ಗುರ್ಮೀತ್ ಪುತ್ರ ಜಸ್ಮೀತ್ ಡೇರಾ ಸೌದದ ಉತ್ತರಾಧಿಕಾರಿ: ವರದಿ
Team Udayavani, Aug 31, 2017, 3:00 PM IST
ಚಂಡೀಗಢ್: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಛಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಸಿಬಿಐ ವಿಶೇಷ ಕೋರ್ಟ್ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇದೀಗ ಡೇರಾ ಸಚ್ಚಾ ಸೌದಾಕ್ಕೆ ಗುರ್ಮೀತ್ ಸಿಂಗ್ ಪುತ್ರ ಜಸ್ಮೀತ್ ಉತ್ತರಾಧಿಕಾರಿ ಎಂದು ಮಾಧ್ಯಮದ ವರದಿ ತಿಳಿಸಿದೆ.
ರಾಮ್ ರಹೀಮ್ ಸಿಂಗ್ ಪುತ್ರ ಜಸ್ಮೀತ್ ಇನ್ಸಾನ್ ಅವರನ್ನು ಡೇರಾ ಸಚ್ಚಾ ಸೌದಾದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ವರದಿ ವಿವರಿಸಿದೆ. ಜಸ್ಮೀತ್ ಉತ್ತರಾಧಿಕಾರಿಯಾಗಲು ಗುರ್ಮೀತ್ ತಾಯಿ ನಾಸೀಬ್ ಕೌರ್ ಹಾಗೂ ಗುರ್ಮೀತ್ ಪತ್ನಿ ಹರ್ಜಿತ್ ಕೌರ್ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದೆ.
ಅಲ್ಲದೇ ಗುರ್ಮೀತ್ ಸ್ಥಾನಕ್ಕೆ ಜಸ್ಮೀತ್ ಉತ್ತರಾಧಿಕಾರಿ ಎಂಬುದನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ನಾಸೀಬ್ ಹಾಗೂ ಹರ್ಜಿತ್ ರೋಹ್ಟಕ್ ಜೈಲಿನಲ್ಲಿರುವ ಗುರ್ಮೀತ್ ರಾಮ್ ಸಿಂಗ್ ನನ್ನು ಭೇಟಿಯಾಗಲಿದ್ದಾರೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ