ಕುರ್ಲಾ ಜಿಎಸ್ಬಿ ಬಾಲಾಜಿ ಮಂದಿರ ಗಣೇಶೋತ್ಸವ ಸುವರ್ಣ ಮಹೋತ್ಸವ
Team Udayavani, Aug 22, 2017, 12:37 PM IST
ಮುಂಬಯಿ: ಜಿಎಸ್ಬಿ ಸಭಾ ಕುರ್ಲಾ-ಚೆಂಬೂರು-ಘಾಟ್ಕೊàಪರ್ (ಕೆಸಿಬಿ) ಸಂಸ್ಥೆಯ ಕುರ್ಲಾ ಪೂರ್ವದಲ್ಲಿರುವ ಕುರ್ಲಾ ಬಾಲಾಜಿ ಮಂದಿರದ ಸುವರ್ಣ ಗಣೇಶೋತ್ಸವ ಸಂಭ್ರಮವು ಆ. 25 ರಿಂದ ಆ. 29 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಐದು ದಿವಸಗಳ ಕಾಲ ಬೆಳಗ್ಗೆ 8ರಿಂದ 10.30ರವರೆಗೆ ಮೊದಲ ದಿನ ಹೊರತುಪಡಿಸಿ ತುಲಾಭಾರ ಸೇವೆಯನ್ನು ಆಯೋಜಿಸಲಾಗಿದೆ. ಪ್ರತಿದಿನ ಪೂರ್ವಾಹ್ನ 10.30ರಿಂದ ಭಗವಾನ್ ಬಾಲಾಜಿಗೆ ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ, ಪೂರ್ವಾಹ್ನ 11ರಿಂದ ಮಧ್ಯಾಹ್ನ 1 ಗಂಟೆಯರೆಗೆ ಮಹಾಗಣಪತಿ ದೇವರಿಗೆ ಶೋಡಷೋಚಾರ ಪೂಜೆ, ಸಹಸ್ರನಾಮ ದುರ್ವಾರ್ಚನೆ, ಪ್ರತಿದಿನ ದಿನ 12 ಗಂಟೆಯಿಂದ ಶ್ರೀ ಬಾಲಾಜಿ ದೇವರಿಗೆ ಸರ್ವಾಲಂಕಾರ, ಮಧ್ಯಾಹ್ನ ಪೂಜೆ, ಗಣೇಶ ಚತುರ್ಥಿಯ ದಿನ ಮಧ್ಯಾಹ್ನ 12.30ರಿಂದ ಮಂದಿರದ ಅರ್ಚಕರಿಂದ ಶ್ರೀ ಗಣೇಶ ದೇವರಿಗೆ ಪೂಜೆ, ಪ್ರತಿದಿನ ಮಧ್ಯಾಹ್ನ 1ರಿಂದ ಮಹಾಗಣಪತಿ ದೇವರಿಗೆ ಮಹಾಪೂಜೆ, ಆರತಿ, ಪ್ರಸಾದ ವಿತರಣೆ ನಡೆಯಲಿದೆ.
ಆ. 25 ರಿಂದ ಆ. 28 ರವರೆಗೆ ಅಪರಾಹ್ನ 3 ರಿಂದ ಸಂಜೆ 7 ರವರೆಗೆ ಮೂಢಗಣಪತಿ ಹಾಗೂ ರಂಗಪೂಜೆ ಸೇವೆಗಳು ನಡೆಯಲಿವೆ. ಬಾಲಾಜಿ ದೇವರಿಗೆ ಜಿಎಸ್ಬಿ ಸಭಾದ ವತಿಯಿಂದ ಗಣೇಶ ಚುತುರ್ಥಿಯ ದಿನ ರಾತ್ರಿ 8 ರಿಂದ ರಂಗಪೂಜೆ, ರಾತ್ರಿಪೂಜೆ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿದೆ.
ಗಣೇಶ ಚತುರ್ಥಿಯ ದಿನ ಪೂರ್ವಾಹ್ನ 11.30 ರಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಆ. 25 ಮತ್ತು ಆ. 26 ರಂದು ಸಂಜೆ 7 ರಿಂದ ಗುರುಕೃಪಾ ಭಜನ ಮಂಡಳಿ ಹಾಗೂ ಮಹಿಳಾ ಇವಭಾಗದವರಿಂದ ಭಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆ. 27 ರಂದು ಸಂಜೆ 5 ರಿಂದ ರಾತ್ರಿ 8 ರವರೆಗೆ ಜಿಎಸ್ಬಿ ಸಭಾ ಕುರ್ಲಾ ಮಹಿಳಾ ವೃಂದದವರಿಂದ ಅರಸಿನ ಕುಂಕುಮ ಕಾರ್ಯಕ್ರಮ ಜರಗಲಿದೆ. ಆ. 29 ರಂದು ಬಾಲಾಜಿ ದೇವರಿಗೆ ಮಹಿಳಾ ವೃಂದದವರಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ.ಅಪರಾಹ್ನ 3.30 ರಿಂದನ ಗಣಪತಿ ವಿಸರ್ಜನ ಪೂಜೆ, ವಿಸರ್ಜನ ಮೆರವಣಿಗೆಯು ತಿಲಕ್ ಬ್ರಿಡ್ಜ್ ಮಾರ್ಗವಾಗಿ ಶಿವಾಜಿಪಾರ್ಕ್ಗೆ ತೆರಳಲಿದೆ. ಪೂಜಾ ಸೇವಾರ್ಥಕವಾಗಿ ಸಹಸ್ರ ಮೋದಕ ಹವನ, ಅಥರ್ವ ಶ್ರೀಷಪಠಣ, ಸತ್ಯವಿನಾಯಕ ಪೂಜೆ, ಲಕ್ಷಪ್ರದಕ್ಷಿಣೆ, ಪುಷ್ಪಾಲಂಕಾರ ಸೇವೆ ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹರಿಕೀರ್ತನೆ, ಯಕ್ಷಗಾನ ಬಯಲಾಟ, ಪ್ರತಿಭಾ ಸ್ಪರ್ಧೆ, ಸಂಗೀತ, ನೃತ್ಯ, ಸಾಹಿತ್ಯಕ ಕಾರ್ಯಕ್ರಮ, ಸಾಂಸ್ಕೃತಿಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ನಗರದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಕಳೆದ ಅರ್ಧ ಶತಮಾನದುದ್ದಕ್ಕೂ ಹುಟ್ಟುಹಾಕಿದ ಸಂಘ-ಸಂಸ್ಥೆಗಳ ಪೈಕಿ ಜಿಎಸ್ಬಿ ಸಭಾ ಕುರ್ಲಾ-ಚೆಂಬೂರು–ಘಾಟ್ಕೋಪರ್ ಸಂಸ್ಥೆಯು ಧಾರ್ಮಿಕ, ಸಾಂಸ್ಕೃತಿಕ ಇನ್ನಿತರ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಅನುಪಮವಾಗಿದೆ. ಕುರ್ಲಾ ಪಶ್ಚಿಮದ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ಬಾಲಾಜಿ ಮಂದಿರವು ಜಿಎಸ್ಬಿ ಸಮಾಜದ ಇಷ್ಟದೇವತೆ ಎಂದೆಣಿಸಿಕೊಂಡು ಭಗವಾನ್ ವೆಂಕಟರಮಣ ದೇವಸ್ಥಾನವೂ ಇತ್ತೀಚೆಗೆ ಪ್ರಚಲಿತಕ್ಕೆ ಬಂದಿದೆ. ಜಿಎಸ್ಬಿ ಸಭಾ ಟ್ರಸ್ಟ್ ಅಧಿನಿಯಮದ ಪ್ರಕಾರ ಇಲ್ಲಿಯ ಆಡಳಿತವು ನಡೆಯುತ್ತಿದ್ದು, ಈ ಪರಿಸರದ ಸಮಾಜ ಬಾಂಧವರಲ್ಲಿ ದೇವರ-ಧರ್ಮ-ಗುರು ಸದ್ಭಾವನೆ ಸಮಾಜ ಸೇವೆಯ ಕುರಿತು ಭಕ್ತಿ, ಶ್ರದ್ಧೆ, ಮೂಡಿಸುವುದರಲ್ಲಿ ಅಪಾರ ಸಾರ್ಥಕತೆಯನ್ನು ಹೊಂದಿದೆ.
ವರ್ಷವಿಡೀ ಪ್ರತಿಷ್ಠಾ ವರ್ಧಂತಿ ಉತ್ಸವ, ಶ್ರೀ ಗಣೇಶೋತ್ಸವ, ಶ್ರೀ ರಾಮನವಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಗಳು ಸಡಗರದಿಂದ ಕ್ಷೇತ್ರದಲ್ಲಿ ನಡೆಯುತ್ತಿದೆ. ಸಂಸ್ಥೆಯು ಸ್ಥಾಪನೆ ಯಾಗಿ 55 ವರ್ಷಗಳು ಸಂದರೂ ಜಿಎಸ್ಬಿ ಕುರ್ಲಾ ಗಣೇಶೋತ್ಸವಕ್ಕೆ ಪ್ರಸ್ತುತ ವರ್ಷ ಸುವರ್ಣ ಮಹೋತ್ಸವದ ಸಂಭ್ರಮವಾಗಿದೆ. ಈ ಉತ್ಸವದಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸು ವಂತೆ ಸಂಸ್ಥೆಯ ಆಡಳಿತ ಸಮಿತಿಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ