ಹಿಂದೂ ಯುವ ಸೇನೆ: ಮಂಗಳೂರು ಗಣೇಶೋತ್ಸವ ಉದ್ಘಾಟನೆ
Team Udayavani, Aug 27, 2017, 11:36 AM IST
ಮಂಗಳೂರು: ಗಣೇಶನ ಪ್ರತಿಯೊಂದು ಅಂಗವೂ ತನ್ನದೇಆದ ಮೌಲ್ಯ ಮತ್ತು ವೈಶಿಷ್ಟ್ಯವನ್ನು ಹೊಂದಿದೆ. ಬುದ್ಧಿವಂತಿಕೆ ಮತ್ತು ವಿವೇಚನಾ ಶಕ್ತಿಯ ರೂಪ ಗಣಪ. ಗಣೇಶನ ಉತ್ಸವವನ್ನು ಧಾರ್ಮಿಕ ನೆಲೆಗಟ್ಟಿಗೆ ಚ್ಯುತಿ ಬಾರದ ರೀತಿಯಲ್ಲಿ ಆಚರಿಸುತ್ತಿರುವ ಹಿಂದೂ ಯುವ ಸೇನೆಯ ಕಾರ್ಯ ಎಲ್ಲರೂ ಮೆಚ್ಚುವಂಥದ್ದು ಎಂದು ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ಗಣೇಶ್ ಎಸ್. ರಾವ್ ಅಭಿಪ್ರಾಯಪಟ್ಟರು.ಅವರು ಹಿಂದೂ ಯುವ ಸೇನಾಆಶ್ರಯದ 25ನೇ ವರ್ಷದ ಮಂಗ ಳೂರು ಗಣೇಶೋತ್ಸವದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೆಡೆ„ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಹೊಟೇಲ್ ಪ್ರಸ್ಟೀಜ್ ಇಂಟರ್ನ್ಯಾಶನಲ್ನ ನಿರ್ದೇಶಕ ದಾಮೋದರ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಪ್ರ. ಕಾರ್ಯದರ್ಶಿ ರಾಮಚಂದ್ರ ಚೌಟ ಪದವು, ಹಿಂದೂ ಯುವ ಸೇನೆ ಅಧ್ಯಕ್ಷ ಯಶೋಧರ ಚೌಟ, ಸಮಿತಿ ಉಪಾಧ್ಯಕ್ಷರಾದ ಉಮೇಶ್ ಪೈ, ಕಿರಣ್ ರೈ ಬಜಾಲ್, ವಸಂತ್ ಉರ್ವಸ್ಟೋರ್, ಕೊರಗಪ್ಪ ಶೆಟ್ಟಿ ಆಕಾಶಭವನ, ಯುವ ಸೇನೆ ಉಪಾಧ್ಯಕ್ಷ ನಾಗರಾಜ ಆಚಾರ್ಯ ಉಪಸ್ಥಿತರಿದ್ದರು.
ಗುಣಕರ ಆ್ಯಂಬುಲೆನ್ಸ್ ಸೇವೆ ಲೋಕಾರ್ಪಣೆಗೊಂಡಿತು.ಕಿರಣ್ ಕುಮಾರ್ ಬಜಾಲ್ ಸ್ವಾಗತಿಸಿದರು. ಭರತ್ರಾಜ್ ಕೃಷ್ಣಾಪುರ ವಂದಿಸಿದರು. ಪ್ರವೀಣ್ ಎಸ್. ಕುಂಪಲ ನಿರ್ವಹಿಸಿದರು.