“ಎ’ ತಂಡಗಳ ಅನಧಿಕೃತ ಟೆಸ್ಟ್‌ ಭಾರತ ಜಯಭೇರಿ


Team Udayavani, Aug 24, 2017, 9:10 AM IST

24-SPORTS-3.jpg

ಪೊಚೆಫ್ಸ್ಟ್ರೋಮ್‌: ನಾಯಕ ಕರುಣ್‌ ನಾಯರ್‌ ಅವರ ಅಮೋಘ ಆಟದಿಂದಾಗಿ ಭಾರತ “ಎ’ ತಂಡವು ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ “ಎ’ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. 

ಗೆಲ್ಲಲು 224 ರನ್‌ ಗಳಿಸುವ ಸವಾಲು ಪಡೆದ ಭಾರತ “ಎ’ ತಂಡವು ನಾಯರ್‌ ಸಹಿತ ಆರಂಭಿಕ ರವಿಕುಮಾರ್‌ ಸಮರ್ಥ್ ಮತ್ತು ಅಂಕಿತ್‌ ಭಾವೆ° ಅವರ ತಾಳ್ಮೆಯ ಆಟದಿಂದಾಗಿ 62.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗೆಲುವು ದಾಖಲಿಸಿತು. ಇದರಿಂದಾಗಿ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿ 1-1 ಅಂತರದಿಂದ ಸಮಬಲದಲ್ಲಿ ಅಂತ್ಯಗೊಂಡಿತು. 

ನಾಯರ್‌ ಅವರ ಬಿರುಸಿನ ಆಟದಿಂದಾಗಿ ಭಾರತ “ಎ’ ಜಯ ಕಾಣುವಂತಾಯಿತು. ಸಮರ್ಥ್ ಜತೆ ಮೂರನೇ ವಿಕೆಟಿಗೆ ಅಮೂಲ್ಯ 74 ರನ್‌ ಪೇರಿಸಿದ ನಾಯರ್‌ ಆ ಬಳಿಕ ಅಂಕಿತ್‌ ಜತೆ ನಾಲ್ಕನೇ ವಿಕೆಟಿಗೆ 93 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವು ಖಚಿತಪಡಿಸಿದರು. ಗೆಲ್ಲಲು ಕೇವಲ 2 ರನ್‌ ಗಳಿರುವಾಗ 90 ರನ್‌ ಗಳಿಸಿದ್ದ ನಾಯರ್‌ ಔಟಾದರು. 144 ಎಸೆತ ಎದುರಿಸಿದ್ದ ಅವರು 13 ಬೌಂಡರಿ ಬಾರಿಸಿದ್ದರು. ಸಮರ್ಥ್ 55 ಮತ್ತು ಭಾವೆ° 32 ರನ್‌ ಹೊಡೆದರು. 

ಈ ಮೊದಲು ಭಾರತ “ಎ’ ತಂಡದ ಬೌಲರ್‌ಗಳ ಬಿಗು ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ “ಎ’ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 177 ರನ್ನಿಗೆ ಆಲೌಟಾಯಿತು. 4 ವಿಕೆಟಿಗೆ 138 ರನ್ನಿನಿಂದ ದಿನದಾಟ ಆರಂಭಿಸಿದ್ದ ದಕ್ಷಿಣ ಆಫ್ರಿಕಾ “ಎ’ ತಂಡ ಮುಂದಿನ 39 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಒದ್ದಾಡಿತು. ಇದರಿಂದ ಭಾರತಕ್ಕೆ ಸುಲಭ ಗುರಿ ಸಿಕ್ಕಿತು. 

ಎಡಗೈ ವೇಗಿ ಅಂಕಿತ್‌ ರಜಪೂತ್‌ 15 ರನ್ನಿಗೆ 3 ಮತ್ತು ಎಡಗೈ ಸ್ಪಿನ್ನರ್‌ ಶಾಬಾಜ್‌ ನದೀಮ್‌ 47 ರನ್ನಿಗೆ 3 ವಿಕೆಟ್‌ ಪಡೆದರು. ಎರಡು ಪಂದ್ಯಗಳ ಈ ಸರಣಿಯಲ್ಲಿ ಒಟ್ಟಾರೆ 11 ವಿಕೆಟ್‌ ಕಿತ್ತ ನದೀಮ್‌ ಭಾರತದ ಯಶಸ್ವಿ ಬೌಲರ್‌ ಎನಿಸಿಕೊಂಡರು. 

ಆಶ್ಚರ್ಯವೆಂಬಂತೆ 2013ರ ಪ್ರವಾಸದ ವೇಳೆಯೂ ಭಾರತ “ಎ’ ತಂಡ “ಎ’ ತಂಡಗಳ ತ್ರಿಕೋನ ಸರಣಿ ಜಯಿಸಿದ್ದರೆ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ “ಎ’ 322 ಮತ್ತು 177 (ಸ್ಟೀಫ‌ನ್‌ ಕುಕ್‌ 70, ನದೀಮ್‌ 47ಕ್ಕೆ 3, ರಜಪೂತ್‌ 15ಕ್ಕೆ 3; ಭಾರತ “ಎ’ 276 ಮತ್ತು 4 ವಿಕೆಟಿಗೆ 226 (ಕರುಣ್‌ ನಾಯರ್‌ 90, ಸಮರ್ಥ್ 45, ಅಂಕಿತ್‌ ಭಾವೆ° 32 ಔಟಾಗದೆ).

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.