ಪ್ರಧಾನಮಂತ್ರಿ ವಯ ವಂದನ ಯೋಜನಾ


Team Udayavani, Sep 25, 2017, 9:57 AM IST

25-STATE-11.jpg

ಇಳಿಯುತ್ತಿರುವ ಬಡ್ಡಿ ದರದ ಈ ಕಲಿಗಾಲದಲ್ಲಿ ಯಾವ ಹೂಡಿಕೆ ಭದ್ರ ಹಾಗೂ ಉತ್ತಮ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ನಿವೃತ್ತಿ ಹೊಂದಿ ಮನೆಯಲ್ಲೇ ಕುಳಿತಿರುವ ಹಿರಿಯ ನಾಗರಿಕರ ಪಾಡು ಸ್ವಲ್ಪ ಕಷ್ಟದ್ದೇ. ಅವರವರ ಆಟೋ ಮತ್ತು ಔಷಧದ ಖರ್ಚಿನಷ್ಟಾದರೂ ಅವರು ಆದಾಯ ತೋರಿಸದಿದ್ದರೆ ಮನೆಯೊಳಗೇ ಇರಿಸು-ಮುರಿಸಾಗುವ ಪರಿ ಸ್ಥಿತಿ. ಜೀವನವಿಡೀ “ಇಪಿಎಸ್‌’ ಎಂಬ ಮಹಾ ಟೊಪ್ಪಿಯ ಸರಕಾರಿ ಸ್ಕೀಮಿಗೆ ದುಡ್ಡು ಕಟ್ಟಿದವರಿಗಂತೂ ಇವತ್ತು ತಮ್ಮ ಮೊಮ್ಮ ಕ್ಕಳಿಗೆ ಕಡ್ಲೆಕಾಯಿ ಕೊಡಿಸುವಷ್ಟು ದುಡ್ಡು ಕೂಡ ಸಿಗುತ್ತಿಲ್ಲ. ಸೂಟು ಬೂಟು ಧರಿಸಿದ ಟಿವಿ ನಿವಾಸಿ ಷೇರು ಜೋಯಿಷರು ದೈನಂದಿನ ಜೂಜಾಟಕ್ಕೆ ನಿಮ್ಮನ್ನು ಪ್ರೋತ್ಸಾಹಿಸುವ ಹೂಡಿಕೆಗಳಿಗೆ ಯಾವುದೇ ಭದ್ರತೆ ಇಲ್ಲ. ಭದ್ರತೆ ಇರುವ ಬ್ಯಾಂಕ್‌ ಎಫ್ಡಿಗಳಲ್ಲಿ ಡೀಸೆಂಟಾದ ಪ್ರತಿಫ‌ಲ ಇಲ್ಲ. ಭದ್ರತೆಯೂ ಇರುವ, ಹೆಚ್ಚುವರಿ ಪ್ರತಿಫ‌ಲವೂ ಇರುವ ಯೋಜನೆ ಯಾವುದಾದರೂ ಇದೆಯೇ ಎನ್ನುವುದು ಈವಾಗ ಎಲ್ಲರ ಪ್ರಶ್ನೆ.

ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಯೋಜನೆ ಸರಕಾರ ಪ್ರಾಯೋಜಕತ್ವದಿಂದ ಮಾತ್ರವೇ ಸಾಧ್ಯ. ಕೆಲ ವಾರಗಳ ಹಿಂದೆ ಬ್ಯಾಂಕ್‌/ ಪೋಸ್ಟಾಫೀಸುಗಳಲ್ಲಿ ದೊರೆಯುವ 8.3% ಪ್ರತಿಫ‌ಲದ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಂ ಯೋಜನೆಯ ಬಗ್ಗೆ ಚರ್ಚಿಸಿ ದ್ದೇವೆ. (ಹೌದು! ಇದು ಬ್ಯಾಂಕುಗಳಲ್ಲಿ ಖಂಡಿತವಾಗಿಯೂ ದೊರೆಯುತ್ತವೆ, ಸಂಶಯ ಬೇಡ) ಇದೀಗ ಎಲ್‌ಐಸಿಯ ವತಿಯಿಂದ ಅಂತಹದ್ದೇ ಇನ್ನೊಂದು 8.3% ಪ್ರತಿಫ‌ಲ ನೀಡುವ ಪ್ರಧಾನ ಮಂತ್ರಿ ವಯ ವಂದನ ಯೋಜನಾ. ಇದು ಹಿಂದೆ ಮಾರುಕಟ್ಟೆಯಲ್ಲಿ ಇದ್ದ ವರಿಷ್ಠಾ ಪೆನ್ಶನ್‌ ಯೋಜನೆಯ ಹಳೆ ಮದ್ಯ-ಹೊಸ ಬಾಟಲ್!

ಯಾರಿಗೆ?
ಪ್ರಧಾನ ಮಂತ್ರಿ ವಯ ವಂದನ ಯೋಜನಾ ಎನ್ನುವ ಈ ಯೋಜನೆಯು 60 ದಾಟಿದ ಹಿರಿಯ ನಾಗರಿಕರಿಗಾಗಿ ಮಾತ್ರ ಅನ್ವಯವಾಗುವ ವಿಶೇಷ ಪಿಂಚಣಿ ಯೋಜನೆ. ನೀವು ಹೂಡಿಕೆ ಮಾಡುವ ದಿನಾಂಕದಂದು ನಿಮಗೆ 60 ವರ್ಷ ಪೂರ್ಣಗೊಂಡಿರಬೇಕು. ಇಲ್ಲಿ ಹೂಡಿಕೆಗೆ ವಯಸ್ಸಿನ ಕನಿಷ್ಠ ಮಿತಿ 60; ಆದರೆ ಇಲ್ಲಿ ಗರಿಷ್ಠ ಮಿತಿ ಎಂಬುದು ಇಲ್ಲ.

ಯಾವಾಗ?
ಮೇ ನಾಲ್ಕನೇ ತಾರೀಕು, 2017ರಂದು ಬಿಡುಗಡೆಯಾದ ಈ ಪಿಂಚಣಿ ಯೋಜನೆ ಆ ದಿನಾಂಕದಿಂದ ಕೇವಲ ಒಂದು ವರ್ಷದ ಅವಧಿಯವರೆಗೆ ಮಾತ್ರವೇ ಲಭ್ಯವಿರುತ್ತದೆ. ಹಾಗಾಗಿ ಈ ಯೋಜನೆಯಲ್ಲಿ ದುಡ್ಡು ಹಾಕುವವರು ಮೇ 3, 2018ರ ಒಳಗಡೆ ಮಾಡಿಕೊಳ್ಳಬೇಕು. ಆ ಬಳಿಕ ಈ ಯೋಜನೆ ಇರುವುದಿಲ್ಲ.

ಅವಧಿ
ಇದೊಂದು 10 ವರ್ಷಗಳ ಯೋಜನೆ. ಹೂಡಿಕೆಯ ದಿನಾಂಕದಿಂದ ಹತ್ತು ವರ್ಷಗಳ ಕಾಲ ಈ ಹೂಡಿಕೆ ನಡೆಯುತ್ತದೆ. ಬಳಿಕ ಹೂಡಿಕಾ ಮೊತ್ತವನ್ನು ವಾಪಸ್‌ ನೀಡಲಾಗುತ್ತದೆ.

ಪಿಂಚಣಿ ಪ್ರತಿಫ‌ಲ
ಈ ಯೋಜನೆಯಡಿಯಲ್ಲಿ ಪೆನ್ಶನ್‌ ಪಡೆಯಲು 4 ಆಯ್ಕೆಗಳಿವೆ. ವಾರ್ಷಿಕ, ಅರೆವಾರ್ಷಿಕ, ತ್ತೈಮಾಸಿಕ ಅಥವಾ ಮಾಸಿಕ ಕಂತುಗಳಲ್ಲಿ ಪೆನ್ಶನ್‌ ಪಡೆಯಬಹುದು. ಸರಳ ಬಡ್ಡಿ ಲೆಕ್ಕದಲ್ಲಿ ನೋಡಿದರೆ ಪ್ರತಿಫ‌ಲವು ಈ ನಾಲ್ಕೂ ಆಯ್ಕೆಗಳಲ್ಲಿ ಬೇರೆಬೇರೆಯಾಗಿರುತ್ತದೆ. ವಾರ್ಷಿಕ ಕಂತುಗಳಲ್ಲಿ ಪೆನ್ಶನ್‌ ಪಡೆಯುವ ಆಯ್ಕೆ ಮಾಡಿದರೆ 8.3% ಪ್ರತಿಫ‌ಲ ದೊರೆಯುತ್ತದೆ. ಅರೆವಾರ್ಷಿಕ ಕಂತುಗಳಲ್ಲಿ ಪಿಂಚಣಿ ಪಡೆದರೆ 8.13%, ತ್ತೈಮಾಸಿಕ ಕಂತುಗಳಲ್ಲಿ ಪೆನ್ಶನ್‌ ಪಡೆದರೆ 8.04% ಹಾಗೂ ಮಾಸಿಕ ಕಂತುಗಳಲ್ಲಿ ಪಿಂಚಣಿ ಪಡೆದರೆ 8% ಪ್ರತಿಫ‌ಲ ಸಿಗುತ್ತದೆ.ವಾರ್ಷಿಕ ಕಂತುಗಳಲ್ಲಿ 8.3% ಪ್ರತಿಫ‌ಲ ನೀಡುವ ಈ ಆಯ್ಕೆ ಉತ್ತಮವೆಂದು ತೋರುತ್ತದೆ.

ಎಲ್ಲಿ ಸಿಗುತ್ತದೆ?
ಇದೊಂದು ಸರಕಾರಿ ಯೋಜನೆ ಹಾಗೂ ಇದು ಕೇವಲ ಎಲ್‌ಐಸಿಯ ಮೂಲಕ ಮಾತ್ರವೇ ಸಿಗುತ್ತದೆ. ಇದನ್ನು ಎಲ್‌ಐಸಿಯು ತನ್ನ ಒಂದು ಪಾಲಿಸಿಯ ರೂಪದಲ್ಲಿ (ಪ್ಲಾ 842) ಮಾರಾಟ ಮಾಡುತ್ತದೆ. ಇದನ್ನು ಎಲ್‌ಐಸಿಯಿಂದ ಆನ್‌ಲೈನ್‌ ಆಗಿಯೂ ಖರೀದಿ ಮಾಡಬಹುದು.

ಲಾಭ
ಈ ಯೋಜನೆಯಲ್ಲಿ ಅದರ ಹತ್ತು ವರ್ಷಗಳ ಅವಧಿ ಪೂರ್ತಿ ನಿಮ್ಮ ಆಯ್ಕೆಯ ಪೂರ್ವ ನಿಗದಿತ ಸಮಯಾ ನುಸಾರ (ಮಾಸಿಕ, ತ್ತೈಮಾಸಿಕ, ಅರೆವಾರ್ಷಿಕ ಹಾಗೂ ವಾರ್ಷಿಕ) ಪೆನ್ಶನ್‌ ಸಿಗುತ್ತಾ ಹೋಗುತ್ತದೆ. ಒಂದು ವೇಳೆ ಈ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರನ ಮೃತ್ಯು ಉಂಟಾದರೆ (ಸುಸೈಡ್‌ ಸಹಿತ) ಪಾಲಿಸಿ ಕೊನೆಗೊಂಡು ನಾಮಿನಿಗೆ ಹೂಡಿಕಾ ಮೊತ್ತವು ಸಲ್ಲುತ್ತದೆ. ಪಾಲಿಸಿಯು ಪೆನ್ಶನ್‌ ರೂಪದಲ್ಲಿ ಮುಂದುವರಿಯುವುದಿಲ್ಲ. ಅದಲ್ಲದೆ, ಇದು ಜೀವ ವಿಮಾ ನಿಗಮದಿಂದ ಬಿಡುಗಡೆಯಾದರೂ ಇದೊಂದು ವಿಮಾ ಯೋಜನೆಯಲ್ಲ. ಹಾಗಾಗಿ ಇಲ್ಲಿ ಬೇರಾವುದೇ ವಿಮಾ ಮೊತ್ತ ಪಾಲಿಸಿದಾರನಿಗೆ ಸಲ್ಲತಕ್ಕದ್ದಲ್ಲ. ಇದೊಂದು ಹೇಳಿಕೇಳಿ ಪೆನ್ಶನ್‌ ಯೋಜನೆ. ಒಂದು ವೇಳೆ ಹೂಡಿಕೆದಾರ ಯೋಜನೆಯ ಪೂರ್ತಿ ಅವಧಿಯಾದ 10 ವರ್ಷಗಳನ್ನು ಪೂರ್ತಿಗೊಳಿಸಿದರೆ ಆತನ ಕೈಗೆ ಕೊನೆಯ ಕಂತಿನ ಪೆನ್ಶನ್‌ ಜತೆಗೆ ಹೂಡಿಕಾ ಮೊತ್ತ ಬರುತ್ತದೆ, ಬೇರಾವ ಹೆಚ್ಚುವರಿ ಬೋನಸ್‌/ಗೀನಸ್‌ ಇರುವುದಿಲ್ಲ.

ಹೂಡಿಕೆ-ಪೆನ್ಶನ್‌ ಮೊತ್ತ
ಹೂಡಿಕೆ ಹಾಗೂ ಪೆನ್ಶನ್‌ ಮೊತ್ತಗಳು ಕಂತುಗಳ ಅವಧಿ ಯನ್ನು ಹೊಂದಿಕೊಂಡಿದೆ. ಕೆಳಗಿನ ಟೇಬಲ್‌ನಲ್ಲಿ ಕೆಲವು ಅಂಕಿ-ಅಂಶಗಳನ್ನು ನೀಡಲಾಗಿದೆ. ಉದಾಹರಣೆಗಾಗಿ, ಒಬ್ಟಾತ ಪಾಲಿಸಿದಾರನಿಗೆ ಮಾಸಿಕ ಪೆನ್ಶನ್‌ 5,000 ರೂ. ಬೇಕೆಂದಾದರೆ ಆತನು 7,50,000 ರೂ. ಹೂಡಿಕೆ ಮಾಡಬೇಕು ಅಥವಾ ಎಲ್‌ಐಸಿಯ ಭಾಷೆಯಲ್ಲಿ ಹೇಳುವುದಾರೆ ಅಷ್ಟು ಮೊತ್ತ ಕೊಟ್ಟು ಆ ಪಾಲಿಸಿಯನ್ನು ಖರೀದಿ ಮಾಡಬೇಕು. ಅಂತೆಯೇ ಅರೆಮಾಸಿಕ 6,000 ರೂ. ಪೆನ್ಶನ್‌ ಬೇಕಾದವರು 1,47,601 ರೂ. ನೀಡಿ ಅಂತಹ ಪಾಲಿಸಿಯನ್ನು ಖರೀದಿಸಬೇಕು. ಈ ಅಂಕಿ-ಅಂಶಗಳು ಜೀವವಿಮೆಯಂತೆ ವಯಸ್ಸು ಆಧರಿಸಿ ಬದಲಾಗುವುದಿಲ್ಲ. 60 ದಾಟಿದ ಎಲ್ಲರಿಗೂ ಇದು ಸಮಾನವಾಗಿ ಅನ್ವಯಿಸುತ್ತದೆ.

ಕನಿಷ್ಠ-ಗರಿಷ್ಠ ಮಿತಿ
ಕನಿಷ್ಠ ಪೆನ್ಶನ್‌ ಮೊತ್ತ ರೂ 1000 ಹಾಗೂ ಖರೀದಿ ಮೊತ್ತ ರೂ 150000. ಗರಿಷ್ಠ ಪೆನ್ಶನ್‌ ಮಾಸಿಕ ರೂ 5000 ಹಾಗೂ ಅದರ ಖರೀದಿ ಮೊತ್ತ ರೂ 1500000 ಆಗಿರುತ್ತದೆ. ಈ ಯೋಜನೆಯಲ್ಲಿ 15 ಲಕ್ಷ ರೂ.ಗಿಂತ ಜಾಸ್ತಿ ಹೂಡಲು ಬರುವುದಿಲ್ಲ. ಅಲ್ಲದೆ ಇಲ್ಲಿನ ಹೂಡಿಕೆ ಟೇಬಲ್‌ನಲ್ಲಿ ನೀಡಿದ ಉದಾಹರಣಾ ಅಂಕಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಕನಿಷ್ಠ-ಗರಿಷ್ಠ ಮಿತಿಗಳೊಳಗೆ ಎಷ್ಟಾದರೂ ಹೂಡಿಕೆ ಮಾಡಿ ತತ್ಸಮಾನ(ಪ್ರೋ ರೇಟಾ) ಪೆನ್ಶನ್‌ ಪಡೆಯಬಹುದು.

ಇಲ್ಲಿ ಹೂಡಿಕೆಯ ಅಥವಾ ಪೆನ್ಶನ್‌ನ ಗರಿಷ್ಠ ಮಿತಿಯ ಬಗ್ಗೆ ಮಾತನಾಡುವಾಗ ಈ ಮಿತಿಗಳು ಹೇಗೆ ಅನ್ವಯವಾಗುತ್ತವೆ ಎನ್ನುವುದನ್ನು ಕೂಡ ತಿಳಿದುಕೊಳ್ಳುವುದು ಅಗತ್ಯ. ಈ ಮಿತಿ ಒಂದು ಕೌಟುಂಬಿಕ ನೆಲೆಯಲ್ಲಿ ಅನ್ವಯವಾಗುತ್ತದೆಯೇ ಹೊರತು ಒಂದು ವೈಯಕ್ತಿಕ ನೆಲೆಯಲ್ಲಿ ಅಲ್ಲ. ಅಂದರೆ, ಒಬ್ಬರು ಮತ್ತು ಅವರ ಪತ್ನಿ/ಪತಿ ಹಾಗೂ ಅವಲಂಬಿತರು ಒಟ್ಟಾಗಿ ಈ ಗರಿಷ್ಠ ಮಿತಿಯಂತೆ ಹೂಡಿಕೆ ಮಾಡಬಹುದಾಗಿದೆ. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯೂ ವೈಯಕ್ತಿಕವಾಗಿ ಈ ಮಿತಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬಳಸುವಂತಿಲ್ಲ.

ಪೆನ್ಶನ್‌ ಪಾವತಿ: ಪೆನ್ಶನ್‌ ಮೊತ್ತವನ್ನು ಹೂಡಿಕೆಯ ದಿನಾಂಕದಿಂದ ಆರಂಭ ಗೊಂಡಂತೆ ವಾರ್ಷಿಕ, ಅರೆವಾರ್ಷಿಕ, ತ್ತೈಮಾಸಿಕ ಅಥವಾ ಮಾಸಿಕ ಕಂತುಗಳಲ್ಲಿ ನೀಡಲಾಗುತ್ತದೆ. ಪೆನ್ಶನ್‌ ಪಾವತಿಯನ್ನು ನೆಫr… ಬ್ಯಾಕ್‌ ವರ್ಗಾವಣೆ ಅಥವಾ ಆಧಾರ್‌ ಆಧಾರಿತ ಪಾವತಿ ಪದ್ಧತಿಯ ಮೂಲಕ ನಡೆಸಲಾಗುತ್ತದೆ.

ಸರೆಂಡರ್‌ ಮೊತ್ತ: ಒಮ್ಮೆ ಖರೀದಿ ಮಾಡಿದ ಪಾಲಿಸಿಯನ್ನು ಅವಧಿ ಮುಗಿಯುವ ತನಕ ಹಿಂಪಡೆಯುವಂತಿಲ್ಲ. ಆದರೆ ಸ್ವಂತ ಅಥವಾ ಗಂಡ/ಹೆಂಡತಿಗೆ ಯಾವುದೇ ಮಾರಣಾಂತಿಕ ಕಾಯಿಲೆ ಉಂಟಾದ ಸಂದರ್ಭದಲ್ಲಿ ಮೂಲ ಹೂಡಿಕೆಯ 98% ಮೊತ್ತವನ್ನು ವಾಪಸು ಪಡೆದು ಪಾಲಿಸಿಯನ್ನು ಸರೆಂಡರ್‌ ಮಾಡಬಹುದಾಗಿದೆ.

ಸಾಲ: ಪಾಲಿಸಿಗೆ 3 ವರ್ಷ ಸಂದ ಬಳಿಕ ಮೂಲ ಹೂಡಿಕೆಯ 75% ಸಾಲವನ್ನು ಈ ಪಾಲಿಸಿಯಿಂದ ಪಡೆಯಬಹುದಾಗಿದೆ. ಈ ಸಾಲದ ಮೇಲಿನ ಬಡ್ಡಿದರ ಆಗಿಂದಾಗ್ಗೆ ಪರಿಷ್ಕರಣೆಗೊಳ್ಳಲಿದೆ. ಸಧ್ಯದ ದರ 10% ಆಗಿದೆ. ಈ ಪಾಲಿಸಿಯಲ್ಲಿ ಬಡ್ಡಿ ದರವನ್ನು ಪಾವತಿಸ ಬೇಕಾದ ಪೆನ್ಶನ್‌ ಮೊತ್ತದಿಂದ ಕಳೆಯಲಾಗುತ್ತದೆ. ಆದರೆ ಸಾಲದ ಮೊತ್ತವನ್ನು ಪಾಲಿಸಿ ಮುಗಿಯುವಾಗಿನ ಅಂತಿಮ ಮೊತ್ತದಿಂದ ಕಳೆಯಲಾಗುತ್ತದೆ.

ಆದಾಯ ಕರ: ಪಾಲಿಸಿಯಲ್ಲಿ ಸಿಗುವ 8% ಪೆನ್ಶನ್‌ ಮೊತ್ತವು ಸಂಪೂರ್ಣ ವಾಗಿ ಆದಾಯ ಕರಕ್ಕೆ ಒಳಪಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆಯ ಮೇಲಾಗಲಿ, ಬರುವ ಪೆನ್ಶನ್‌ ಮೊತ್ತದ ಮೇಲಾಗಲಿ, ಯಾವುದೇ ಆದಾಯ ಕರ ವಿನಾಯಿತಿ ಇರುವುದಿಲ್ಲ.

ಫ್ರೀ-ಲುಕ್‌ ಅವಧಿ
ಜೀವ ವಿಮಾ ಪಾಲಿಸಿಗಳಿಗೆ ಇರುವಂತೆಯೇ ಈ ಪೆನ್ಶನ್‌ ಪಾಲಿಸಿಗೆ ಕೂಡಾ ಫ್ರೀ-ಲುಕ್‌ ಅವಧಿಯನ್ನು ಎಲ್‌ಐಸಿಯು ನೀಡಿದೆ. ಅಂದರೆ ಈ ಪಾಲಿಸಿ ಕೈಸೇರಿದ 15 ದಿನಗಳ ಒಳಗೆ ಅದು ಇಷ್ಟವಾಗದಿದ್ದಲ್ಲಿ ಅದನ್ನು ಹಿಂದಿರುಗಿಸಬಹುದು. ಆನ್‌-ಲೈನ್‌ ಖರೀದಿಯಾಗಿದ್ದಲ್ಲಿ ಈ ಅವಧಿ 30 ದಿನಗಳು. ಈ ರೀತಿ ಹಿಂದಿರುಗಿಸಿದ ಪಾಲಿಸಿಯ ಮೇಲೆ ಸ್ಟ್ಯಾಂಪ್‌ ಡ್ನೂಟಿ ವೆಚ್ಚ ಕಳೆದು ಉಳಿದ ಮೊತ್ತವನ್ನು ಮರುಪಾವತಿ ಮಾಡಲಾಗುವುದು.

ವಿಶ್ಲೇಷಣೆ
ಸದ್ಯದ ಬ್ಯಾಂಕ್‌ ಬಡ್ಡಿಯ ಪರಿಸ್ಥಿತಿಯಲ್ಲಿ ಇಂತಹ ಸರಕಾರಿ ಯೋಜನೆಗಳ ಅಗತ್ಯವಿದೆ. 1 ವರ್ಷದ ಎಫ್ಡಿಯ ಮೇಲೆ ಹಿರಿಯ ನಾಗರಿಕರಿಗೆ ಭಾರತೀಯ ಸ್ಟೇಟ್‌ಬ್ಯಾಂಕ್‌ 7.25% ಬಡ್ಡಿ ನೀಡುತ್ತದೆ. 10 ವರ್ಷಕ್ಕಾದರೆ ಅದು ಕೇವಲ 6.75%. ಆದರೆ ಇಲ್ಲಿ ಎಲ್‌ಐಸಿಯು 10 ವರ್ಷಗಳ ಮಟ್ಟಿಗೆ 8.3% ಪ್ರತಿಫ‌ಲವನ್ನು ನೀಡುತ್ತದೆ. ಹಾಗಾಗಿ ಇದು ಒಂದು ಉತ್ತಮ ಯೋಜನೆ ಎನ್ನುವುದರಲ್ಲಿ ಸಂಶಯವಿಲ್ಲ. ಸರಕಾರಿ ಯೋಜನೆ ಯಾದ ಕಾರಣ ಅಲ್ಲದೆ ಎಲ್‌ಐಸಿಯೂ ಒಂದು ಅತ್ಯುತ್ತಮ ಸರಕಾರಿ ವಿತ್ತೀಯ ಸಂಸ್ಥೆಯಾದ ಕಾರಣ ಭದ್ರತೆಯ ಮಟ್ಟಿಗೆ ಯಾವುದೇ ಹೆದರಿಕೆ ಇಲ್ಲ.

ಇಲ್ಲಿಯ ಮುಖ್ಯ ಸಮಸ್ಯೆ ಇದರ ಹೂಡಿಕಾ ಮಿತಿ. ಇಲ್ಲಿ ರೂ 15 ಲಕ್ಷ ಮೀರಿ ಹೂಡಿಕೆ ಮಾಡುವಂತಿಲ್ಲ; ಅದು ಕೂಡಾ ಒಂದು ಕುಟುಂಬದ ಲೆಕ್ಕದಲ್ಲಿ. ಹಾಗಾಗಿ ಒಂದು ಕುಟುಂಬದಲ್ಲಿನ ಹಿರಿಯ ನಾಗರಿಕರು 15 ಲಕ್ಷ ರೂ. ವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕೆಲ ವಾರಗಳ ಹಿಂದೆ ಇದೇ ಕಾಕು ಕಾಲಂನಲ್ಲಿ ಬ್ಯಾಂಕು ಮತ್ತು ಪೋಸ್ಟಾಫೀಸುಗಳಲ್ಲಿ ಸೀನಿರ್ಯ ಸಿಟಿಜೈನ್‌ ಸೇವಿಂಗ್ಸ್‌ ಸ್ಕೀಂ (ಎಸ್‌ಸಿ ಎಸ್‌ಎಸ್‌) ದೊರೆಯುತ್ತದೆ ಎಂದು ಬರೆದಿ¨ªೆ. ಅದರಲ್ಲೂ ಪ್ರತಿಫ‌ಲ 8.3%, ಇಲ್ಲೂ ಪ್ರತಿಫ‌ಲ 8.3%. ಅಲ್ಲಿನ ಮಿತಿ ವೈಯಕ್ತಿಕ ನೆಲೆಯಲ್ಲಿ ರೂ 15 ಲಕ್ಷ ಹಾಗೂ ಇಲ್ಲಿನ ಮಿತಿ ಕೌಟುಂಬಿಕ ನೆಲೆಯಲ್ಲಿ 15 ಲಕ್ಷ ರೂ. ಅವರವರ ವಯಸ್ಸು ಮತ್ತು ಸಂದರ್ಭ ನೋಡಿಕೊಂಡು ಎರಡೂ ಎಡೆಗಳಲ್ಲಿ ಗರಿಷ್ಠ ಹೂಡಿಕೆ ಮಾಡಿಕೊಳ್ಳುವುದು ಒಳ್ಳೆಯದು. ಅಲ್ಲದೆ, ಈ ಯೋಜನೆ 3 ಮೇ, 2018ಕ್ಕೆ ಬಂದ್‌ ಆಗುವ ವಿಚಾರವನ್ನು ಮರೆಯದಿರಿ, ಮರೆತು ಮರುಗದಿರಿ, ಮರುಗಿ ಕೊರಗದಿರಿ, ಕೊರಗಿ ನಿರಾಶರಾಗದಿರಿ! ಮತ್ತು ನಿರ್ಮಾ ಜಾಹೀರಾತಿನಲ್ಲಿ ಹೇಳುವಂತೆ “ತ್ವರೆ ಮಾಡಿರಿ’

ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.