ಶಿವಾಜಿ ಪ್ರತಿಮೆ ಬೇಡ; ಅರ್ಜಿಗೆ ಸಾರ್ವಜನಿಕರ ಭಾರಿ ಬೆಂಬಲ 


Team Udayavani, Oct 4, 2017, 11:43 AM IST

5.jpg

ಮುಂಬಯಿ: ಎಲ್ಫಿನ್‌ಸ್ಟನ್‌ ಕಾಲು¤ಳಿತದ ಬಳಿಕ ಲೋಕಲ್‌ ರೈಲು ಸೇವೆ ಸುಧಾರಣೆಯಾಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಅರಬಿ ಸಮುದ್ರದಲ್ಲಿ ಶಿವಾಜಿ ಸ್ಮಾರಕ ನಿರ್ಮಿಸಲು ಖರ್ಚು ಮಾಡುವ 3,600 ಕೋ. ರೂ.ವನ್ನು ಮುಂಬಯಿಯ ಲೋಕಲ್‌ ರೈಲು ಸೇವೆ ಸುಧಾರಿಸಲು ಬಳಸಿಕೊಳ್ಳಿ ಎಂದು ಆನ್‌ಲೈನ್‌ ಅರ್ಜಿಯೊಂದರಲ್ಲಿ ಸರಕಾರವನ್ನು ಆಗ್ರಹಿಸಲಾಗಿದೆ. ಮೂರೇ ದಿನದಲ್ಲಿ ಈ ಅರ್ಜಿಗೆ 25,000ಕ್ಕೂ ಹೆಚ್ಚಿನ ಜನರ ಬೆಂಬಲ ಸಿಕ್ಕಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಈ ಆನ್‌ಲೈನ್‌ ಅರ್ಜಿ ವೈರಲ್‌ ಆಗಿದೆ. ವಿಪಿನ್‌ ವಿಜಯನ್‌ ಎಂಬವರು ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಸಚಿವ ಪಿಯೂಷ್‌ಗೋಯಲ್‌ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ಅವರಿಗೆ ಈ ಮನವಿ ಬರೆದಿದ್ದಾರೆ. 

ಮುಂಬಯಿಯ ಲೋಕಲ್‌ ರೈಲು ಸೇವೆ ಉತ್ತಮ ಪಡಿಸುವ ಬೇಡಿಕೆ ಕೇಳಿ ಬಂದಾಗಲೆಲ್ಲ ಸರಕಾರ ಹಣಕಾಸಿನ ಕೊರತೆಯಿದೆ ಎಂದು ಸಬೂಬು ಹೇಳುತ್ತಿದೆ. ಆದರೆ ಅರಬಿ ಸಮುದ್ರದ ನಡುವೆ ಶಿವಾಜಿಯ ಸ್ಮಾರಕ ನಿರ್ಮಿಸಲು 3,600 ಕೋ. ರೂ. ಮಂಜೂರು ಮಾಡಿದೆ. ಇದು ಜನರ ತೆರಿಗೆ ಹಣವನ್ನು ಗಟಾರಕ್ಕೆ ಚೆಲ್ಲಿದಂತೆ. ಸ್ಮಾರಕದಿಂದ ಯಾವುದೇ ಪ್ರಯೋಜನವಿಲ್ಲ. ಮೊದಲು ಆಗಬೇಕಿರುವುದು ಜನಸಾಮಾನ್ಯರ ಓಡಾಟದ ಮಾಧ್ಯಮ ವಾಗಿರುವ ಲೋಕಲ್‌ ರೈಲು ಸೇವೆಯ ಸುಧಾರಣೆ ಎಂದು ವಿಪಿನ್‌ ವಿಜಯನ್‌ ಈ ಅರ್ಜಿಯಲ್ಲಿ ಹೇಳಿದ್ದಾರೆ. 

ಸ್ಮಾರಕ ನಿರ್ಮಿಸದಿದ್ದರೂ ಶಿವಾಜಿ ಮಹಾರಾಜ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತಾನೆ. ಆದರೆ ಮೊದಲು ಆಗಬೇಕಿರುವುದು ಜನರ ಅಮೂಲ್ಯ ಪ್ರಾಣಗಳನ್ನು ಉಳಿಸುವ ಕೆಲಸ. ಎಲ್ಲಿಯಾದರೂ ಶಿವಾಜಿ ಮಹಾರಾಜ ಇಂದು ಬದುಕಿದ್ದರೆ ನನಗಾಗಿ ಸ್ಮಾರಕ ನಿರ್ಮಿಸಬೇಡಿ, ಆ ಹಣವನ್ನು ಜನರ ಪ್ರಾಣ ಉಳಿಸಲು ಉಪಯೋಗಿಸಿ ಎಂದು ಹೇಳುತ್ತಿದ್ದ ಎಂದು ವಿಪಿನ್‌ ವಿಜಯನ್‌ ಹೇಳಿದ್ದಾರೆ. 

ಇನ್ನೊಂದು ಆನ್‌ಲೈನ್‌ ಮನವಿಯಲ್ಲಿ ಬುಲೆಟ್‌ ಟ್ರೈನ್‌ಗಿಂತ ಮುಂಬಯಿಯ ಕಿಕ್ಕಿರಿದು ತುಂಬುವ ಲೋಕಲ್‌ ರೈಲು ಸೇವೆಯನ್ನು ಮೇಲ್ದರ್ಜೆಗೇರಿಸುವುದು ಮೊದಲ ಆದ್ಯತೆಯಾಗಬೇಕೆಂದು ಹೇಳಿದೆ. ಶ್ರೇಯಾ ಚವಾಣ್‌ ಎಂಬ 12ನೇ ತರಗತಿ ವಿದ್ಯಾರ್ಥಿನಿ ಮುಖ್ಯಮಂತ್ರಿಗೆ ಮಾಡಿರುವ ಮನವಿಯಲ್ಲಿ ಬುಲೆಟ್‌ ರೈಲು ಬೇಡ ಉತ್ತಮ ಲೋಕಲ್‌ ರೈಲುಗಳ ಕೊಟ್ಟರೆ ಸಾಕು ಎಂದಿದ್ದಾಳೆ. ಇದಕ್ಕೆ ಸುಮಾರು 12,000 ಮಂದಿ ಸಹಿ ಹಾಕಿದ್ದಾರೆ.

ಟಾಪ್ ನ್ಯೂಸ್

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.