ದರ್ಶನ್‌ ಡೇಟ್ಸ್‌ 65 ದಿನ!


Team Udayavani, Aug 18, 2017, 4:23 PM IST

_tarak.jpg

ಸಾಮಾನ್ಯವಾಗಿ ಸ್ಟಾರ್‌ಗಳ ಸಿನಿಮಾ ಅಂದ್ರೆ ದೊಡ್ಡ ಶೆಡ್ನೂಲ್‌. ಹೀರೋ ಡೇಟ್ಸ್‌ ನೂರು ದಿನ ಬೇಕು. ಉದ್ದಕ್ಕೆ ಚಿತ್ರೀಕರಣ ಮಾಡುತ್ತಲೇ ಇರಬೇಕೆಂಬ ಮೈಂಡ್‌ಸೆಟ್‌ನಿಂದಲೇ ಬರುವ ನಿರ್ಮಾಪಕ, ನಿರ್ದೇಶಕರಿದ್ದಾರೆ. ನಿರ್ಮಾಪಕ, ನಿರ್ದೇಶಕರ ಒತ್ತಾಯಕ್ಕೆ ಮಣಿದು ಸ್ಟಾರ್‌ಗಳು ಕೂಡಾ ನೂರು ದಿನ ಚಿತ್ರೀಕರಣ ಮಾಡಿದ ಉದಾಹರಣೆಗಳು ಸಾಕಷ್ಟಿವೆ.

ಒಂದು ವೇಳೆ ಸಿನಿಮಾ ಚೆನ್ನಾಗಿ ಓಡಿಲ್ಲದಿದ್ದರೆ ನೆಗೆಟಿವ್‌ ಅಂಶಗಳನ್ನೆಲ್ಲಾ  ಹೀರೋ ಮೇಲೆ ಹಾಕುವ ಮೂಲಕ ಜವಾಬ್ದಾರಿಯಿಂದ ಜಾರಿ ಕೊಳ್ಳುವ ನಿರ್ಮಾಪಕ, ನಿರ್ದೇಶಕರನ್ನು ಗಾಂಧಿನಗರದಲ್ಲಿ ಸಿಗುತ್ತಾರೆ. ಈಗ ದರ್ಶನ್‌ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಏನದು ಪ್ಲಾನ್‌ ಎಂಬ ಕುತೂಹಲವಿದ್ದರೆ ಇಲ್ಲಿ ಕೇಳಿ. ಅದು ಯಾವುದೇ ಸಿನಿಮಾಕ್ಕಾದರೂ 65 ದಿನಕ್ಕಿಂತ ಹೆಚ್ಚು ಡೇಟ್ಸ್‌ ಕೊಡಲ್ಲ ಎಂದು. ಒಂದು ವೇಳೆ ಏನೋ ಹೆಚ್ಚು ಕಮ್ಮಿಯಾದರೆ 5 ದಿನ ಎಕ್ಸಟ್ರಾ. ಅಲ್ಲಿಗೆ 70 ದಿನ.

70 ದಿನದಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಬೇಕು. ಆ ನಂತರವೂ ಡೇಟ್ಸ್‌ ಬೇಕು ಎಂದು ಕೇಳಿದರೆ ಅದನ್ನು ಯಾವ ತರಹ ಸಂಭಾಳಿಸಬೇಕೆಂಬ ಐಡಿಯಾವೂ ದರ್ಶನ್‌ ಅವರಲ್ಲಿದೆ. ದರ್ಶನ್‌ ಅವರ ಈ ಡೇಟ್ಸ್‌ ಪ್ಲ್ರಾನ್‌ “ತಾರಕ್‌’ ಮೂಲಕವೇ ಜಾರಿಯಾಗಿದೆ.ದರ್ಶನ್‌ ಕೊಟ್ಟ ಡೇಟ್ಸ್‌ ಅನ್ನು ನಿರ್ದೇಶಕ ಪ್ರಕಾಶ್‌ ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಾಗಾಗಿ, “ತಾರಕ್‌’ ಕೇವಲ 64 ದಿನದಲ್ಲಿ ಶೂಟಿಂಗ್‌ ಮುಗಿಸಿದೆ. ಇದು ದರ್ಶನ್‌ಗೂ ಖುಷಿ ಕೊಟ್ಟಿದೆ. 

“ನಿರ್ದೇಶಕ ಪ್ರಕಾಶ್‌ ಅವರು ಮಾಡಿಕೊಂಡ ಸಿದ್ಧತೆಯನ್ನು ಮೆಚ್ಚಲೇಬೇಕು. ಪಕ್ಕಾ ಪೂರ್ವತಯಾರಿಯೊಂದಿಗೆ ಅಂದುಕೊಂಡಂತೆ ಚಿತ್ರೀಕರಣ ಮಾಡಿದ್ದಾರೆ. 23 ದಿನ ಯುರೋಪ್‌ನಲ್ಲಿ ಶೂಟಿಂಗ್‌ ಮಾಡಿದೆವು. ಮೂರೂವರೆ ಸಾವಿರ ಕಿಲೋಮೀಟರ್‌ನ ಸುತ್ತಾಡಿ, ಹಾಡು, ಫೈಟು ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿಕೊಂಡೆವು. ಪ್ರಕಾಶ್‌ ಅಷ್ಟೊಂದು ಸಿದ್ಧತೆ ಮಾಡಿಕೊಂಡಿದ್ದರು’ ಎನ್ನುವ ಮೂಲಕ ಪ್ರಕಾಶ್‌ ಮಾಡಿಕೊಂಡಿರುವ ತಯಾರಿ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ ದರ್ಶನ್‌. 

ಅಂದಹಾಗೆ, “ತಾರಕ್‌’ ತಾತ ಹಾಗೂ ಮೊಮ್ಮಗನ ನಡುವಿನ ಬಾಂಧವ್ಯದ ಒಂದು ಕಥೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ.”ಪ್ರಕಾಶ್‌ ಸಿನಿಮಾ ಮಾಡುತ್ತೇನೆ ಎಂದು ನನ್ನ ಬಳಿಗೆ ಬಂದಾಗ, ನಿಮ್ಮ ಶೈಲಿ ಏನಿದೆ ಅದಕ್ಕೆ ತಕ್ಕಂತೆ ನೀವು ಸಿನಿಮಾ ಮಾಡಿ. ನಾನು ಅದರಲ್ಲಿ ನಟಿಸುತ್ತೇನೆ. ನನ್ನ ಶೈಲಿಗೆ, ನನ್ನನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಬೇಡಿ. ಈ ಬಾರಿ ನಿಮ್ಮ ಕೋರ್ಟ್‌ಗೆ ನಾನು ಬರುತ್ತೇನೆ. ನನಗಾಗಿ ಯಾವ ಅಂಶವನ್ನು ಸೇರಿಸಬೇಡಿ ಅಂದೆ.

ಅದರಂತೆ ಸಿನಿಮಾ ಮಾಡಿದ್ದಾರೆ. ಇಲ್ಲಿ ನೀವು ತಾತ ಹಾಗೂ ಮೊಮ್ಮಗನ ನಡುವಿನ ಪ್ರೀತಿ, ತಮಾಷೆ ಎಲ್ಲವನ್ನು ನೋಡಬಹುದು. ಸಿನಿಮಾ ನೋಡಿದವರಿಗೆ ನಮಗೆ ಈ ತರಹದ ತಾತ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಸೆಯಾಗುತ್ತದೆ. ಆ ತರಹದ ಒಂದು ಪಾತ್ರವನ್ನು ದೇವರಾಜ್‌ ಅವರು ಮಾಡಿದ್ದಾರೆ. ಸಿನಿಮಾದ ನಿಜವಾದ ಹೀರೋ ಎಂದರೆ ನಿರ್ದೇಶಕ ಪ್ರಕಾಶ್‌ ಹಾಗೂ ದೇವರಾಜ್‌. ನಾನು ಇಡೀ ಸಿನಿಮಾದಲ್ಲಿ ಅಲ್ಲಲ್ಲಿ ಬಂದು ಹೋಗುತ್ತೇನೆ’ ಎನ್ನುವ ಮೂಲಕ ಇದೊಂದು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ ಎನ್ನುತ್ತಾರೆ ದರ್ಶನ್‌. 

ಟಾಪ್ ನ್ಯೂಸ್

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.