ಅಲೆಮಾರಿ ದನಗಳ ವಿಶ್ರಾಂತಿ ತಾಣ


Team Udayavani, Sep 19, 2017, 5:20 PM IST

19-KSR-2.jpg

ಕುಂಬಳೆ: ಸದಾ ಜನಜಂಗುಳಿಯ ಕಾಸರಗೋಡು ಹೊಸ ಬಸ್‌ ನಿಲ್ದಾಣದಲ್ಲಿ ಜನಗಳೊಂದಿಗೆ ದನಗಳನ್ನೂ ಕಾಣಬಹುದು. ಇಲ್ಲಿ ರಾತ್ರಿ ಹಗಲೆನ್ನದೆ ಅಲೆಮಾರಿ ದನಗಳು ಠಿಕಾಣಿ ಹೂಡಿರುತ್ತವೆ. ಸುಮಾರು ಒಂದು ಡಜನ್‌ನಷ್ಟು ದಷ್ಟಪುಷ್ಟ ಜಾನುವಾರುಗಳ ಹಿಂಡು ಲಂಗು ಲಗಾಮಿಲ್ಲದೆ ನಿಲ್ದಾಣದ ಒಳಗೆ ಮತ್ತು ಹೊರಗೆ ಸದಾ ಸ್ವೇಚ್ಛೆಯಿಂದ ವಿಶ್ರಾಂತಿ ಪಡೆಯುತ್ತಿರುವ ದೃಶ್ಯವನ್ನು ನಿತ್ಯಕಾಣಬಹುದಾಗಿದೆ.

ಇದರಿಂದಾಗಿ ಹಲವಾರು ಬಸ್ಸುಗಳಿಗೆ ಸೂಚಿಸಿದ ನಿರ್ದಿಷ್ಟ ಸ್ಥಳದಲ್ಲಿ ತಂಗಲು ಮತ್ತು ಪ್ರಯಾಣಿಕರಿಗೆ ಇಲ್ಲಿಂದ ಬಸ್‌ ಏರಲು ತೊಂದರೆಯಾಗುವುದು. ಇದು ಇಂದು ನಿನ್ನೆಯ ಕಥೆಯಲ್ಲ. ಹಲವಾರು ತಿಂಗಳುಗಳಿಂದಲೂ ಜಾನುವಾರುಗಳು ಇಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿವೆ. ನಿಲ್ದಾಣದ ಹೊರಗಿನ ಇಂಟರ್‌ಲಾಕ್‌ ಅಳವಡಿಸಿದ ವಿಶಾಲವಾಗಿರುವ ರಸ್ತೆಯಲ್ಲಿ ಜಾನುವಾರುಗಳು ಮಲಗಿರುವುದರಿಂದ ಬಸ್‌ಗಳ ಸುಗಮ ಸಂಚಾರಕ್ಕೆ ತೊಡಕ್ಕಾಗುತ್ತಿದೆ. ಆದರೆ ಜಾನುವಾರುಗಳ ಮಾಲಿಕರಾಗಲಿ ಕಾಲೂನು ಪಾಲಕರಾಗಲಿ ಇದನ್ನು ಈ ತನಕ ಗಂಭೀರವಾಗಿ ಪರಿಗಣಿಸಲಿಲ್ಲ.

ಜಾನುವಾರುಗಳನ್ನು ಸಾರ್ವಜನಿಕವಾಗಿ ಬೇಕಾಬಿಟ್ಟಿ ಬಿಡಬಾರದು. ಸಾರ್ವ ಜನಿಕರಿಗೆ ಜಾನುವಾರುಗಳಿಂದ ತೊಂದರೆಯಾಗಬಾರದು. ಕಟ್ಟಿ ಹಾಕಿ ಸಾಕಬೇಕೆಂಬುದಾಗಿ  ಎಂದೋ ಕಾನೂನು ಜಾರಿಯಲ್ಲಿದ್ದರೂ ಇದು ತಮಗೆ ಬಾಧಕವಲ್ಲವೆಂಬುದಾಗಿ ಈ ಜಾನುವಾರು ಸಾಕಣೆದಾರರ ನಿಲುವೆಂಬ ಆರೋಪ ಸಾರ್ವಜನಿಕರದು. ಸಾರ್ವಜನಿಕರಿಗೆ ಕಿರುಕುಳವಾಗುವ ಇದರ ವಿರುದ್ಧ ಕಾನೂನು ಪಾಲಕರೂ ಮುಂದಾಗ ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ರಾತ್ರಿ ಪೊಲೀಸರ ಗಸ್ತು ತಿರುಗಾಟ ದಿಂದಾಗಿ ಈ ಜಾನುವಾರಗಳಿಗೆ ಕಳ್ಳರಿಂದ ರಕ್ಷಣೆ ದೊರೆಯುತ್ತಿದೆ.

ಈ ರೀತಿ ಜಾನುವಾರುಗಳನ್ನು ಲಂಗುಲಗಾಮಿಲ್ಲದೆ ಬಿಡುವು ದರಿಂದ ಇದರ ಲಾಭವನ್ನು ಗೋ ಸಾಗಾಟಗಾರರು ಪಡೆಯುತ್ತಿದ್ದಾರೆ. ದನ ಕರುಹಾಕಿದಾಗ ಮಾತ್ರ ತಮ್ಮ ಜಾನುವಾರುಗಳನ್ನು ಗುರುತಿಸಿ ಹಟ್ಟಿಗೊಯ್ಯುವ ಮಾಲಕರು ಉಳಿದ ದಿಗಳಲ್ಲಿ ತಮ್ಮ ಜಾನುವಾರುಗಳತ್ತ ಗಮನ ಹರಿಸದಿರುವುದು. ಗೋ ಕಳ್ಳರಿಗೆ ವರದಾನವಾಗುವುದು. 

ಗುಡ್ಡದಿಂದ ಹಗಲು ರಾತ್ರಿ ಎನ್ನದೆ ವಾಹನಗಳಲ್ಲಿ ದಿನದಿಂದ ದಿನಕ್ಕೆ ಜಾನುವಾರುಗಳನ್ನು ಕದ್ದೊಯ್ಯು ವುದರಿಂದ ದೇಶದ ಪ್ರಧಾನ ಸಂಪತ್ತುಗಳಲ್ಲಿ ಒಂದಾಗಿರುವ ಜಾನುವಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಪ್ರಕೃತಿಯ ಏರುಪೇರಿಗೆ ಕಾರಣವಾಗುತ್ತಿದೆ ಎಂಬುದು ವಿಷಾದನೀಯ ವಿಚಾರ.

ಅಚ್ಯುತ ಚೇವಾರ್‌

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.