ ಹೇಳಿ ಜೋರಾಗಿ ನಕ್ಕರು ರಾಧಿಕಾ ಪಂಡಿತ್‌. ಯಶ್‌ರೊಂದಿಗೆ ಮದುವೆಯಾದ ನಂತರ ರಾಧಿಕಾ ಪಂಡಿತ್‌, ಮಾಧ್ಯಮದೆದುರು ಕಾಣಿಸಿಕೊಂಡಿದ್ದೇ ಕಡಿಮೆ. ಒಂದೆರೆಡು ಸಮಾರಂಭಗಳಲ್ಲಿ ಕಾಣಿಸಿಕೊಂಡರೂ, ಮಾತನಾಡಿದ್ದು ಕಡಿಮೆ. ಶನಿವಾರ ಬೆಳಿಗ್ಗೆ, “ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ರಾಧಿಕಾ ಮನಬಿಚ್ಚಿ ಮಾತನಾಡಿದರು.

ಕಳೆದ ಎಂಟು ತಿಂಗಳಲ್ಲಿ ರಾಧಿಕಾ ಚೆನ್ನಾಗಿ ಅಡುಗೆ ಮಾಡುವುದಕ್ಕೆ ಕಲಿತರಂತೆ. “ಮುಂಚೆ ನನಗೆ ಮುದ್ದೆ ಮಾಡೋಕೆ ಬರುತ್ತಿರಲಿಲ್ಲ. ಈಗ ಕಲಿತಿದ್ದೀನಿ. ರೌಂಡ್‌ ಆಗಿ, ಯಾವುದೇ ಗಂಟಿಲ್ಲದೆ ಮುದ್ದೆ ಮಾಡುವುದಕ್ಕೆ ಬರುತ್ತೆ. ತುಪ್ಪ ಹಾಕದಿದ್ದರೂ ಗಂಟಿಲ್ಲದೆ ಮಾಡುವುದಕ್ಕೆ ಬರುತ್ತದೆ. ಅತ್ತೆ ಖುಷಿಯಾಗಿದ್ದಾರೆ. ಅವರು ಗಂಟಿದ್ಯಾ ಅಂತ ನೋಡಿದರು. ಇರಲಿಲ್ಲ. ಗೌಡ್ರು ಹೆಣ್ಮಕ್ಲೇ ಹೀಗೆ ಮಾಡಲ್ಲ …’ ಅಂತ ಹೇಳಿ ಖುಷಿಪಟ್ಟರು ರಾಧಿಕಾ ಪಂಡಿತ್‌.

ಇಂತಹ ಸಣ್ಣ ಖುಷಿಗಳನ್ನು ಅನುಭವಿಸುವುದಕ್ಕೆಂದೇ ಅವರು ಒಂದು ಬ್ರೇಕ್‌ ಪಡೆದರಂತೆ. “ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಬ್ರೇಕ್‌ ಪಡೆದಿರಲಿಲ್ಲ. ಹಾಗಾಗಿ ಮದುವೆಯಾದ ಮೇಲೆ ಬ್ರೇಕ್‌ ಪಡೆಯಬೇಕು ಎಂದು ನಾನು ಮೊದಲೇ ತೀರ್ಮನಿಸಿದ್ದೆ. ನನಗೆ ಫ್ಯಾಮಿಲಿ ಲೈಫ್ ಮಿಸ್‌ ಮಾಡಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ಹಾಗಾಗಿ ಅವಕಾಶಗಳು ಬರುತ್ತಿದ್ದರೂ, ನಾನು ಒಪ್ಪಿರಲಿಲ್ಲ. ಈಗೊಂದು ತಿಂಗಳ ಹಿಂದೆ ಒಂದು ಚಿತ್ರ ಒಪ್ಪಿಕೊಂಡೆ.

ನಾನು ಒಪ್ಪಿದ್ದಿಕ್ಕೂ ಕಾರಣವಿದೆ. ಪ್ರಮುಖವಾಗಿ ಚಿತ್ರರಂಗದ ದೃಷ್ಟಿಕೋನ ಬದಲಿಸಬೇಕಿತ್ತು. ನನ್ನ ಸಮಕಾಲೀನರ್ಯಾರೂ ಮದುವೆಯಾಗಿಲ್ಲ. ಆದರೂ ನಟನೆಗೆ ವಾಪಸ್ಸಾಗಿಲ್ಲ. ನಾನು ಒಂದು ಉದಾಹರಣೆಯಾಗಬೇಕಿತ್ತು. ಒಬ್ಬ ನಟಿಯ ಪ್ರೊಫೆಷನಲ್‌ ಜೀವನಕ್ಕೂ ಪರ್ಸನಲ್‌ ಜೀವನಕ್ಕೂ ಸಂಬಂಧವಿಲ್ಲ. ಮದುವೆಯಾದ ನಂತರ ಸಹ ನಟಿಸಬಹುದು ಎಂದು ಜನರಿಗೆ ಹೇಳಬೇಕಿತ್ತು. ಮದುವೆ ಅನ್ನೋದು ಒಬ್ಬ ಮನುಷ್ಯನ ಜೀವನದ ಒಂದು ಘಟನೆ.

ಹಾಗಾಗಿ ಮದುವೆಯ ನಂತರವೂ ನಟಿಸುವ ಆಸೆ ಇತ್ತು. ಹೀಗಿರುವಾಗಲೇ ನನಗೆ ರಾಕ್‌ಲೈನ್‌ ಪ್ರೊಡಕ್ಷನ್‌ನಿಂದ ಒಂದು ಚಿತ್ರದಲ್ಲಿ ನಟಿಸೋಕೆ ಅವಕಾಶ ಬಂತು. ಚಿತ್ರಕ್ಕೆ ಹೆಸರಿಟ್ಟಿಲ್ಲ. ಪ್ರಿಯಾ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಚೆನ್ನಾಗಿದೆ. ಪಾತ್ರ ಇಷ್ಟವಾಯಿತು. ಅದಕ್ಕೇ ಒಪ್ಪಿಕೊಂಡೆ. ಈ ಕಥೆ ಮದುವೆಗೂ ಮುನ್ನವೇ ಬಂದಿದ್ದರೂ, ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಿದ್ದೆ’ ಎನ್ನುತ್ತಾರೆ ರಾಧಿಕಾ ಪಂಡಿತ್‌.

ನಿರೂಪ್‌ ಭಂಡಾರಿ ನಾಯಕನಾಗಿರುವ ಈ ಸಿನಿಮಾ ಸೆಪ್ಟೆಂಬರ್‌ 15ಕ್ಕೆ ಶುರುವಾಗಲಿದೆಯಂತೆ. ಮದುವೆಗೂ ಮುನ್ನ ಮತ್ತು ಮದುವೆಯ ನಂತರ ಬರುತ್ತಿರುವ ಅವಕಾಶಗಳಲ್ಲಿ ರಾಧಿಕಾಗೆ ಹೆಚ್ಚೇನೂ ವ್ಯತ್ಯಾಸ ಕಾಣುತ್ತಿಲ್ಲವಂತೆ. “ಸಾಮಾನ್ಯವಾಗಿ ಮದುವೆಯಾದ ನಂತರ ಎಲ್ಲರೂ ಮಹಿಳಾ ಪ್ರಧಾನ ಪಾತ್ರ ಮಾಡುತ್ತಾರೆ. ಆದರೆ, ನನಗೆ ಅಂತಹ ಪಾತ್ರ ಮಾಡಬಾರದು, ಮೊದಲು ಒಂದು ಕಮರ್ಷಿಯಲ್‌ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ಇತ್ತು.

ಅದೇ ತರಹ ಒಂದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಇನ್ನು ಮದುವೆಯ ನಂತರ ಬರುತ್ತಿರುವ ಪಾತ್ರಗಳಲ್ಲಿ ನನಗೆ ಹೆಚ್ಚು ವ್ಯತ್ಯಾಸ ಕಾಣುತ್ತಿಲ್ಲ. ಆಗ ನಾನು ಯಾವ ತರಹ ಪಾತ್ರಗಳನ್ನು ಮಾಡುತ್ತಿದ್ದೆನೋ, ಈಗಲೂ ಸಿಗುತ್ತಿದೆ. ಅದಕ್ಕೆ ಕಾರಣ, ನಾನು ಆಗಲೂ ಗ್ಲಾಮರಸ್‌ ಪಾತ್ರಗಳಿಗೆ ಸೀಮಿತವಾಗಿರಲಿಲ್ಲ. ಎಲ್ಲಾ ತರಹದ ಪಾತ್ರಗಳನ್ನು ಮಾಡುತ್ತಿದ್ದೆ. ಈಗಲೂ ಅದನ್ನು ಮುಂದುವರೆಸುವ ಆಸೆ ಇದೆ. ಒಂದು ಖುಷಿಯೆಂದರೆ, ಆಯ್ಕೆ ಮಾಡಿಕೊಳ್ಳುವುದಕ್ಕೆ ಒಂದಿಷ್ಟು ಅವಕಾಶಗಳು ಸಿಗುತ್ತಿವೆ’ ಎನ್ನುತ್ತಾರೆ ಅವರು.

ಯಶ್‌ ಮತ್ತು ರಾಧಿಕಾ ಇಬ್ಬರೂ ಪ್ರೊಡಕ್ಷನ್‌ ಕಂಪೆನಿ ಶುರು ಮಾಡುತ್ತಾರೆಂಬ ಸುದ್ದಿ ಇತ್ತು. ಆ ಕೆಲಸ ಸದ್ಯಕ್ಕಿಲ್ಲವಂತೆ. ಮುಂದೊಂದು ದಿನ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಹಾಗಾದರೆ, ಮುಂದಿನ ಯೋಜನೆ ಮತ್ತು ಕನಸು ಏನು ಎಂದರೆ, ಹೊಸ ಮನೆಗೆ ಶಿಫ್ಟ್ ಆಗುವುದು ಎಂಬ ಉತ್ತರ ಬರುತ್ತದೆ. “ಯಶ್‌ ಹೊಸದೊಂದು ಪೆಂಟ್‌ ಹೌಸ್‌ ಕೊಂಡಿದ್ದಾರೆ. ಅದರ ಇಂಟೀರಿಯರ್‌ ಇನ್ನೂ ಆಗಿಲ್ಲ. ಅದಾದ ಮೇಲೆ ಆ ಮನೆಗೆ ಶಿಫ್ಟ್ ಆಗುತ್ತೇವೆ’ ಎನ್ನುತ್ತಾರೆ ರಾಧಿಕಾ ಪಂಡಿತ್‌.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.