ಕೋರ್ಟ್ ತೀರ್ಪಿಗೆ ಹೆದರಿ ಆತ್ಮಹತ್ಯೆ
Team Udayavani, Sep 14, 2017, 7:30 AM IST
ಚಿಕ್ಕಬಳ್ಳಾಪುರ: ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದ ಸಹಾಯಕ ಅಭಿಯಂತರ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ವಂಗಿಮಾಳ್ಳು ಗ್ರಾಮದಲ್ಲಿ ಬುಧವಾರ ನಡೆದಿದೆ.
ಚಿಂತಾಮಣಿ ತಾಲೂಕು ವಂಗಿಮಾಳ್ಳು ನಿವಾಸಿ ಶ್ರೀನಾಥ (25) ಮೃತ ಅಭಿಯಂತರ. ಬಾಗೇಪಲ್ಲಿ ತಾಲೂಕಿನ ಬಿಳ್ಳೂರು,
ನಾರೇಮುದ್ದೇಪಲ್ಲಿ ಮತ್ತಿತರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗೆ ಹೊರ ಗುತ್ತಿಗೆ ಆಧಾರದಲ್ಲಿ ಎಂಜಿಯರ್ ಆಗಿದ್ದರು. ತಮ್ಮ ತೋಟದಲ್ಲಿ ಟೊಮೆಟೋ ಕಟ್ಟಿಗೆಗಳ ರಾಶಿ ಮೇಲೆ ಮಲಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ.
ಮೃತ ದೇಹ ಸುಟ್ಟುಕರಲಾಗಿದೆ. ಕಳೆದ ಜನವರಿ 24 ರಂದು ಶ್ರೀನಾಥ್, ವ್ಯಕ್ತಿಯೊಬ್ಬರಿಂದ 12 ಸಾವಿರ ರೂ. ಲಂಚ
ಸ್ವೀಕರಿಸುವ ವೇಳೆ ಎಸಿಬಿಗೆ ಸೆರೆಸಿಕ್ಕಿ ನ್ಯಾಯಾಂಗ ಬಂಧನಕ್ಕೊಳಗಾಗಿ ಕೆಲಸ ಕಳೆದು ಕೊಂಡಿದ್ದರು. ಲಂಚ ಪ್ರಕರಣದ ತೀರ್ಪು ಬುಧವಾರ ಇದ್ದುದರಿಂದ ಶ್ರೀನಾಥ ತಮಗೆ ಶಿಕ್ಷೆ ಆಗುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಶ್ರೀನಾಥ್ ಆತ್ಮಹತ್ಯೆಗೂ ಮುನ್ನ 9 ಪುಟಗಳ ಡೆತ್ನೋಟ್ ಬರೆದಿಟ್ಟಿದ್ದು, ತಾನು ಕೆಲಸ ನಿರ್ವಹಿಸಿದ ಗ್ರಾಪಂಗಳ ವ್ಯಾಪ್ತಿಯಲ್ಲಿ ಪಿಡಿಒಗಳು ಹಾಗೂ ಗುತ್ತಿಗೆದಾರರ ನೀಡಿದ ಹಿಂಸೆ ಬಗ್ಗೆ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ