TMC ತ್ಯಜಿಸುವುದಾಗಿ ಹೇಳಿದ ಮುಕುಲ್ ರಾಯ್ ಪಕ್ಷದಿಂದ ವಜಾ
Team Udayavani, Sep 25, 2017, 3:25 PM IST
ಹೊಸದಿಲ್ಲಿ : ತೃಣಮೂಲ ಕಾಂಗ್ರೆಸ್ ಪಕ್ಷ ಇಂದು ಸೋಮವಾರ ತನ್ನ ಪಕ್ಷದ ಹಿರಿಯ ನಾಯಕ ಮುಕುಲ್ ರಾಯ್ ಅವರನ್ನು ಅಮಾನತು ಮಾಡಿದೆ. ಇದಕ್ಕೆ ಮುನ್ನ ಮುಕುಲ್ ರಾಯ್ ಅವರು ತಾನನು ಪಕ್ಷವನ್ನು ತ್ಯಜಿಸುವುದಾಗಿ ಘೋಷಿಸಿದ್ದರು.
ಮುಕುಲ್ ರಾಯ್ ಅವರು ಪಕ್ಷದ ಓರ್ವ ಸ್ಥಾಪಕ ಸದಸ್ಯರು. ಪಶ್ಚಿಮ ಬಂಗಾಲದಲ್ಲಿ ಎದುರಾಳಿ ಪಕ್ಷದೊಂದಿಗೆ ನಂಟು ಹೊಂದಿರುವ ಕಾರಣಕ್ಕೆ ರಾಯ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಟಿಎಂಸಿ ಹೇಳಿದೆ.
ತನ್ನ ಪಕ್ಷದ ಯಾರೇ ಆದರೂ ವಿರೋಧ ಪಕ್ಷಗಳೊಂದಿಗೆ ಸಂಬಂಧ ಹೊಂದಿರುವುದನ್ನು ಪಕ್ಷವು ಎಂದೂ ಸಹಿಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.
ದುರ್ಗಾ ಪೂಜೆಯ ಬಳಿಕ ತಾನು ಟಿಎಂಸಿಯನ್ನು ತ್ಯಜಿಸುವುದಾಗಿಯೂ ತನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ ಮುಕುಲ್ ರಾಯ್ ಹೇಳಿದ್ದರು. ಅದಾಗಿ ಕೆಲವೇ ತಾಸುಗಳಲ್ಲಿ ಟಿಎಂಸಿ ರಾಯ್ ಅವರನ್ನು ಪಕ್ಷದಿಂದ ವಜಾ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು