ಕುಸ್ತಿ ಪಂದ್ಯ ಗೆದ್ದ ಸೊಲ್ಲಾಪುರ ಪೈಲ್ವಾನ್
Team Udayavani, Sep 16, 2017, 9:35 AM IST
ಸುರಪುರ: ವೇಣುಗೋಪಾಲ ಸ್ವಾಮಿ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕುಸ್ತಿ ಪಂದ್ಯ ಶುಕ್ರವಾರ ದೇಗುಲ ಆವರಣದಲ್ಲಿ ಅಪಾರ ಜನಸ್ತೋಮದ ಮಧ್ಯೆ ನಡೆಯಿತು.
ವಿಜಯಪುರ, ಬೆಳಗಾವಿ, ಚಡಚಣ, ಜಳಕಿ ಜತ್ತ, ಇಂಡಿ, ಸೊಲ್ಲಾಪುರ, ಹುಲಿಜಂತಿ, ಚಾಂದಕವಟೆ, ಕೊಲ್ಲಾಪುರ, ತಾಳಿಕೋಟೆ, ಇಳಕಲ್, ಜೇವರ್ಗಿ, ಬೆಳಗಾವಿ, ಶಹಾಪುರ, ಯಾದಗಿರಿ ಹಾಗೂ ಇನ್ನಿತರ ಜಿಲ್ಲೆಗಳ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಪಂದ್ಯದಲ್ಲಿ ಭಾಗವಹಿಸಿದ್ದರು.
500 ರಿಂದ 5 ಸಾವಿರ ರೂ. ವರೆಗಿನ ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು. ಕೊಲ್ಲಾಪುರದ ಪೈಲವಾನ್ ಹಾಗೂ ಜೇವರ್ಗಿ ಪೈಲವಾನ್ ನಡುವೆ ನಡೆದ ಕುಸ್ತಿ ಪೋಟಿ ನೋಡುಗರ ಗಮನ ಸೆಳೆಯಿತು.
ಸೊಲ್ಲಾಪುರದ ಪೈಲವಾನ್ ಸೂರ್ಯ ಹಾಗೂ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಪೈಲವಾನ್ ಹಣಮಂತರಾಯ ನಡುವೆ ನಡೆದ ಕಡಗದ ಕುಸ್ತಿ ತುರುಸಿನಿಂದ ಕೂಡಿತ್ತು. ಇಬ್ಬರು ಸಮಬಲದ ಹೋರಾಟಗಾರರಾಗಿದ್ದರು.
ಸೊಲ್ಲಾಪುರದ ಪೈಲವಾನ್ ತನ್ನ ಬಿಗಿ ವರಸೆಗಳಿಂದ ಗೋಗಿ ಪೈಲವಾನ್ನನ್ನು ಸೋಲಿಸಿ ಐದು ತೊಲಿ ಬೆಳ್ಳಿ ಕಡಗವನ್ನು ತನ್ನದಾಗಿಸಿಕೊಂಡ. ಬೆಳ್ಳಿ ಕಡಗ ಗೆದ್ದ ಪೈಲವಾನ್ನನ್ನು ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಅರಮನೆಗೆ ಕರತರಲಾಯಿತು.
ರಾಜಾ ಕೃಷ್ಣಪ್ಪ ನಾಯಕ ಪ್ರಶಸ್ತಿ ಪತ್ರ, ಕಪ್ ನೀಡಿ ಸನ್ಮಾನಿಸಿದರು. ರಾಜಾ ಲಕ್ಷ್ಮೀನಾರಾಯಣ ನಾಯಕ, ರಾಜಾ ಪಿಡ್ಡ ನಾಯಕ, ರಾಜಾ ರೂಪಕುಮಾರ ನಾಯಕ, ರಾಜಾ ವೇಣುಗೋಪಾಲ ನಾಯಕ, ರಾಜಾ ವಾಸುದೇವ ನಾಯಕ, ರಾಜಾ ಕೃಷ್ಣ ದೇವರಾಯ ನಾಯಕ, ನಾಗಪ್ಪ ಡೊಣ್ಣಿಗೇರಿ, ಮರೆಪ್ಪ ಡೊಣ್ಣಿಗೇರಿ, ಗೋಪಾಲ ಡೊಣ್ಣಿಗೇರಿ, ಮೂಖಪ್ಪ ಡೊಣ್ಣಿಗೇರಿ, ಶರಣು ಕಲಬುರ್ಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ