ದ್ರೋಣಾಚಾರ್ಯ ಪಟ್ಟಿಯಿಂದ ಸತ್ಯನಾರಾಯಣ ವಜಾ
Team Udayavani, Aug 20, 2017, 6:45 AM IST
ಹೊಸದಿಲ್ಲಿ: ಕ್ರಿಮಿನಲ್ ಮಾನನಷ್ಟ ಪ್ರಕರಣದ ಹಿನ್ನೆಲೆಯಲ್ಲಿ ಕೋಚ್ ಕರ್ನಾಟಕದ ಸತ್ಯನಾರಾಯಣ ಅವರ ಹೆಸರನ್ನು ಪ್ರತಿಷ್ಠಿತ ದ್ರೋಣಾಚಾರ್ಯ ಶಿಫಾರಸು ಪಟ್ಟಿಯಿಂದ ಕೇಂದ್ರ ಸರಕಾರ ಕಿತ್ತು ಹಾಕಿದೆ. ಉಳಿದಂತೆ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ.
ಶನಿವಾರ ಈ ವಿಷಯವನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಧಿಕಾರಿಗಳು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು. ಸತ್ಯ ನಾರಾಯಣ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹೈಜಂಪ್ ಸ್ಪರ್ಧಿ ತಂಗವೇಲು ಮರಿಯಪ್ಪನ್ ಅವರಿಗೆ ತರಬೇತಿ ನೀಡಿದ್ದರು. ಈ ಸಲ ಪ್ರತಿಷ್ಠಿತ ದ್ರೋಣಾ ಚಾರ್ಯ ಗೌರವಕ್ಕೆ ಸತ್ಯನಾರಾಯಣ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಈ ಬೆನ್ನಲ್ಲೇ ಕೆಲವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ಆಲಿಸಿದ ಕೇಂದ್ರ ಕ್ರೀಡಾ ಸಚಿವಾಲಯ ಅವರ ಹೆಸರನ್ನು ಶಿಫಾರಸು ಪಟ್ಟಿಯಿಂದ ಕಿತ್ತು ಹಾಕಲು ನಿರ್ಧರಿಸಿತು. ಸತ್ಯನಾರಾಯಣ ವಿರುದ್ಧದ ಪ್ರಕರಣ ಇನ್ನು ವಿಚಾರಣೆಯಲ್ಲಿದೆ. ಹೀಗಾಗಿ ಅವರ ಹೆಸರನ್ನು ಪ್ರಸ್ತುತ ವರ್ಷದ ದ್ರೋಣಾಚಾರ್ಯ ಪಟ್ಟಿಯಿಂದ ಕಿತ್ತು ಹಾಕ ಲಾಗುತ್ತಿದೆ. ಅವರು ಆರೋಪದಿಂದ ಮುಕ್ತರಾಗುವ ತನಕ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.
ಆ.13ರಂದೇ ಕೇಂದ್ರಕ್ಕೆ ಪತ್ರ ಬರೆದಿದ್ದ ಸತ್ಯನಾರಾಯಣ ಆಗಸ್ಟ್ 13ರಂದು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಸತ್ಯನಾರಾ ಯಣ ಪತ್ರ ಬರೆದಿದ್ದರು. ಕೆಲವರು ಹೊಟ್ಟೆ ಉರಿಯಿಂದ ತನ್ನ ವಿರುದ್ಧ ವೈಯಕ್ತಿಕ ಹಠ ಸಾಧಿಸುತ್ತಿದ್ದಾರೆ. ನನ್ನ ವಿರುದ್ಧ ಅಭಿಯಾನ ಹಮ್ಮಿಕೊಂಡಿದ್ದಾರೆ. ನಿರಪರಾಧಿ ಎನ್ನುವುದನ್ನು ಸಾಬೀತುಪಡಿಸಲು ಅವಕಾಶ ನೀಡಬೇಕು ಎಂದು ಅಲವತ್ತುಕೊಂಡಿದ್ದರು.
ಕ್ರೀಡಾ ಸಚಿವಾಲಯ ನೇಮಕ ಮಾಡಿದ ಆಯ್ಕೆ ಸಮಿತಿ ಈ ಬಾರಿ ಇಬ್ಬರು ಪ್ಯಾರಾ ಆ್ಯತ್ಲೀಟ್ ಸಹಿತ 17 ಮಂದಿಯ ಹೆಸರನ್ನು ಅರ್ಜುನ ಪ್ರಶಸ್ತಿಗೆ ಮತ್ತು ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಹಾಕಿ ತಾರೆ ಸರ್ದಾರ್ ಸಿಂಗ್ ಮತ್ತು ರಿಯೋ ಪ್ಯಾರಾಲಿಂಪಿಕ್ಸ್ ಚಿನ್ನ ವಿಚೇತ ದೇವೇಂದ್ರ ಜಜಾರಿಯಾ ಅವರ ಹೆಸರನ್ನು ಶಿಫಾರಸು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು